ಮಂಡ್ಯ/ರಾಮನಗರ , ಜುಲೈ 15, 2023: ಸ್ಥಳೀಯ ಸಮುದಾಯಗಳ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡುವುದನ್ನು ಮುಂದುವರೆಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮಂಡ್ಯ ಜಿಲ್ಲೆಯ ಕೀಲಾರದಲ್ಲಿ ಸಮುದಾಯ ಆಧಾರಿತ ನೀರು ಶುದ್ಧೀಕರಣ ಘಟಕವನ್ನು ಉದ್ಘಾಟಿಸಿದೆ.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಟಿಕೆಎಂ ನ ಉಪ ಮಹಾಪ್ರಬಂಧಕ ರೋಶನ್ ಆರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕುಡಿಯುವ ನೀರಿನ ಘಟಕದ ತುರ್ತು ಅಗತ್ಯವನ್ನು ಪರಿಗಣಿಸಿ, ಈ ಸೌಲಭ್ಯವು ಸಮುದಾಯಕ್ಕೆ ಜೀವನಾಡಿಯಾಗಿದೆ. ಆ ಮೂಲಕ ಜನರಿಗೆ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಒದಗಿಸಲಿದೆ.
ಇತ್ತೀಚೆಗೆ ಸ್ಥಾಪಿಸಲಾದ ಘಟಕವು ಗಂಟೆಗೆ 1000 ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಮಗ್ರ 6-ಹಂತದ ಶುದ್ಧೀಕರಣ ಪ್ರಕ್ರಿಯೆ ಮತ್ತು ರಿಯಲ್ ಟೈಮ್ ನೀರಿನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಒಟ್ಟು ಕರಗಿದ ಘನವಸ್ತುಗಳು (ಟಿಡಿಎಸ್) ಮತ್ತು ಪಿಎಚ್ ಮೌಲ್ಯದ ಬಗ್ಗೆ ಮೌಲ್ಯಯುತ ಮಾಹಿತಿಯನ್ನೂ ಸಹ ನೀಡಲಿದೆ. ಇದಲ್ಲದೆ ಘಟಕವು ಸೌರ ವಿದ್ಯುತ್ ವ್ಯವಸ್ಥೆಗಳು, ಬ್ಯಾಕಪ್ ಪವರ್ ಪರಿಹಾರಗಳು ಮತ್ತು ಪರಿಣಾಮಕಾರಿ ತ್ಯಾಜ್ಯನೀರು ನಿರ್ವಹಣಾ ಕಾರ್ಯವಿಧಾನವನ್ನು ಹೊಂದಿದೆ.
ಘಟಕದ ಸುಗಮ ಕಾರ್ಯಾಚರಣೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಟಿಕೆಎಂ ಮೀಸಲಾದ ಏಜೆನ್ಸಿಯೊಂದಿಗೆ 15 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದವು ಫಲಾನುಭವಿಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಾತರಿಪಡಿಸುತ್ತದೆ. ಈ ಕಾರ್ಯಕ್ರಮದ ದೀರ್ಘಕಾಲೀನ ಕಾರ್ಯಸಾಧ್ಯತೆಯನ್ನು ಎತ್ತಿಹಿಡಿಯುತ್ತದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಮತ್ತು ಸಮುದಾಯದೊಂದಿಗಿನ ಟಿಕೆಎಂನ ಸಹಯೋಗವು ಅಂತಹ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರಲ್ಲೂ ಮಾಲೀಕತ್ವದ ಪ್ರಜ್ಞೆ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಬೆಳೆಸಿದೆ.
ಒಟ್ಟಾರೆಯಾಗಿ, ಟಿಕೆಎಂ ಇಲ್ಲಿಯವರೆಗೆ 46 ನೀರಿನ ಘಟಕಗಳನ್ನು ಸ್ಥಾಪಿಸಿದೆ, ಇದು ಭಾರತದಾದ್ಯಂತ 285 ಹಳ್ಳಿಗಳಲ್ಲಿ ವಾಸಿಸುವ 3.1 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಮಹತ್ವದ ಮೈಲಿಗಲ್ಲು ಸಮುದಾಯದ ಸದಸ್ಯರ ಯೋಗಕ್ಷೇಮಕ್ಕೆ ಆದ್ಯತೆ ನೀಡುವಲ್ಲಿ ಟಿಕೆಎಂನ ಅಚಲ ಸಮರ್ಪಣೆಗೆ ಉದಾಹರಣೆಯಾಗಿದೆ, ಅಂತಿಮವಾಗಿ ಅವರ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ಮಂಡ್ಯ ವಿಧಾನಸಭಾ ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ, ಉತ್ತಮ ಆರೋಗ್ಯವನ್ನು ಉತ್ತೇಜಿಸಲು ಶುದ್ಧ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ಮಾನವನ ಉಳಿವಿಗೆ ಮೂಲಭೂತ ಅವಶ್ಯಕತೆಯಾಗಿದೆ. ಎಲ್ಲಾ ವ್ಯಕ್ತಿಗಳಿಗೆ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ . ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಲು, ನೈರ್ಮಲ್ಯವನ್ನು ಪ್ರತಿಪಾದಿಸಲು ಮತ್ತು ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಸುಗಮಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿರುವ ಟಿಕೆಎಂನಂತಹ ಕಾರ್ಪೊರೇಟ್ ಗಳ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಲು ನಾವು ಸಂತೋಷಪಡುತ್ತೇವೆ. ಹೊಸದಾಗಿ ಸ್ಥಾಪಿಸಲಾದ ನೀರು ಶುದ್ಧೀಕರಣ ಘಟಕವು ಸ್ಥಳೀಯ ಸಮುದಾಯದ ಒಟ್ಟಾರೆ ಆರೋಗ್ಯ ಫಲಿತಾಂಶಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಆ ಮೂಲಕ ಆರೋಗ್ಯಕರ ಸಮಾಜದ ಸೃಷ್ಟಿಗೆ ಕೊಡುಗೆ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಕಂಟ್ರಿ ಹೆಡ್ ಮತ್ತು ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ವಿಕ್ರಮ್ ಗುಲಾಟಿ, “ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಸುಧಾರಿಸುವುದು ಯಾವಾಗಲೂ ಆರೋಗ್ಯಕರ ಸಮುದಾಯವನ್ನು ಉತ್ತೇಜಿಸುವ ನಮ್ಮ ಧ್ಯೇಯದಲ್ಲಿ ಮುಂಚೂಣಿಯಲ್ಲಿದೆ. ಸಮುದಾಯ ಆಧಾರಿತ ನೀರು ಶುದ್ಧೀಕರಣ ಘಟಕಗಳ ನಿಯೋಜನೆಯನ್ನು ವಿಸ್ತರಿಸುವ ಮೂಲಕ, ಸಮುದಾಯದ ತಕ್ಷಣದ ಅಗತ್ಯಗಳನ್ನು ಪೂರೈಸುವ ಸ್ಕೇಲೆಬಲ್ ಪರಿಹಾರಗಳನ್ನು ಒದಗಿಸುವಲ್ಲಿ ನಾವು ಗಮನಾರ್ಹ ದಾಪುಗಾಲು ಇಡುತ್ತಿದ್ದೇವೆ. ವ್ಯಕ್ತಿಗಳು ಮತ್ತು ಸಮುದಾಯಗಳ ಜೀವನದಲ್ಲಿ ನಿಜವಾಗಿಯೂ ವ್ಯತ್ಯಾಸ ಮತ್ತು ಸಕಾರಾತ್ಮಕ ಪರಿಣಾಮ ಬೀರುವ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಾವು ಶ್ರಮಿಸುತ್ತಿದ್ದೇವೆ ಎಂದರು.
2001 ರಿಂದ ಸಿಎಸ್ಆರ್ ಟಿಕೆಎಂನ ತತ್ವಶಾಸ್ತ್ರದ ಅವಿಭಾಜ್ಯ ಅಂಗವಾಗಿ ಉಳಿದಿದೆ. ಸ್ಕೇಲೆಬಿಲಿಟಿ ಮತ್ತು ಸುಸ್ಥಿರತೆಗೆ ಬಲವಾದ ಒತ್ತು ನೀಡುವುದರೊಂದಿಗೆ, ಟಿಕೆಎಂ ಮತ್ತು ಅದರ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ಚಟುವಟಿಕೆಗಳು ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ರಸ್ತೆ ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿ ಎಂಬ ಐದು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಸುತ್ತ ಕೇಂದ್ರೀಕೃತವಾಗಿವೆ. ಟಿಕೆಎಂನ ಸಿಎಸ್ಆರ್ ಚಟುವಟಿಕೆಗಳು ಸಮುದಾಯಗಳ ಅಗತ್ಯಗಳು ಮತ್ತು ರಾಷ್ಟ್ರೀಯ ಆದ್ಯತೆಗಳೊಂದಿಗೆ ಎಚ್ಚರಿಕೆಯಿಂದ ಹೊಂದಿಕೆಯಾಗಿವೆ. ಸಮಾಜಕ್ಕೆ ಅರ್ಥಪೂರ್ಣ ಮತ್ತು ಪರಿಣಾಮಕಾರಿ ಕೊಡುಗೆಯನ್ನು ನೀಡುತ್ತಿವೆ.