ವರದಿ -ಸದಾನಂದ
ಶಿಡ್ಲಘಟ್ಟ: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾದ ಜಲ ಜೀವನ್ ಮಿಷನ್ ದೇಶದ ಮೂಲೆ ಮೂಲೆಗೆ ತಲುಪಿಸುವ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಮನೆಗೂ ಶುದ್ಧ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಯು ಸಹ ಸಂಕಲ್ಪ ಮಾಡಿದ್ದು ಈಗಾಗಲೇ ಹಲವು ಕಡೆ ಈ ಯೋಜನೆ ಜಾರಿಯಲ್ಲಿದ್ದು ಅದರ ಭಾಗವಾಗಿ ಭಾನುವಾರ ಗೊರಮಡಗು ಗ್ರಾಮದಲ್ಲಿ ಹೊಸ ಬೋರ್ವೆಲ್ ಕೋರೆಸಲಾಗಿದೆ ಉತ್ತಮ ನೀರು ಸಿಕ್ಕಿದ ಸಂತಸಕ್ಕೆ ಗ್ರಾಮದ ಶ್ರೀ ಗಂಗಾಭವಾನಿ ದೇವಾಲಯ ನಿರ್ಮಾಣಕ್ಕೆ ದೇವಾಲಯದ ಟ್ರಸ್ಟ್ ಮುಖಂಡರಿಗೆ 50,000 ಸಾವಿರ ರೂಗಳ ಚೆಕ್ ವಿತರಿಸಲಾಯಿತು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿಕೆ ಮಂಜುನಾಥ್ ಹೇಳಿದರು.
ಕೊತ್ತನೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಉದ್ದೇಶ ಆಗಿದ್ದು ಇದರ ಭಾಗವಾಗಿ ಪ್ರತ್ಯೇಕವಾಗಿ ಬೋರ್ವೆಲ್ ಕೊರೆಸಿ ಪೈಪ್ ಲೈನ್ ಅಳವಡಿಸಿ ನೀರು ಸಂಗ್ರಹಣೆ ಮಾಡಲು ಬೃಹತ್ ಸಂಪು ವ್ಯವಸ್ಥೆ ಮಾಡಲಾಗುವುದು ಎಂದು ಕೊತ್ತನೂರು ಯುವ ಮುಖಂಡ ನವೀನ್ ಹೇಳಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್, ಡಿಎಸ್ಎಸ್ ನಾರಾಯಣಸ್ವಾಮಿ,ಸದಸ್ಯ ವೆಂಕಟರೋಣಪ್ಪ,ಮುಖಂಡ ಮುನಿವೀರಪ್ಪ, ಮಂಜುನಾಥ್,ಡಿಶ್ ಮಂಜುನಾಥ್, ನಾರಾಯಣಸ್ವಾಮಿ,ಗೆಂಗೇನಹಳ್ಳಿ ನಾರಾಯಣಸ್ವಾಮಿ, ಸತ್ಯನಾರಯಣ,ಹರೀಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
