ಕಮಲನಗರ ತಾಲೂಕಿನ ಚಿಕ್ಲಿ (ಯು) ಗ್ರಾಮದಲ್ಲಿ ಪ್ರೌಢ ಶಾಲೆ ಮಂಜೂರು ಮಾಡುವುದು, ಸರಕಾರದಿಂದ ಮಂಜೂರಾಗಿರುವ ವಿವಿಧ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಪಂಚಾಯತ್ಗೆ ಹಸ್ತಾಂತರ ಮಾಡುವ ಕುರಿತು. ಅದೇ ರೀತಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾಗಿರುವ ಅನುದಾನ ಶಾಸಕರ ವಿಳಂಬದ ಕಾರಣ ಫಲಾನುಭವಿಗಳಿಗೆ ವಂಚಿತರಾಗಿದ್ದು, ಇದರಿಂದ ಅನುದಾನ ಮಂಜೂರು ಮಾಡುವ ಕುರಿತು ಇಂದು ಮುಖ್ಯಮಂತ್ರಿಗಳಿಗೆ ಭಾಲ್ಕಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಎಂ.ಡಿ ಗುಲಾಮ ದಸ್ತಗಿರ ಅವರು ಮನವಿ ಸಲ್ಲಿಸಿದ್ದರು.
