ದೇವನಹಳ್ಳಿ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿ ದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೇಸಿ ಮುನಿ ವೆಂಕಟರಮಣ ಅಭಿಪ್ರಾಯಿಸಿದರು.
ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಹಾಗೂ ಜೆಸಿಐ ವಿಜಯಪುರ ಹಾಗೂ ನವೋದಯ ನರ್ಸಿಂಗ್ ಹೋಮ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಇವರುಗಳ ಸಂಯುಕ್ತ ಆಶಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾ ಟಿಸಿ ಮಾತನಾಡಿ, ರವರು ಸಾರ್ವಜನಿಕರು ಈ ಒಂದು ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಜಿಸಿಐನ ವಲಯ ಉಪಾಧ್ಯಕ್ಷರಾದ ನೆಲ್ಸನ್ ಡಿಸೋಜರವರು ಮಾತನಾಡಿ ಇಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಸೀನಿಯರ್ ಚೇಂಬರ್ ಹಾಗೂ ಜೆಸಿಐ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾಕ್ಟರ್ ಶಿವಕುಮಾರ್ ಅವರು ಈ ಒಂದು ಶಿಬಿರದಲ್ಲಿ ತಪಾಸಣೆಗೆ ಒಳಪಡುವವರಿಗೆ ಮುಂದಿನ ದಿನಗಳಲ್ಲಿ ಯಾವುದೇ ಚಿಕಿತ್ಸೆ ಪಡೆಯಲು ಶೇಕಡ 20ರಷ್ಟು ರಿಯಾಯಿತಿ ನೀಡುವುದಾಗಿ ನರ್ಸಿಂಗ್ ಹೋಮ್ ನ ವೈದ್ಯಾಧಿಕಾರಿಗಳು ತಿಳಿಸಿದ್ದು, ಈ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಹರೀಶ್ ರವರು ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೇಸಿ ಮುನಿವೆಂಕಟರ ಮಣ ರವರು ನಮ್ಮ ಸಂಸ್ಥೆಗಳು ಸಾರ್ವಜನಿಕವಾಗಿ ಹಲ ವಾರು ಜನಪಯೋಗಿ ಕಾರ್ಯಕ್ರಮ ಗಳನ್ನು ಮಾಡಿ ಕೊಂಡು ಬಂದಿದ್ದು ಸಾರ್ವಜನಿಕರು ಉತ್ತಮವಾಗಿ ಸ್ಪಂದನೆ ನೀಡುತ್ತಿ ದ್ದಾರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಇದಕ್ಕೆ ಸಾರ್ವಜನಿ ಕರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ ನಿರ್ದೇಶಕರಾದ ಎಂ. ಆರ್. ಜಯಶೀಲ, ಶ್ರೀ ಮೌಲಾನ ರವರು, ಇಲಿಯಾಸ್ ರವರು ಮಾಜಿ ಅಧ್ಯಕ್ಷರಾದ ಜೆ ಆರ್ ಮುನಿವೀರಣ್ಣ, ಎನ್ ಸುಬ್ರಮಣ್ಯ ಶೆಟ್ಟಿ, ಪುರಸಭಾ ಸದಸ್ಯರು ಹಾಗೂ ಜೇಸಿಐ ಖಜಾಂಚಿ ಬೈರೇಗೌಡರು ಹಾಗೂ ಯೋಜನಾ ನಿರ್ದೇಶಕರಾದ ಅನೀಸ್ ಉರ್ ರೆಹಮಾನ್, ಸಹ ಯೋಜನಾ ನಿರ್ದೇಶಕ ಎನ್. ಕೆ. ಸತ್ಯನಾರಾಯಣ್ ರವರು ಇನ್ನಿತರರು ಉಪಸ್ಥಿತರಿದ್ದು, ಸಂಘಟನಾ ಕಾರ್ಯದರ್ಶಿ ಆನಂದ್ ರವರು ವಂದಿಸಿದರು.
ಕೊಬ್ಬಿನಂಶವಿರುವ ಆಹಾರವನ್ನು ಮಿತಿಗೊಳಿಸಿ ಆರೋಗ್ಯ ಕಡೆ ಕಾಳಜಿವಹಿಸಿ : ಮುನಿ ವೆಂಕಟರಮಣ
ದೇವನಹಳ್ಳಿ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿ ದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೇಸಿ ಮುನಿ ವೆಂಕಟರಮಣ ಅಭಿಪ್ರಾಯಿಸಿದರು.
ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಹಾಗೂ ಜೆಸಿಐ ವಿಜಯಪುರ ಹಾಗೂ ನವೋದಯ ನರ್ಸಿಂಗ್ ಹೋಮ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಇವರುಗಳ ಸಂಯುಕ್ತ ಆಶಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾ ಟಿಸಿ ಮಾತನಾಡಿ, ರವರು ಸಾರ್ವಜನಿಕರು ಈ ಒಂದು ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಜಿಸಿಐನ ವಲಯ ಉಪಾಧ್ಯಕ್ಷರಾದ ನೆಲ್ಸನ್ ಡಿಸೋಜರವರು ಮಾತನಾಡಿ ಇಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಸೀನಿಯರ್ ಚೇಂಬರ್ ಹಾಗೂ ಜೆಸಿಐ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾಕ್ಟರ್ ಶಿವಕುಮಾರ್ ಅವರು ಈ ಒಂದು ಶಿಬಿರದಲ್ಲಿ ತಪಾಸಣೆಗೆ ಒಳಪಡುವವರಿಗೆ ಮುಂದಿನ ದಿನಗಳಲ್ಲಿ ಯಾವುದೇ ಚಿಕಿತ್ಸೆ ಪಡೆಯಲು ಶೇಕಡ 20ರಷ್ಟು ರಿಯಾಯಿತಿ ನೀಡುವುದಾಗಿ ನರ್ಸಿಂಗ್ ಹೋಮ್ ನ ವೈದ್ಯಾಧಿಕಾರಿಗಳು ತಿಳಿಸಿದ್ದು, ಈ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಹರೀಶ್ ರವರು ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೇಸಿ ಮುನಿವೆಂಕಟರ ಮಣ ರವರು ನಮ್ಮ ಸಂಸ್ಥೆಗಳು ಸಾರ್ವಜನಿಕವಾಗಿ ಹಲ ವಾರು ಜನಪಯೋಗಿ ಕಾರ್ಯಕ್ರಮ ಗಳನ್ನು ಮಾಡಿ ಕೊಂಡು ಬಂದಿದ್ದು ಸಾರ್ವಜನಿಕರು ಉತ್ತಮವಾಗಿ ಸ್ಪಂದನೆ ನೀಡುತ್ತಿ ದ್ದಾರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಇದಕ್ಕೆ ಸಾರ್ವಜನಿ ಕರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ ನಿರ್ದೇಶಕರಾದ ಎಂ. ಆರ್. ಜಯಶೀಲ, ಶ್ರೀ ಮೌಲಾನ ರವರು, ಇಲಿಯಾಸ್ ರವರು ಮಾಜಿ ಅಧ್ಯಕ್ಷರಾದ ಜೆ ಆರ್ ಮುನಿವೀರಣ್ಣ, ಎನ್ ಸುಬ್ರಮಣ್ಯ ಶೆಟ್ಟಿ, ಪುರಸಭಾ ಸದಸ್ಯರು ಹಾಗೂ ಜೇಸಿಐ ಖಜಾಂಚಿ ಬೈರೇಗೌಡರು ಹಾಗೂ ಯೋಜನಾ ನಿರ್ದೇಶಕರಾದ ಅನೀಸ್ ಉರ್ ರೆಹಮಾನ್, ಸಹ ಯೋಜನಾ ನಿರ್ದೇಶಕ ಎನ್. ಕೆ. ಸತ್ಯನಾರಾಯಣ್ ರವರು ಇನ್ನಿತರರು ಉಪಸ್ಥಿತರಿದ್ದು, ಸಂಘಟನಾ ಕಾರ್ಯದರ್ಶಿ ಆನಂದ್ ರವರು ವಂದಿಸಿದರು.