ಹೈದರಾಬಾದ್ ವಲಯ ನವೋದಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದಲ್ಲಿ ವಿನಾಯಕ ಗರ್ಗ್ ಅಭಿಮತ :

ಬ್ಯಾಟರಾಯನಪುರ : ದೇಶದ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ನವೋದಯ ಶಾಲೆಗಳ ಕೊಡುಗೆ ಸ್ಮರಣೀಯ ಎಂದು ನವೋದಯ ವಿದ್ಯಾಲಯದ ನೊಯ್ಡಾ ವಲಯದ ಆಯುಕ್ತ ವಿನಾಯಕ ಗರ್ಗ್ ಅಭಿಪ್ರಾಯ ಪಟ್ಟರು.

 ಬಾಗಲೂರು ನವೋದಯ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೈದರಾಬಾದ್ ವಲಯದ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ವಲಯದಲ್ಲಿ ನವೋದಯ ವಿದ್ಯಾಲಯ ಮಹತ್ವದ ಮೈಲಿಗಲ್ಲು ಸಾಧಿಸಿದೆ. ನವೋದಯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿರುವ ಹಲವರು ಉದ್ಯಮಿಗಳಾಗಿ, ಅದ್ಭುತ ಸಾಧಕರಾಗಿ ದೇಶ-ವಿದೇಶಗಳಲ್ಲಿ ಸೇವೆ ಕೈಗೊಂಡಿದ್ದಾರೆ. ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಸಮಾಜದಿಂದ ಪಡೆದ ಮೊತ್ತಕ್ಕಿಂತ ಹೆಚ್ಚಿನದನ್ನು ಹಿಂದಿರುಗಿ ಸಮಾಜಕ್ಕೆ ನೀಡಿದ್ದಾರೆ. ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಹೊಸ ಅನ್ವೇಷಣೆ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನವೋದಯ ವಿದ್ಯಾರ್ಥಿಗಳ ಕೊಡುಗೆ ಸ್ಮರಣೀಯವಾದುದು. ಜಗತ್ತಿನ ವಿವಿಧ ದೇಶಗಳು, ದೇಶದ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಯೊಂದಿಗೆ ನವೋದಯ ವಿದ್ಯಾರ್ಥಿಗಳು ಸೇವೆಯಲ್ಲಿ ನಿರತರಾಗಿದ್ದು, ಇಂತಹ ಸಾಧಕ ನವೋದಯ ವಿದ್ಯಾರ್ಥಿಗಳು ಇಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಎಂಬ ಬೃಹತ್ ಸಮಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಒಂದೆಡೆ ಕಲೆತು, ತಮ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ದೊರೆತಿರುವುದು  ನಿಜಕ್ಕೂ ಅದ್ಭುತವಾದ ಕ್ಷಣ, ಇದರಲ್ಲಿ ಪಾಲ್ಗೊಂಡಿರುವುದು ಸಂತೋಷ ಉಂಟು ಮಾಡಿದೆ ಎಂದರು.

ಹೈದರಾಬಾದ್ ವಲಯ ನವೋದಯ ವಿದ್ಯಾಲಯದ ಉಪ ಆಯುಕ್ತ ಗೋಪಾಲಕೃಷ್ಣ ಮಾತನಾಡಿ “ಭಾರತದ ನವೋದಯ ವಿದ್ಯಾಲಯಗಳಲ್ಲಿ ಹೈದರಾಬಾದ್ ವಲಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹೆಚ್ಚು ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. 

ವಿಜಯಪುರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿ “ನವೋದಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ನಾವು ನವೋದಯ ವಿದ್ಯಾರ್ಥಿಗಳಾಗಿ ರುವುದು ನಮ್ಮ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಅಧಿಕಾರಿ ಕಿರಣ್ ಕುಮಾರ್,ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ, ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜೆ.ಮುನೇಗೌಡ, ಬಾಗಲೂರು ನವೋದಯ ವಿದ್ಯಾಲಯದ ಇಂಗ್ಲಿಷ್ ಶಿಕ್ಷಕ ಪ್ರಹ್ಲಾದ್, ರಾಜಶೇಖರ್ ಜಾಕ, ಕೇಶವ್ ವಿನಯ್, ಸುಪ್ರೀತ್, ಹರೀಶ್, ಮಂಜುನಾಥ್, ನವೀನ್, ಸೋಮೇಶ್, ತಾರಾನಾಥ್, ಶ್ರೀನಿವಾಸ್, ರೆಡ್ ಎಫ್ ಎಂ ಆರ್ ಜೆ ರಶೀದ್ ಸೇರಿದಂತೆ ಕರ್ನಾಟಕ, ಆಂದ್ರ, ತೆಲಂಗಾಣ, ಕೇರಳ ಅಂಡಮಾನ್, ಪುದುಚೇರಿ ರಾಜ್ಯಗಳ 5 ಸಾವಿರಕ್ಕೂ ಹೆಚ್ಚು ನವೋದಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಾಕ್ಸ್ :
ಸಮ್ಮಿಲನ ಸಮಾರಂಭದ ಪ್ರಯುಕ್ತ ರಕ್ತದಾನ ಶಿಬಿರ ಅಂಗಾಂಗ ದಾನ ನೋಂದಣಿ :

ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದ ಪ್ರಯುಕ್ತ ರಕ್ತದಾನ ಶಿಬಿರ, ಅಂಗಾಂಗ ದಾನ ನೋಂದಣಿ,  ಉದ್ಯೋಗ ಮೇಳ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಏರ್ಪಡಿಸಿದ್ದರು. ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.

ನವೋದಯ ಶಾಲೆಗಳ ಕೊಡುಗೆ ಸ್ಮರಣೀಯ : 

ಹೈದರಾಬಾದ್ ವಲಯ ನವೋದಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದಲ್ಲಿ ವಿನಾಯಕ ಗರ್ಗ್ ಅಭಿಮತ :

ಬ್ಯಾಟರಾಯನಪುರ : ದೇಶದ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ನವೋದಯ ಶಾಲೆಗಳ ಕೊಡುಗೆ ಸ್ಮರಣೀಯ ಎಂದು ನವೋದಯ ವಿದ್ಯಾಲಯದ ನೊಯ್ಡಾ ವಲಯದ ಆಯುಕ್ತ ವಿನಾಯಕ ಗರ್ಗ್ ಅಭಿಪ್ರಾಯ ಪಟ್ಟರು.

 ಬಾಗಲೂರು ನವೋದಯ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೈದರಾಬಾದ್ ವಲಯದ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ವಲಯದಲ್ಲಿ ನವೋದಯ ವಿದ್ಯಾಲಯ ಮಹತ್ವದ ಮೈಲಿಗಲ್ಲು ಸಾಧಿಸಿದೆ. ನವೋದಯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿರುವ ಹಲವರು ಉದ್ಯಮಿಗಳಾಗಿ, ಅದ್ಭುತ ಸಾಧಕರಾಗಿ ದೇಶ-ವಿದೇಶಗಳಲ್ಲಿ ಸೇವೆ ಕೈಗೊಂಡಿದ್ದಾರೆ. ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಸಮಾಜದಿಂದ ಪಡೆದ ಮೊತ್ತಕ್ಕಿಂತ ಹೆಚ್ಚಿನದನ್ನು ಹಿಂದಿರುಗಿ ಸಮಾಜಕ್ಕೆ ನೀಡಿದ್ದಾರೆ. ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಹೊಸ ಅನ್ವೇಷಣೆ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನವೋದಯ ವಿದ್ಯಾರ್ಥಿಗಳ ಕೊಡುಗೆ ಸ್ಮರಣೀಯವಾದುದು. ಜಗತ್ತಿನ ವಿವಿಧ ದೇಶಗಳು, ದೇಶದ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಯೊಂದಿಗೆ ನವೋದಯ ವಿದ್ಯಾರ್ಥಿಗಳು ಸೇವೆಯಲ್ಲಿ ನಿರತರಾಗಿದ್ದು, ಇಂತಹ ಸಾಧಕ ನವೋದಯ ವಿದ್ಯಾರ್ಥಿಗಳು ಇಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಎಂಬ ಬೃಹತ್ ಸಮಾರಂಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಒಂದೆಡೆ ಕಲೆತು, ತಮ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ದೊರೆತಿರುವುದು  ನಿಜಕ್ಕೂ ಅದ್ಭುತವಾದ ಕ್ಷಣ, ಇದರಲ್ಲಿ ಪಾಲ್ಗೊಂಡಿರುವುದು ಸಂತೋಷ ಉಂಟು ಮಾಡಿದೆ ಎಂದರು.

ಹೈದರಾಬಾದ್ ವಲಯ ನವೋದಯ ವಿದ್ಯಾಲಯದ ಉಪ ಆಯುಕ್ತ ಗೋಪಾಲಕೃಷ್ಣ ಮಾತನಾಡಿ “ಭಾರತದ ನವೋದಯ ವಿದ್ಯಾಲಯಗಳಲ್ಲಿ ಹೈದರಾಬಾದ್ ವಲಯ ವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹೆಚ್ಚು ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. 

ವಿಜಯಪುರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾತನಾಡಿ “ನವೋದಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ನಾವು ನವೋದಯ ವಿದ್ಯಾರ್ಥಿಗಳಾಗಿ ರುವುದು ನಮ್ಮ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಅಧಿಕಾರಿ ಕಿರಣ್ ಕುಮಾರ್,ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ, ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜೆ.ಮುನೇಗೌಡ, ಬಾಗಲೂರು ನವೋದಯ ವಿದ್ಯಾಲಯದ ಇಂಗ್ಲಿಷ್ ಶಿಕ್ಷಕ ಪ್ರಹ್ಲಾದ್, ರಾಜಶೇಖರ್ ಜಾಕ, ಕೇಶವ್ ವಿನಯ್, ಸುಪ್ರೀತ್, ಹರೀಶ್, ಮಂಜುನಾಥ್, ನವೀನ್, ಸೋಮೇಶ್, ತಾರಾನಾಥ್, ಶ್ರೀನಿವಾಸ್, ರೆಡ್ ಎಫ್ ಎಂ ಆರ್ ಜೆ ರಶೀದ್ ಸೇರಿದಂತೆ ಕರ್ನಾಟಕ, ಆಂದ್ರ, ತೆಲಂಗಾಣ, ಕೇರಳ ಅಂಡಮಾನ್, ಪುದುಚೇರಿ ರಾಜ್ಯಗಳ 5 ಸಾವಿರಕ್ಕೂ ಹೆಚ್ಚು ನವೋದಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಾಕ್ಸ್ :
ಸಮ್ಮಿಲನ ಸಮಾರಂಭದ ಪ್ರಯುಕ್ತ ರಕ್ತದಾನ ಶಿಬಿರ ಅಂಗಾಂಗ ದಾನ ನೋಂದಣಿ :

ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದ ಪ್ರಯುಕ್ತ ರಕ್ತದಾನ ಶಿಬಿರ, ಅಂಗಾಂಗ ದಾನ ನೋಂದಣಿ,  ಉದ್ಯೋಗ ಮೇಳ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಏರ್ಪಡಿಸಿದ್ದರು. ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *