ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಎಪಿಸಿ ಬಡಾವಣೆಗೆ ಸಂಸದ ಡಿ ವಿ ಸದಾನಂದಗೌಡ ಭಾನುವಾರ ಭೇಟಿ ನೀಡಿ ಬಡಾವಣೆ ನಿವಾಸಿಗಳಿಂದ ಸ್ಥಳೀಯ ಸಮಸ್ಯೆಗಳ ಕುರಿತ ಅಹವಾಲು ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು ‘ಎಪಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹೊಸ ಬೋರ್ ವೆಲ್, ತಿಂಡ್ಲು ಗ್ರಾಮದಲ್ಲಿ ಹೊಸ ಅಂಚೆ ಕಚೇರಿ ಆರಂಭ, ದೊಡ್ಡ ಬೊಮ್ಮಸಂದ್ರ ಕೆರೆಯ ಬಳಿಯ ಪಾರ್ಕ್ ನಲ್ಲಿನ ವ್ಯಾಯಮ ಶಾಲೆಯ ಉಪಕರಣಗಳ ಬಳಕೆಗೆ ಎಪಿಸಿ ಬಡಾವಣೆಯ ನಿವಾಸಿಗಳಿಗೆ ಅವಕಾಶ ಕಲ್ಪಿಸುವುದು, ಹಿರಿಯ ನಾಗರೀಕರ ವಿಶ್ರಾಂತಿಗಾಗಿ ಬೆಂಚು ಗಳನ್ನು ಅಳವಡಿಸುವುದು ಮುಂತಾದ ಅಹವಾಲುಗಳ ಮನವಿ ಯನ್ನು ನಾಗರೀಕರು ಸಲ್ಲಿಸಿದ್ದು, ಈ ಎಲ್ಲಾ ಅಹವಾಲುಗಳನ್ನು ಈಡೇರಿಸುವ ಮೂಲಕ ಸ್ಪಂದಿಸುವು ದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಪಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸದಾನಂದಗೌಡರನ್ನು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡರಾದ ಎಚ್ ಸಿ ತಮ್ಮೇಶ್ ಗೌಡ, ಪ್ರಕಾಶ್, ಎಪಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಭಾಸ್ಕರಾಚಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಟಿ ಎಸ್ ಕೃಷ್ಣರಾವ್, ಉಪೇಂದ್ರ ಕೆ ಟಿಕು, ಪದಾಧಿಕಾರಿಗಳಾದ ಇಳಂಗೋವನ್, ಬಾಲಿ, ಓಪೇಂದರ್ ಬಾಲಿ, ಸುನಿಲ್ ಘೋರ್ಪಡೆ, ರೂಪ ರಾಕೇಶ್, ಮಂಜುನಾಥ್ ಬಿ ಕೆ, ಶ್ರೀಹರಿ, ಮಹೇಶ್ ಮೋರೆ, ಹರ್ಷ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರಿದ್ದರು.
