ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ 6 ನೇ ವಾರ್ಡ್ ವಿಸಿಟ್

ಕಸ ವಿಲೇವಾರಿ, ಚರಂಡಿ ಸ್ವಚ್ಚತೆ,ಬೀದಿ ದೀಪಗಳ ಬಗ್ಗೆ ವಾರ್ಡ್ ವಾಸಿಗಳಿಂದ ದೂರು

ಚಿಕ್ಕಬಳ್ಳಾಪುರ : ನಿಮ್ಮಾಕಲ ಕುಂಟೆ ರಸ್ತೆ ಟರ್ನಿಂಗ್ ಅಕ್ಕ ಪಕ್ಕ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ರಕ್ಷಣೆ ಕೊಡಿ ಮುನ್ಸಿಪಲ್ ಬಡಾವಣೆ ಯಲ್ಲಿ ಕಸವಿಲೇವಾರಿ ಚರಂಡಿ ಸ್ವಚ್ಚತೆ,ಬೀದಿದೀಪಗಳ ಸಮಸ್ಯೆಗಳನ್ನ ಐಡಿಎಸ್ ಎಂ ಟಿ.
ಲೇ ಔಟ್ ನಿವೇಶನ ಖಾತೆ ಗೊಂದಲಗಳನ್ನು ಶಾಸಕ ಪ್ರದೀಪ್ ಈಶ್ವರ್ ತಮ್ಮ ನಮಸ್ತೆ ಚಿಕ್ಕಬಳ್ಳಾಪುರ ವಾರ್ಡ ಬೇಟಿ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಕೂಡಲೆ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮನೆ ಬೇಟಿಗೆ ಇಂದು ಶಾಸಕ ಪ್ರದೀಫ್ ಈಶ್ವರ್ ನಗರದ 6 ನೇ ವಾರ್ಡು ಮುನ್ಸಿಪಲ್ ಬಡಾವಣೆ,18 ನೇ ವಾರ್ಡು ಹಾಗು 7 ನೇ ವಾರ್ಡ ಗಳಲ್ಲಿ ಪಾದಯಾತ್ರೆ ಮಾಡಿದರು ಕೆಲವು ಮನೆಗಳಿಗೆ ಬೇಟಿಕೊಟ್ಟು ಸಮಸ್ಯೆಗಳನ್ನ ಆಲಿಸಿದರು.ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ರು ಆದ್ರೆ 5.45 ಕ್ಕೆ ಹಾಜರಾದ ಪ್ರದೀಪ್ ನಗರಸಭೆ ಅಧಿಕಾರಿಗಳು ಬರೋದು ತಡ ಆಗಿದ್ದರಿಂದ ಎಪಿಎಂಸಿ ಮಾರುಕಟ್ಟೆ ವೀಕ್ಷಿಸಿದರು 6 ನೇ ವಾರ್ಡ ಬೇಟಿ ವೇಳೆ ಯುಜಿಡಿ ಸಮಸ್ಯೆ,ಬೀದಿ ದೀಪಗಳ ಸಮಸ್ಯೆ ಚರಂಡಿ ಸ್ವಚ್ಚತೆ ಬಗ್ಗೆ ದೂರುಗಳು ಆಲಿಸಿದರು ಅದೆಲ್ಲದಕ್ಕಿಂತ ಹೆಚ್ಚಾಗಿ ನಿವೇಶನಗಳ ತಕರಾರು ಬಗ್ಗೆ ದೂರುಗಳು ಜಾಸ್ತಿ ಬಂದಿದ್ದವು ಐ ಡಿ ಎಸ್ ಎಂ ಟಿ ಲೇ ಔಟ್ ನಿವೇಶನಗಳು ಗೊಂದಲ ನಿವಾರಿಸಿ ಎಂದು ಮನವಿಗಳನ್ನ ಸಲ್ಲಿಸಿದ್ದರು. ಮುಖ್ಯ ರಸ್ತೆಯಿಂದ ನಿಮ್ಮಾಕಲ ಕುಂಟೆಗೆ ಹೋಗುವ ರಸ್ತೆಗೆ ಅಂಟಿಕೊಂಡಂತೆ ಕಟ್ಟಿಕೊಂಡಿರುವ ಮನೆಗೆ ನೀರು ನುಗ್ಗುತ್ತೆ ಪರಿಹಾರ ಕಲ್ಪಿಸಿಕೊಡಿ ನನ್ನ ಶೌಚಾಲಯವನ್ನ ಬೀಳಿಸಿದ್ದಾರೆ ಎಂದು ದೂರುಸಲ್ಲಿಸಿದ ಹಿರಿಯ ನಾಗರೀಕರ ಮನೇಲಿ ಕೂತು ಬೇಗ ಪರಿಹಾರ ಸೂಚಿಸುವುದಾಗಿ ಬರವಸೆ ನೀಡಿದ್ರು ಆಯಾ ವಾರ್ಡುಗಳಲ್ಲಿ ಆಯ್ಕೆಯಾದ ನಗರಸಭಾ ಸದಸ್ಯರು ನಾಗರೀಕರ ಕೆಲಸ ಮಾಡಿಕೊಡದೆ ಬ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಅದನ್ನ ಸರಿಮಾಡೋ ಕೆಲಸ ಮಾಡುತ್ತೇನೆ. ನಗರಸಭೆಯಲ್ಲಿ ಲಂಚಾವತಾರಕ್ಕೆ ತಿಲಾಂಜಲಿ ಇಡಬೇಕು ಅಂತ ಪ್ರಯತ್ನ ಮಾಡುತಿದ್ದೇನೆ ಇನ್ನೂ ಅದೆಷ್ಟು ದಿನ ತಗೊಳುತ್ತೋ ಅಂತ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತಾಡಿದರು.
ವಾರ್ಡಗೆ ಬೇಟಿ ಕೊಟ್ಟು ಮಾತನಾಡಿಸುತಿದ್ದಂತೆ ಅಲ್ಲಿಗೆ ಬಂದ ಕಾಂಗ್ರೇಸ್ ಮುಖಂಡ ಮಾಜಿ ನಗರಸಭಾ ಸದಸ್ಯ ಲಕ್ಷ್ಮಣ್ ನೀವು ಬರೋಕು ಮೊದಲು ಸ್ಥಳೀಯ ಮುಖಂಡರುಗಳಿಗೆ ಮಾಹಿತಿ ಕೊಡಲ್ಲ ನೀವು ಬಂದಿರೋದನ್ನ ಯಾರತ್ರಾನೋ ತಿಳಕೊಂಡ ಬರಬೇಕಾ ಅನ್ನುತಿದ್ದಂತೆ ಕೆಂಡಾಮಂಡಲವಾದ ಪ್ರದೀಪ್ ಆಯಿತು ಬನ್ರಿ ಎಂ ಎಲ್ ಎ ಬರ್ತಾ ಇದ್ದೀನಿ ನೀವು ಬರ್ರಪ್ಪಾ ಅಂತ ಹೇಳಿ ಕರಸ್ಕೋ ಬೇಕಾ ನಾವು ಬರೋದನ್ನ ತಿಳಕಂಡು ಆಸಕ್ತಿ ಇದ್ರೆ ನೀವೇ ಬರಬೇಕ್ರಿ ಮನೆ ಮನೆ ಬೇಟಿ ಕೊಟ್ಟು ಜನರ ಸಮಸ್ಯೆ ಬಗೆ ಹರಿಸೋಕೆ ಬಂದಿದ್ರೆ ಅದಕ್ಕೂ ಅಡ್ಡೀಪಡಿಸ್ತೀರಾ ನಿಮಗೆ ಆರತಿ ಎತ್ತಿ ಕರಿಬೇಕಾ ಇಂತವರಿಂದಲೆ ಅಭಿವೃದ್ದಿ ಕೆಲಸಗಳು ಹಿಂದೆ ಬಿದ್ದಿದೆ ಎಂದು ತರಾಟೆಗೆ ತೆಗೆದುಕೊಂಡ್ರು.
ಈ ವೇಳೆ
ನಗರಸಭೆ ಪೌರಾಯುಕ್ತೆ ಪಂಪಶ್ರೀ ಆರೋಗ್ಯ ವೈದ್ಯಾದಿಕಾರಿ ಡಾ.ಮಂಜುಳ,ಬೆಸ್ಕಾಂ ಅಧಿಕಾರಿಗಳು ನಗರಸಭೆ ಸಿಬ್ಬಂದಿ ಕಾಂಗ್ರೇಸ್ ಮುಖಂಡ ಸುರೇಶ್,ಮಾಡ್ರನ್ ಶಿವ,ಕುಬೇರ ಅಚ್ಚು , ಶಾಹಿದ್ ಮತ್ತು ಇತರರು ಇದ್ದರು.

ಅತ್ಯಂತ ಹೆಚ್ಚು ರೆವಿನ್ಯೂ ಬರೋ ವಾರ್ಡನ್ನೆ ನಗರಸಭೆ ನೆಗ್ಲೆಟ್ ಮಾಡ್ತಿದೆ

ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ 6 ನೇ ವಾರ್ಡ್ ವಿಸಿಟ್

ಕಸ ವಿಲೇವಾರಿ, ಚರಂಡಿ ಸ್ವಚ್ಚತೆ,ಬೀದಿ ದೀಪಗಳ ಬಗ್ಗೆ ವಾರ್ಡ್ ವಾಸಿಗಳಿಂದ ದೂರು

ಚಿಕ್ಕಬಳ್ಳಾಪುರ : ನಿಮ್ಮಾಕಲ ಕುಂಟೆ ರಸ್ತೆ ಟರ್ನಿಂಗ್ ಅಕ್ಕ ಪಕ್ಕ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ರಕ್ಷಣೆ ಕೊಡಿ ಮುನ್ಸಿಪಲ್ ಬಡಾವಣೆ ಯಲ್ಲಿ ಕಸವಿಲೇವಾರಿ ಚರಂಡಿ ಸ್ವಚ್ಚತೆ,ಬೀದಿದೀಪಗಳ ಸಮಸ್ಯೆಗಳನ್ನ ಐಡಿಎಸ್ ಎಂ ಟಿ.
ಲೇ ಔಟ್ ನಿವೇಶನ ಖಾತೆ ಗೊಂದಲಗಳನ್ನು ಶಾಸಕ ಪ್ರದೀಪ್ ಈಶ್ವರ್ ತಮ್ಮ ನಮಸ್ತೆ ಚಿಕ್ಕಬಳ್ಳಾಪುರ ವಾರ್ಡ ಬೇಟಿ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಕೂಡಲೆ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮನೆ ಬೇಟಿಗೆ ಇಂದು ಶಾಸಕ ಪ್ರದೀಫ್ ಈಶ್ವರ್ ನಗರದ 6 ನೇ ವಾರ್ಡು ಮುನ್ಸಿಪಲ್ ಬಡಾವಣೆ,18 ನೇ ವಾರ್ಡು ಹಾಗು 7 ನೇ ವಾರ್ಡ ಗಳಲ್ಲಿ ಪಾದಯಾತ್ರೆ ಮಾಡಿದರು ಕೆಲವು ಮನೆಗಳಿಗೆ ಬೇಟಿಕೊಟ್ಟು ಸಮಸ್ಯೆಗಳನ್ನ ಆಲಿಸಿದರು.ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ರು ಆದ್ರೆ 5.45 ಕ್ಕೆ ಹಾಜರಾದ ಪ್ರದೀಪ್ ನಗರಸಭೆ ಅಧಿಕಾರಿಗಳು ಬರೋದು ತಡ ಆಗಿದ್ದರಿಂದ ಎಪಿಎಂಸಿ ಮಾರುಕಟ್ಟೆ ವೀಕ್ಷಿಸಿದರು 6 ನೇ ವಾರ್ಡ ಬೇಟಿ ವೇಳೆ ಯುಜಿಡಿ ಸಮಸ್ಯೆ,ಬೀದಿ ದೀಪಗಳ ಸಮಸ್ಯೆ ಚರಂಡಿ ಸ್ವಚ್ಚತೆ ಬಗ್ಗೆ ದೂರುಗಳು ಆಲಿಸಿದರು ಅದೆಲ್ಲದಕ್ಕಿಂತ ಹೆಚ್ಚಾಗಿ ನಿವೇಶನಗಳ ತಕರಾರು ಬಗ್ಗೆ ದೂರುಗಳು ಜಾಸ್ತಿ ಬಂದಿದ್ದವು ಐ ಡಿ ಎಸ್ ಎಂ ಟಿ ಲೇ ಔಟ್ ನಿವೇಶನಗಳು ಗೊಂದಲ ನಿವಾರಿಸಿ ಎಂದು ಮನವಿಗಳನ್ನ ಸಲ್ಲಿಸಿದ್ದರು. ಮುಖ್ಯ ರಸ್ತೆಯಿಂದ ನಿಮ್ಮಾಕಲ ಕುಂಟೆಗೆ ಹೋಗುವ ರಸ್ತೆಗೆ ಅಂಟಿಕೊಂಡಂತೆ ಕಟ್ಟಿಕೊಂಡಿರುವ ಮನೆಗೆ ನೀರು ನುಗ್ಗುತ್ತೆ ಪರಿಹಾರ ಕಲ್ಪಿಸಿಕೊಡಿ ನನ್ನ ಶೌಚಾಲಯವನ್ನ ಬೀಳಿಸಿದ್ದಾರೆ ಎಂದು ದೂರುಸಲ್ಲಿಸಿದ ಹಿರಿಯ ನಾಗರೀಕರ ಮನೇಲಿ ಕೂತು ಬೇಗ ಪರಿಹಾರ ಸೂಚಿಸುವುದಾಗಿ ಬರವಸೆ ನೀಡಿದ್ರು ಆಯಾ ವಾರ್ಡುಗಳಲ್ಲಿ ಆಯ್ಕೆಯಾದ ನಗರಸಭಾ ಸದಸ್ಯರು ನಾಗರೀಕರ ಕೆಲಸ ಮಾಡಿಕೊಡದೆ ಬ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಅದನ್ನ ಸರಿಮಾಡೋ ಕೆಲಸ ಮಾಡುತ್ತೇನೆ. ನಗರಸಭೆಯಲ್ಲಿ ಲಂಚಾವತಾರಕ್ಕೆ ತಿಲಾಂಜಲಿ ಇಡಬೇಕು ಅಂತ ಪ್ರಯತ್ನ ಮಾಡುತಿದ್ದೇನೆ ಇನ್ನೂ ಅದೆಷ್ಟು ದಿನ ತಗೊಳುತ್ತೋ ಅಂತ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತಾಡಿದರು.
ವಾರ್ಡಗೆ ಬೇಟಿ ಕೊಟ್ಟು ಮಾತನಾಡಿಸುತಿದ್ದಂತೆ ಅಲ್ಲಿಗೆ ಬಂದ ಕಾಂಗ್ರೇಸ್ ಮುಖಂಡ ಮಾಜಿ ನಗರಸಭಾ ಸದಸ್ಯ ಲಕ್ಷ್ಮಣ್ ನೀವು ಬರೋಕು ಮೊದಲು ಸ್ಥಳೀಯ ಮುಖಂಡರುಗಳಿಗೆ ಮಾಹಿತಿ ಕೊಡಲ್ಲ ನೀವು ಬಂದಿರೋದನ್ನ ಯಾರತ್ರಾನೋ ತಿಳಕೊಂಡ ಬರಬೇಕಾ ಅನ್ನುತಿದ್ದಂತೆ ಕೆಂಡಾಮಂಡಲವಾದ ಪ್ರದೀಪ್ ಆಯಿತು ಬನ್ರಿ ಎಂ ಎಲ್ ಎ ಬರ್ತಾ ಇದ್ದೀನಿ ನೀವು ಬರ್ರಪ್ಪಾ ಅಂತ ಹೇಳಿ ಕರಸ್ಕೋ ಬೇಕಾ ನಾವು ಬರೋದನ್ನ ತಿಳಕಂಡು ಆಸಕ್ತಿ ಇದ್ರೆ ನೀವೇ ಬರಬೇಕ್ರಿ ಮನೆ ಮನೆ ಬೇಟಿ ಕೊಟ್ಟು ಜನರ ಸಮಸ್ಯೆ ಬಗೆ ಹರಿಸೋಕೆ ಬಂದಿದ್ರೆ ಅದಕ್ಕೂ ಅಡ್ಡೀಪಡಿಸ್ತೀರಾ ನಿಮಗೆ ಆರತಿ ಎತ್ತಿ ಕರಿಬೇಕಾ ಇಂತವರಿಂದಲೆ ಅಭಿವೃದ್ದಿ ಕೆಲಸಗಳು ಹಿಂದೆ ಬಿದ್ದಿದೆ ಎಂದು ತರಾಟೆಗೆ ತೆಗೆದುಕೊಂಡ್ರು.
ಈ ವೇಳೆ
ನಗರಸಭೆ ಪೌರಾಯುಕ್ತೆ ಪಂಪಶ್ರೀ ಆರೋಗ್ಯ ವೈದ್ಯಾದಿಕಾರಿ ಡಾ.ಮಂಜುಳ,ಬೆಸ್ಕಾಂ ಅಧಿಕಾರಿಗಳು ನಗರಸಭೆ ಸಿಬ್ಬಂದಿ ಕಾಂಗ್ರೇಸ್ ಮುಖಂಡ ಸುರೇಶ್,ಮಾಡ್ರನ್ ಶಿವ,ಕುಬೇರ ಅಚ್ಚು , ಶಾಹಿದ್ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *