ಗುಡಿಬಂಡೆ: ರೈತ ಲಕ್ಷ್ಮಿಪತಿ ರವರ ಜಮೀನಲ್ಲಿ ಗಿಡ ನೆಟ್ಟು ಸ್ವತಂತ್ರ ಹೋರಾಟಗಾರ ಮಂಗಳ ಪಾಂಡೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ತಜ್ಞರಾದ ಹಾಗೂ ಪರಿಸರವಾದಿಗಳಾದ ಡಾ.ಆಶ್ರಿತಾ ಗಿಡ ನೆಟ್ಟು ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಂಗಳ ಪಾಂಡೆ ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು.1857ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಅಕ್ರಮಣವು ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮದ ರೂಪವನ್ನು ಪಡೆಯಿತು. ಭಾರತೀಯ ಸ್ವತಂತ್ರಕ್ಕಾಗಿ ದಂಗೆಯನ್ನು ಪ್ರಾರಂಭಿಸಿದ ಎಲ್ಲಾ ಶ್ರೇಯಸ್ಸು, ಮಂಗಳ ಪಾಂಡೆ ರವರಿಗೆ ಸಲ್ಲುತ್ತದೆ. ಅಂತವರ ಹೆಸರಿನಲ್ಲಿ ಗಿಡವನ್ನು ನೆಟ್ಟು ಜನ್ಮದಿನ ಆಚರಣೆ ಮಾಡೋದು ತುಂಬಾ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಡಾ. ಗುಂಪು ಮರದ ಆನಂದ್ ಮಾತನಾಡಿ, ಮಂಗಲ್ ಪಾಂಡೆ ಒಂದು ಭೂಮಿ ಹಾರ್ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಭಾರತದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಗವ ಹಳ್ಳಿಯಲ್ಲಿ ಜುಲೈ 1827 ರಲ್ಲಿ ಜನಿಸಿದರು ಅವರ ತಂದೆ ದಿವಾಕರ್ ಪಾಂಡೆ.ಮಂಗಲ್ ಪಾಂಡೆ ಅವರು 22ನೇ ವಯಸ್ಸಿನಲ್ಲಿ 1849 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೇರಿದರು. ಮಂಗಳ ಪಾಂಡೆಯನ್ನು 1857ರ ದಂಗೆಯ ನಾಯಕ ಎಂದು ಪರಿಗಣಿಸಲಾಗಿದೆ ಬ್ರಿಟಿಷರ ವಿರುದ್ಧ ದಂಗೆಯನ್ನು ಪ್ರಾರಂಭಿಸಿದ ವ್ಯಕ್ತಿ, ಬ್ರಿಟಿಷರ ಎಲ್ಲೆಡೆ ದಂಗೆಗಳು ಯುದ್ಧಗಳು ಮತ್ತು ಘರ್ಷಣೆಗಳನ್ನು ಎದುರಿಸಬೇಕಾಯಿತು.ಮಂಗಲ್ ಪಾಂಡೆ ಸಾಕಷ್ಟು ಧಾರ್ಮಿಕ ವ್ಯಕ್ತಿಯಾಗಿದ್ದು ಸೇನಾ ಸಿಬ್ಬಂದಿ ಕಚ್ಚುವ ಕಾರ್ಟ್ರಿಡ್ಜ್ ಗಳು ಪ್ರಾಣಿಗಳ ಕೊಬ್ಬಿನಿಂದ ಮಾಡಲ್ಪಟ್ಟಿವೆ ಎಂದು ಸುದ್ದಿ ಹರಡಿ ದಾಗ ಅವರು ದಂಗೆಯನ್ನು ಗಂಭೀರವಾಗಿ ತೆಗೆದುಕೊಂಡರು ಹಾಗೂ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಲ್ಲುತ್ತಾರೆ.ಗಾಯಗೊಂಡಿದ್ದ ಪಾಂಡೆ ಅವರನ್ನು ಬ್ರಿಟಿಷ್ ಸರ್ಕಾರ ಬ್ಯಾರಕ್ ಪುರದಲ್ಲಿ ಪಾಂಡೆಯವರನ್ನು ಗಲ್ಲಿಗೇರಿಸಲಾಯಿತು. ಇಂತಹ ಮಹಾನ್ ಹೋರಾಟಗಾರರ ಜನ್ಮದಿನಾಚರಣೆ ಆಚರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಮೀರ್. ಮಂಜುನಾಥ್ ಮತ್ತು ಇತರರು ಇದ್ದರು.
ಗಿಡ ನೆಟ್ಟು ಸ್ವಾತಂತ್ರ್ಯ ಹೋರಾಟಗಾರ ಮಂಗಳ ಪಾಂಡೆ ಜನ್ಮದಿನ ಆಚರಣೆ.
ಗುಡಿಬಂಡೆ: ರೈತ ಲಕ್ಷ್ಮಿಪತಿ ರವರ ಜಮೀನಲ್ಲಿ ಗಿಡ ನೆಟ್ಟು ಸ್ವತಂತ್ರ ಹೋರಾಟಗಾರ ಮಂಗಳ ಪಾಂಡೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ತಜ್ಞರಾದ ಹಾಗೂ ಪರಿಸರವಾದಿಗಳಾದ ಡಾ.ಆಶ್ರಿತಾ ಗಿಡ ನೆಟ್ಟು ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಂಗಳ ಪಾಂಡೆ ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು.1857ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಅಕ್ರಮಣವು ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮದ ರೂಪವನ್ನು ಪಡೆಯಿತು. ಭಾರತೀಯ ಸ್ವತಂತ್ರಕ್ಕಾಗಿ ದಂಗೆಯನ್ನು ಪ್ರಾರಂಭಿಸಿದ ಎಲ್ಲಾ ಶ್ರೇಯಸ್ಸು, ಮಂಗಳ ಪಾಂಡೆ ರವರಿಗೆ ಸಲ್ಲುತ್ತದೆ. ಅಂತವರ ಹೆಸರಿನಲ್ಲಿ ಗಿಡವನ್ನು ನೆಟ್ಟು ಜನ್ಮದಿನ ಆಚರಣೆ ಮಾಡೋದು ತುಂಬಾ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಡಾ. ಗುಂಪು ಮರದ ಆನಂದ್ ಮಾತನಾಡಿ, ಮಂಗಲ್ ಪಾಂಡೆ ಒಂದು ಭೂಮಿ ಹಾರ್ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಭಾರತದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಗವ ಹಳ್ಳಿಯಲ್ಲಿ ಜುಲೈ 1827 ರಲ್ಲಿ ಜನಿಸಿದರು ಅವರ ತಂದೆ ದಿವಾಕರ್ ಪಾಂಡೆ.ಮಂಗಲ್ ಪಾಂಡೆ ಅವರು 22ನೇ ವಯಸ್ಸಿನಲ್ಲಿ 1849 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೇರಿದರು. ಮಂಗಳ ಪಾಂಡೆಯನ್ನು 1857ರ ದಂಗೆಯ ನಾಯಕ ಎಂದು ಪರಿಗಣಿಸಲಾಗಿದೆ ಬ್ರಿಟಿಷರ ವಿರುದ್ಧ ದಂಗೆಯನ್ನು ಪ್ರಾರಂಭಿಸಿದ ವ್ಯಕ್ತಿ, ಬ್ರಿಟಿಷರ ಎಲ್ಲೆಡೆ ದಂಗೆಗಳು ಯುದ್ಧಗಳು ಮತ್ತು ಘರ್ಷಣೆಗಳನ್ನು ಎದುರಿಸಬೇಕಾಯಿತು.ಮಂಗಲ್ ಪಾಂಡೆ ಸಾಕಷ್ಟು ಧಾರ್ಮಿಕ ವ್ಯಕ್ತಿಯಾಗಿದ್ದು ಸೇನಾ ಸಿಬ್ಬಂದಿ ಕಚ್ಚುವ ಕಾರ್ಟ್ರಿಡ್ಜ್ ಗಳು ಪ್ರಾಣಿಗಳ ಕೊಬ್ಬಿನಿಂದ ಮಾಡಲ್ಪಟ್ಟಿವೆ ಎಂದು ಸುದ್ದಿ ಹರಡಿ ದಾಗ ಅವರು ದಂಗೆಯನ್ನು ಗಂಭೀರವಾಗಿ ತೆಗೆದುಕೊಂಡರು ಹಾಗೂ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಲ್ಲುತ್ತಾರೆ.ಗಾಯಗೊಂಡಿದ್ದ ಪಾಂಡೆ ಅವರನ್ನು ಬ್ರಿಟಿಷ್ ಸರ್ಕಾರ ಬ್ಯಾರಕ್ ಪುರದಲ್ಲಿ ಪಾಂಡೆಯವರನ್ನು ಗಲ್ಲಿಗೇರಿಸಲಾಯಿತು. ಇಂತಹ ಮಹಾನ್ ಹೋರಾಟಗಾರರ ಜನ್ಮದಿನಾಚರಣೆ ಆಚರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಮೀರ್. ಮಂಜುನಾಥ್ ಮತ್ತು ಇತರರು ಇದ್ದರು.