ಇಂಡಿ:ಜೂ.19: ವಿದ್ಯುತ ದರ ಎಕಾ ಏಕೀ ಹೆಚ್ಚಳ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಹಾಗೂ ಭಾಜಪ ಕಾರ್ಯಕರ್ತರು ಹೆಸ್ಕಾಂ ಇಲಾಖೆ ಅಧಿಕಾರಿ ಮೆಡೆದಾರ ಇವರ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯ ವಿರುಧ್ಧ ಮನವಿ ಸಲ್ಲಿಸಿದರು.
ವಿದ್ಯುತ ದರ ಏಕಾ ಎಕೀ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಹಿಂದಿನ ವಿದ್ಯುತ ದರ 4.10 ಪೈಸ ಇದ್ದು ಈ ತಿಂಗಳು ಏಕಾಎಕೀ ಪ್ರತಿ ಯುನಿಟ್ ವಿದ್ಯುತ ದರ 7 ರೂ ಎಫ್.ಎ.ಸಿ 2.55 ಪೈಸ್ ಹೆಚ್ಚಾಗಿದ್ದು ಕೂಡಲೆ ಹಿಂಪಡೆಯಬೇಕು. ಹೊಸ ವಿದ್ಯುತ ನಿಗದಿ ಮಾಡದೆ ಹಳೆಯ ದರವನ್ನೆ ಎಥಾವತ್ತಾಗಿ ಮುಂದುವರೆಸಿ . ಕಾಂಗ್ರೆಸ್ನವರು ಮಾಡಿದ ಚುನಾವಣಾ ಗಿಮಕ್ಕಿ ಜನತೆ ತಿಳಿದುಕೊಂಡಿದ್ದಾರೆ ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿ ದಿನ ಕಳೆದಂತೆ ಫಲಾನುಭವಿಗಳಿಗೆ ಬೇರೆ ಬೇರೆ ಮಾನದಂಡ ಹಾಕುತ್ತಿರುವುದು ವಿಷಾದನೀಯ . ವಿದ್ಯುತ ದರ ಹಿಂದಿನಂತೆ ನಿಗದಿ ಮಾಡದಿದ್ದರೆ ಜುಲೈ 21 ರಂದು ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಯಮಿತ ಉಪವಿಭಾಗ ಇಂಡಿ ಇವರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅನೀಲಗೌಡ ಬಿರಾದಾರ,ದೆವೇಂದ್ರ ಕುಂಬಾರ, ಸೋಮಶೆಖರ ದೇವರ, ಅಶೋಕ ಅಕಲಾದಿ, ಅಪ್ಪು ಪವಾರ, ದತ್ತಾ ಬಂಡೇನವರ್, ರಾಜು ಬಡಿಗೇರ, ಬಸವರಾಜ ನಡಗರಿ, ಅಕ್ಷಯ ಹಿಬಾರೆ ಸೇರಿದಂತೆ ಅನೇಕ ಮುಖಂಡರಿದ್ದರು.