ಇಂಡಿ : ತಾಲೂಕಿನ ಝಳಕಿ ಇಂದ ಚಡಚಣಕ್ಕೆ ತೆರಳುವ ಮಧ್ಯ ರಾಜ್ಯ ಹೆದ್ದಾರಿ ಕಾಮಗಾರಿ ನಡೆದು ೬ ತಿಂಗಳು ಗತಿಸಿದರು ಇಲ್ಲಿಯವರೆಗು ಪೂರ್ಣಗೋಳಿಸದೆ, ಅರ್ಧಮರ್ಧ ಕಾಮಗಾರಿ ನಿಲ್ಲಿಸಿ ನಾಪತ್ತೆಯಾದ ಗುತ್ತಿಗಾರನೇಂದು ಝಳಕಿ ಗ್ರಾಮಸ್ಥರಾದ ರಮೇಶ ಬಗಲಿರವರ ಆರೋಪ.
ಝಳಕಿ ಹದ್ದೆಯಿಂದ ಕೇವಲ ಒಂದು ಕೀ.ಮಿ ರಾಜ್ಯ ರಸ್ಥೆ ಕಾಮಗಾರಿ ಸುಮಾರು ದಿನಗಳಿಂದ ಒಂದು ಸೈಡನಲ್ಲಿ ಕಾಮಗಾರಿ ಮುಗಿಸಿ, ಇನ್ನೊಂದು ಸೈಡಿನಲ್ಲಿ ಖಡಿ ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ, ವಾಹನಗಳು ಓಡಾಡುವಾಗ ದ್ವಿಚಕ್ರವಾಹನ ಸವಾರರಿಗೆ ಖಡಿ ಸಿಡಿಯೋದರಿಂದ ಸುಮಾರು ಅನಾಹುತಗಳು ನಡೆದಿದ್ದರು ಕ್ಯಾರೆ ಎನ್ನದ ಗುತ್ತಿಗೆದಾರ, ಕರೆಮಾಡಿದರು ಯಾರಕರೆಗು ಉತ್ತರ ನೀಡದ ಗುತ್ತಿಗೆದಾರ ರಾಜೇಂದ್ರ ಡೆಂಗಿ, ಚಡಚಣ ಮಾರ್ಗವಾಗಿ ಸುಮಾರು ಜಡವಾಹನಗಳು ಓಡಾಡುವದರಿಂದ ಜನರು ಭಯಭೀತರಾಗಿದ್ದಾರೆ, ಇದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಇಲ್ಲಿನ ಗುತ್ತಿಗೇದಾರರ ಮೇಲೆ ಸೂಕ್ತ ಕ್ರಮಕೈಗೊಳ್ಳದೆ ಹೋದಲ್ಲಿ ಝಳಕಿ ಮತ್ತು ಜೇವೂರ ಗ್ರಾಮಸ್ಥರಿಂದ ರಸ್ತೆ ತಡೆದು ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರಾದ ಸದ್ದಾಮ ಮುಲ್ಲಾ, ಮಂಜುನಾಥ ಕಾಪಸೆ, ರಮೇಶ ತೇಲಿ, ರಾಜು ಮುಲ್ಲಾ, ಶ್ರೀಶೈಲಗೌಡ ಬಿರಾದಾರ, ರಮೇಶ ಪಾಟೀಲ, ಹಣಮಂತ ಕೋಳಿ, ಮಾಹಾದೇವ ಹಾಡಸಂಗೆ, ಬಸವರಾಜ ಶಿರಶ್ಯಾಡ ಪ್ರಕಟಣೆಗೆ ತಿಳಿಸಿದರು.
