ಗೋಕಲಾಷ್ಟಮಿ ಹಬ್ಬದಂದು ದೇವಾಲಯವನ್ನು ಅತಿ ವೈಭೋಗ ವೈವಿಧ್ಯಮಯವಾಗಿ ಅಲಂಕರಿಸುವುದರ ಜೊತೆಗೆ ಬಗೆ ಬಗೆಯ ತಿಂಡಿ ತಿನಿಸುಗಳಿಂದ ಹಾಗೂ ಹಣ್ಣುಗಳಿಂದ ಅಲಂಕರಿಸುತ್ತಾರೆ. ಮಾನವನು ಸ್ವಾಮಿಯ ದರ್ಶನದಿಂದ ಒಂದು ದೈವೀಕವಾದ ಸಂಬಂಧದಲ್ಲಿ ಆ ಸ್ವಾಮಿಯನ್ನು ಸ್ಮರಿಸ್ಸುತ್ತಾನೆ.
ಇಲ್ಲಿಯ ವಿಶೇಷ ದಿನಗಳು ಯಾವುದೆಂದರೆ…
- ಪುಷ್ಯ (January) ಮಾಸದಲ್ಲಿ…. ಸಂಕ್ರಾಂತಿ ಹಾಗೂ ಕನು ಹಬ್ಬ.
- ಮಾಘ (February) ಮಾಸ.
ಹಾಗೂ ಪಾಲ್ಗೊಣ (March) ಮಾಸದಲ್ಲಿ ವೇಣುಗೋಪಾಲಕೃಷ್ಣ ಸ್ವಾಮಿಯ ಬ್ರಹ್ಮರಥೋತ್ಸವ ಅತಿ ಅದ್ದೂರಿಯಿಂದ ನಡೆಯುತ್ತದೆ. ಅಂದು ಬಂದ ಭಕ್ತರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯು ಇದೆ. - ಚೈತ್ರ (April) ಮಾಸದಲ್ಲಿ ಯುಗಾದಿ ಹಬ್ಬ ಹಾಗು ಪಂಚಾಂಗ ಶ್ರವಣ
- ವೈಶಾಖ (May) ಮಾಸದಲ್ಲಿ ಶ್ರೀರಾಮನಿಗೆ ವಿಭವ ರಥೋತ್ಸವ ಹಾಗು ರಾಮಾನುಜಾಚಾರ್ಯ ತಿರುನಕ್ಷತ್ರ.
- ಜೇಷ್ಠ (June) ಮಾಸದಲ್ಲಿ ಪರಮಾತ್ಮನಿಗೆ ಜೇಷ್ಠಾಭಿಷೇಕ ನಡೆಯುತ್ತದೆ.
- ಆಷಾಢ (July) ಮಾಸದಲ್ಲಿ, ಕನ್ನಡಿ ಸೇವೆ ಹಾಗೆ ಆ ಮಾಸದಲ್ಲಿ ಬರುವ ಪ್ರತಿ ಶುಕ್ರವಾರ ತಾಯಿಗೆ ಉಯ್ಯಾಲೆ ಉತ್ಸವ ನಡೆಯುತ್ತದೆ ಹಾಗೂ ತಿರುವಾಡಿಪುರಂ ಹಬ್ಬವನ್ನು ಕೊಂಡಾಡುತ್ತಾರೆ.
- ಶ್ರಾವಣ (August) ಮಾಸದಲ್ಲಿ ವಿಶೇಷತೆಯೆಂದರೆ ಗೋಕುಲಾಷ್ಟಮಿ, ಉಪಕರ್ಮ ಮತ್ತು ಗಾಯತ್ರಿ ಜಪಹಬ್ಬ ಹಾಗೂ ಹೋಮವನ್ನು ಹಮ್ಮಿಕೊಳ್ಳಲಾಗಿದೆ
- ಭಾದ್ರಪದ (september) ಮಾಸದಲ್ಲಿ ಪವಿತ್ರೋತ್ಸವ ನಡೆಯುತ್ತದೆ.
- ಆಶ್ಮೀಜ (October) ಮಾಸದಲ್ಲಿ ನವರಾತ್ರಿ ಉತ್ಸವವನ್ನು ಕೊಂಡಾಡುತ್ತಾರೆ.
- ಕಾರ್ತಿಕ (November) ಮಾಸದಲ್ಲಿ ವಿಷ್ಣು ದೀಪೋತ್ಸವ ಹಾಗೂ ಆನೆ ಹಬ್ಬ ನೋಡುವುದೇ ಒಂದು ಆನಂದ.
- ಮಾರ್ಗಶಿರ (December) ಮಾಸ ಎಂದರೆ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ, ತಿರುಪ್ಪಾವೈ ಮಹಾನಾಡು ಹಾಗು ಕೊಠಾರೋತ್ಸವ ತುಂಬಾನೇ ವಿಶೇಷವಾದ ದಿನಗಳು.
ವಸುದೇ ವಸುತಂ ದೆವಂ ಕಂಸ ಚಾಣುರ ಮರ್ಧನಂ… ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರು.
ಬನ್ನಿ ಎಲ್ಲರೂ ಬನ್ನಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುವ ಬನ್ನಿ.
ಕೃಷ್ಣ ಎಂದರೆ ಸಾಕು ಕಷ್ಟವೂ ಒಂದಿಷ್ಟಿಲ್ಲ ಎಂಬುದರ ಜೊತೆಗೆ ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು.
ಭಾರ್ಗವಿ ಪಿ
ಬೆಂಗಳೂರು
ವೇಣುಗೋಪಾಲಕೃಷ್ಣ ಸ್ವಾಮಿ ದೇವಾಲಯ
ವಿವಿಧತೆಯಲ್ಲಿ ಏಕತೆ ಸಾರುವುದು ನಮ್ಮ ನಾಡು, ಅದುವೇ ದೇವಾಲಯಗಳು ಬೀಡು. ಪುರಾತನ ಕಾಲದ ಇತಿಹಾಸ ಹಾಗೂ ಐತಿಹಾಸಿಕ ದೇವಾಲಯಗಳನ್ನು ನಮ್ಮ ರಾಜ್ಯಧಾನಿಯಾದ ಬೃಹತ್ ಬೆಂಗಳೂರಿನಲ್ಲಿದೆ ಎಂದರೆ ನಿಜಕ್ಕೂ ಅದು ಅತಿಶಯ ಸರಿ.
ಬೆಂಗಳೂರಿನ ಪ್ರಮುಖ ಪೂರ್ವ ಸಂಸ್ಕಾರ, ಸಂಸ್ಕೃತಿ, ಸಾಂಸ್ಕೃತಿಕ ಕೇಂದ್ರ ಬಿಂದು ಎಂದರೆ ಮಲ್ಲೇಶ್ವರಂ, ಕಾರಣ ಇದೊಂದು ಪುಣ್ಯ ಹಾಗೂ ದಿವ್ಯ ಕ್ಷೇತ್ರ. ಇಲ್ಲಿ ಎಲ್ಲಾ ಧರ್ಮದವರ ಧಾರ್ಮಿಕ ಚಟುವಟಿಕೆಗಳಿಗೆ ಮುಂದಾಗಿದೆ “ಒಂದೇ ಗುರಿ ಹಲವು ದಾರಿಗಳು” ಎಂಬ ಮಾತು ನೆನಪಾಗುತ್ತದೆ.
ಇಂದು ನಾವು ಮಲ್ಲೇಶ್ವರಂ 11ನೇ ಅಡ್ಡರಸ್ತೆಯಲ್ಲಿರುವ ಜಗತ್ತನ್ನೇ ಕಾಯುತ್ತಿರುವ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಾಲಯವನ್ನು ವೀಕ್ಷಿಸಿ, ಪುನೀತರಾಗೋಣ.
ಕೃಷ್ಣಂ ಒಂದೇ ಜಗದ್ಗುರು, ಆ ಜಗದೊಡೆಯನಿಗೆ ಮೊದಲು ಚರಣಂ, ಶರಣಂ.
ಈ ದೇವಾಲಯವು ಸುಮಾರು 125 ವರ್ಷದ ಹಿಂದಿನ ಪುರಾತನವಾದ, ವಿಶೇಷವಾದ ದೇವಾಲಯ. ಒಳಗಡೆ ವಿಶಾಲವಾದ ಆವರಣದಿಂದ ಕೂಡಿದೆ ಹಾಗೆ ತುಂಬಾ ಮಹತ್ವವುಳ್ಳ ದೇವ ಮಂದಿರ. ಇಲ್ಲಿನ ರಾಜ ಗೋಪುರವು ವೀಕ್ಷಿಸಲು ರಮಣೀಯವಾಗಿದೆ. ಗೋಪುರ ದರ್ಶನಂ ಪಾಪ ವಿನಾಶನಂ. ಗೋಪುರ ಉತ್ತರ ದಿಕ್ಕಿನಲ್ಲಿರುವುದರಿಂದ ಇದನ್ನು ಭೂಲೋಕದ ವೈಕುಂಠ ದ್ವಾರ ಎಂದು ಕರೆಯುತ್ತಾರೆ.
ಗೋಪುರದ ಒಳಗೆ ಪ್ರವೇಶಿಸಿದರೆ, ಈಶಾನ್ಯ ದಿಕ್ಕಿನಲ್ಲಿ ಸುಂದರವಾದ ಕೃಷ್ಣ ಸರೋವರವಿದ್ದು… ಅದಕ್ಕೆ ಪೂರಕವಾಗಿ ವಸಂತ ಮಂಟಪವಿದೆ. ಇಲ್ಲಿ ದೇವರ ಉತ್ಸವ ರಾಜಬೀದಿಯಲ್ಲಿ ನಡೆದು ಬಂದ ನಂತರ ಈ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಬಿಜೆಯ ಮಾಡಿಸುವುದೇ ವಿಶೇಷ.
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನ್ನಬಾರದೆ ಎಂದು ದಾಸರಲ್ಲಿ ಶ್ರೇಷ್ಠರಾದ ಪುರಂದರದಾಸರು ಹೇಳಿದ್ದಾರೆ. ಅಂತ ಸ್ವಾಮಿಯ ದರ್ಶನಕ್ಕೆ ದಾರಿ ದೀಪವಾಗಿ ನಿಂತಿರುವುದು ಧ್ವಜಸ್ತಂಬ ಹಾಗು ಗರುಡನ ಮೂರ್ತಿ. ಇನ್ನು ಮುಂದೆ ಹೆಜ್ಜೆ ಹಾಕುತ್ತಾ ಹೋದರೆ ಸಿಗುವುದು ಮಹಾದ್ವಾರ… ಇಲ್ಲಿ ಮೊದಲು ಅಕ್ಕಪಕ್ಕದಲ್ಲಿ ನಿಂತಿರುವ ಜಯ, ವಿಜಯರನ್ನು ಕಾಣಬಹುದು. ಅವರಿಗೆ ನಮಸ್ಕರಿಸಿ ಹೊಳಗೆ ಹೋದರೆ ಕಾಣಿಸುವುದು ಭವ್ಯ ದಿವ್ಯವಾದ ಗರ್ಭಗುಡಿ.. ಅಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿಯನ್ನು ಕಣ್ಣಾರೆ ಆಲಿಸಬಹುದು, ಸ್ವಾಮಿಯ ಬಲಗೈನಲ್ಲಿ ಚಕ್ರವಿದ್ದು ಹಾಗೂ ಎಡಗೈನಲ್ಲಿ ಶಂಕುವಿದೆ ಹಾಗೆ ಅವನಿಗೆ ಪ್ರಿಯವಾದ ಕೊಳಲನ್ನು ಸಹ ಹಿಡಿದಿದ್ದಾನೆ …. *ಪಾದ ದರ್ಶನಂ ಕೃಷ್ಣ ಪಾಪನಾಶನಂ, ಸರ್ವಾಂಗ ದರ್ಶನಂ ಕೃಷ್ಣ ಸರ್ವಪಪನಾಶಂ *.
ಗರ್ಭಗುಡಿಯ ಬಲಕ್ಕೆ ರುಕ್ಮಿಣಿ ತಾಯಿ ಹಾಗೆ ಎಡಕ್ಕೆ ಶ್ರೀ ನಂಬಿ ನಾರಾಯಣಸ್ವಾಮಿಯ ಮೂರ್ತಿಯನ್ನು ಕಾಣಬಹುದು.
ಈ ರುಕ್ಮಿಣಿ ತಾಯಿಗೆ ಅರಿಶಿನದಿಂದ ಅರ್ಚನೆ ಮಾಡುವುದೇ ಇಲ್ಲಿಯ ವಿಶೇಷ…. ಆಕೆಯ ಸೌಂದರ್ಯ ಕಣ್ಣು ತುಂಬಿ ಮಾರು ಹೋಗುವಂತೆ ಆಗುತ್ತದೆ….
ಈ ನಂಬಿ ನಾರಾಯಣ ಸ್ವಾಮಿಯು…. ನಂಬಿ ಬಂದವರನ್ನು ಕಾಪಾಡುತ್ತಾನೆ, ಧರ್ಮೋ ರಕ್ಷತಿ ರಕ್ಷಿತಃ ಎಂಬ ದಿವ್ಯ ಸಂದೇಶದ ಪ್ರತಿರೂಪ ಈ ಸ್ವಾಮಿ.
ಈ ದೇವಾಲಯದ ವಿಶೇಷವೇನೆಂದರೆ ಇಲ್ಲಿ ಮೊದಲು ಪ್ರತಿಷ್ಠಾಪನೆಯಾಗಿದ್ದು ನಂಬಿ ನಾರಾಯಣ ಸ್ವಾಮಿ, ಆದರೆ ಇಲ್ಲಿ ಈ ಮುದ್ದು ಗೋಪಾಲನಿಗೆ ಆಧ್ಯತೆ ನೀಡಲಾಗಿದೆ.
ಇಲ್ಲಿ ಅಂಬೆಗಾಲಿನಲ್ಲಿ ಕುಳಿತ ಕೃಷ್ಣನು ತನ್ನ ಕೈನಲ್ಲಿ ನವನೀತವನ್ನು ಹಿಡಿದಿರುವುದೇ ಒಂದು ಸೊಗಸು. ಇಲ್ಲಿಗೆ ಭಕ್ತರು ಸಂತಾನ ಪ್ರಾಪ್ತಿಗಾಗಿ ಮೊರೆ ಹೋಗುತ್ತಾರೆ ಮತ್ತು ಹರಕೆ ಹೊತ್ತುವುದು ತುಂಬಾನೇ ಶ್ರೇಷ್ಠ. ಸಂತಾನ ಬಾಗ್ಯವಾದ ನಂತರ ತೊಟ್ಟಿಲನ್ನು ಕಟ್ಟುವ ವಾಡಿಕೆ ಇದೆ.
ಪೂರ್ವದಿಕ್ಕಿನಲ್ಲಿ ಶ್ರೀವೈಷ್ಣವರ ಸಂಪ್ರದಾಯದಂತೆ ಎಲ್ಲಾ ಆಳ್ವಾರುಗಳನ್ನು, ಆಚಾರ್ಯಗಳನ್ನು ಪ್ರತಿಷ್ಠಾಪಿಸಿದ್ದಾರೆ. ಈ ಆಳ್ವಾರಗಳಲ್ಲಿ ಅವರವರ ತಿರುನಕ್ಷತ್ರದಂದು ವಿಜೃಂಭಣೆಯಿಂದ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ.
ಮುಂದೆ ಸಾಗಿದರೆ ದರ್ಪಣ ಅಂದ್ರೆ ಕನ್ನಡಿ ಸೇವೆಯ ಮಂದಿರವಿದೆ. ಇಲ್ಲಿ ಆಷಾಢ ಮಾಸ ಹಾಗೂ ವಿಶೇಷ ದಿನಗಳಲ್ಲಿ ಬಹು ಸುಂದರವಾಗಿ ಅಲಂಕರಿಸುತ್ತಾರೆ. ಆ ದರ್ಶನ ಮಾಡಿದರೆ ಭವ ಬಂಧನದಿ ಮುಕ್ತಿ ದೊರೆಯುವಂತೆ… ಆಧ್ಯಾತ್ಮಕ ಒಲವನ್ನು ಹೆಚ್ಚಿಸುತ್ತದೆ.
ಅದರ ನಂತರ ಸಿಗುವುದೇ ಪಾಕಶಾಲೆ, ವಿಧ ವಿಧವಾದ ಪ್ರಸಾದ ಹಾಗೂ ಭಕ್ಷಣವನ್ನು ಭಕ್ತಿಯಿಂದ ಮಾಡಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಇದರ ಪಕ್ಕದಲ್ಲಿ ಗೋಪಾಲಕನಿಗೆ ಪ್ರಿಯವಾದ ಗೋಶಾಲೆಯು ಇದೆ.
ಈ ದೇವಾಲಯದಲ್ಲಿ ಒಂದು ಪ್ರವಚನ ಮಂದಿರವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಧಾರ್ಮಿಕ ವಿಷಯಗಳನ್ನು ಮತ್ತು ದೇವರ ಬಗ್ಗೆ ಉಪನ್ಯಾಸವನ್ನು….ಪಂಡಿತರ ಮೂಲಕ ಮನಮುಟ್ಟುವಂತೆ ಪ್ರವಚನ ನೀಡುತ್ತಾರೆ ಜೊತೆಗೆ ಭಕ್ತನಿಗೂ ದೇವರಿಗೂ ಇರುವ ಸಂಬಂಧ ಹಾಗೂ ಅನುಬಂಧ ಇನ್ನೂ ಹೆಚ್ಚು ಹೆಚ್ಚು ಆಗುವಂತೆ ಮನಸ್ಸಿನಲ್ಲಿ ಒಂದು ಸುಂದರವಾದ ಕಲ್ಪನೆ ಮೂಡುತ್ತದೆ. ಇನ್ನೊಂದು ವಿಶೇಷ ಏನೆಂದರೆ ಪ್ರತಿವರ್ಷವು ನವರಾತ್ರಿಯ ಹಬ್ಬದಂದು ಎಲ್ಲಾ ರೀತಿಯ ಗೊಂಬೆಗಳನ್ನು ಕೂರಿಸಿ ಅಲಂಕರಿಸುತ್ತಾರೆ ಹಾಗೆ ಪ್ರತಿ ವರ್ಷವೂ ಬರುವ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಆದರ ಕಡೆಯ ದಿನದಲ್ಲಿ ಶಯನೋತ್ಸವವನ್ನು ತುಂಬಾನೇ ಅದ್ದೂರಿಯಾಗಿ, ಹೂವುಗಳಿಂದ, ಸಾಲು ಸಾಲು ವಿದ್ಯುತ್ ದೀಪಗಳಿಂದ ಅಲಂಕರಿಸಿ… ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಶ್ರೀವೈಷ್ಣವರು ಮುಖ್ಯವಾಗಿ ಪೂಜಿಸುವುದು ಗೋದಾದೇವಿ ಅಂದರೆ ಆಂಡಾಳ್ ಪ್ರತಿ ವರ್ಷ ಧನುರ್ಮಾಸದಲ್ಲಿ ನಿತ್ಯ ಆ ತಾಯಿಗೆ ಬೆಳಗಿನ ಜಾವ ವಿಶೇಷ ಪೂಜೆ ನೆರವೇರುವುದರ ಜೊತೆಗೆ ಆ ದೇವಿ ಬರೆದಿರುವ ತಿರುಪಾವೈ 30 ಪಾಶುರಗಳನ್ನು ಅನುಸಂಧಾನ ಮಾಡಿ ಪ್ರತಿನಿತ್ಯ ಒಂದೊಂದಾಗಿ ಪಟನೆ ಮಾಡಿ ಅದರ ಪ್ರವಚನವನ್ನು ನೀಡುವುದು ವಿಶೇಷ. ಆ ಮೂವತ್ತು ಪಾಶುರಗಳು *ಕೃಷ್ಣನ ವೈಭೋಗ, ಅವನ ಸೌಂದರ್ಯ, ಅವನಲ್ಲಿನ ಲೀಲೆಗಳನ್ನು ವರ್ಣಿಸಿದ್ದಾರೆ. ಹಾಗೆಯೇ ಈ 30 ದಿನವು ಸಹ ಪೊಂಗಲ್ ಪ್ರಸಾದವನ್ನು ಮಾಡಿ…. ಬಂದ ಭಕ್ತರಿಗೆ ತೀರ್ಥ ಪ್ರಸಾದವನ್ನು ಹಂಚುತ್ತಾರೆ.
ಯಜ್ಞಗಳನ್ನು ಮಾಡುವುದಕ್ಕಾಗಿ ಒಂದು ವಿಶೇಷವಾದ ಯಾಗ ಶಾಲೆಯನ್ನು ಕಟ್ಟಲಾಗಿದೆ. ಇದರಲ್ಲಿ ವಿವಿಧ ರೀತಿಯಾದ ಯಾಗಗಳ ಮೂಲಕ ಪರಮಾತ್ಮನ ಕೃಪಾಕಟಾಕ್ಷಕ್ಕೆ ಶರಣಾಗುವುದು ಮನ. ಆ ಒಂದು ಕ್ಷಣ *ದೇಹವು ದೇವಾಲಯದಂತೆ ಭಾಸವಾಗುತ್ತದೆ*.
ಈ ದೇವಾಲಯದ ಆವರಣದಲ್ಲಿ ಕೋದಂಡರಾಮ, ಲಕ್ಷ್ಮಣ, ಸೀತಾಮಾತೆ ಹಾಗೂ ಆಂಜನೇಯನನ್ನು ಸಹ ಕಾಣಬಹುದು.
ವೈಶಾಖ ಮಾಸದಲ್ಲಿ ರಾಮನಿಗೆ ರಥೋತ್ಸವ ನೆರವೇರಿಸುತ್ತಾರೆ.
ಎಲ್ಲಿ ರಾಮನು ಅಲ್ಲಿ ಹನುಮನು ಇರುತ್ತಾನೆ, ಹಾಗೆ ಈ ದೇವಾಲಯದಲ್ಲೂ ಸಹ ಹನುಮನ ಗುಡಿಯು ಇದೆ.
ಇಲ್ಲಿ ಒಂದು ಏಕಶಿಲೆಯು ಮೂರ್ತಿಯನ್ನು ಕಾಣಬಹುದು ಅಂದರೆ ಮುಂದೆ ಶ್ರೀ ಸುದರ್ಶನ್ ಚಕ್ರವಿದ್ದು, ಹಿಂಬದಿಯಲ್ಲಿ ನರಸಿಂಹ ಸ್ವಾಮಿ ಇರುವುದು ತುಂಬಾನ ವಿಶೇಷತೆ.
ಗೋಕಲಾಷ್ಟಮಿ ಹಬ್ಬದಂದು ದೇವಾಲಯವನ್ನು ಅತಿ ವೈಭೋಗ ವೈವಿಧ್ಯಮಯವಾಗಿ ಅಲಂಕರಿಸುವುದರ ಜೊತೆಗೆ ಬಗೆ ಬಗೆಯ ತಿಂಡಿ ತಿನಿಸುಗಳಿಂದ ಹಾಗೂ ಹಣ್ಣುಗಳಿಂದ ಅಲಂಕರಿಸುತ್ತಾರೆ. ಮಾನವನು ಸ್ವಾಮಿಯ ದರ್ಶನದಿಂದ ಒಂದು ದೈವೀಕವಾದ ಸಂಬಂಧದಲ್ಲಿ ಆ ಸ್ವಾಮಿಯನ್ನು ಸ್ಮರಿಸ್ಸುತ್ತಾನೆ.
ಇಲ್ಲಿಯ ವಿಶೇಷ ದಿನಗಳು ಯಾವುದೆಂದರೆ…
- ಪುಷ್ಯ (January) ಮಾಸದಲ್ಲಿ…. ಸಂಕ್ರಾಂತಿ ಹಾಗೂ ಕನು ಹಬ್ಬ.
- ಮಾಘ (February) ಮಾಸ.
ಹಾಗೂ ಪಾಲ್ಗೊಣ (March) ಮಾಸದಲ್ಲಿ ವೇಣುಗೋಪಾಲಕೃಷ್ಣ ಸ್ವಾಮಿಯ ಬ್ರಹ್ಮರಥೋತ್ಸವ ಅತಿ ಅದ್ದೂರಿಯಿಂದ ನಡೆಯುತ್ತದೆ. ಅಂದು ಬಂದ ಭಕ್ತರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯು ಇದೆ. - ಚೈತ್ರ (April) ಮಾಸದಲ್ಲಿ ಯುಗಾದಿ ಹಬ್ಬ ಹಾಗು ಪಂಚಾಂಗ ಶ್ರವಣ
- ವೈಶಾಖ (May) ಮಾಸದಲ್ಲಿ ಶ್ರೀರಾಮನಿಗೆ ವಿಭವ ರಥೋತ್ಸವ ಹಾಗು ರಾಮಾನುಜಾಚಾರ್ಯ ತಿರುನಕ್ಷತ್ರ.
- ಜೇಷ್ಠ (June) ಮಾಸದಲ್ಲಿ ಪರಮಾತ್ಮನಿಗೆ ಜೇಷ್ಠಾಭಿಷೇಕ ನಡೆಯುತ್ತದೆ.
- ಆಷಾಢ (July) ಮಾಸದಲ್ಲಿ, ಕನ್ನಡಿ ಸೇವೆ ಹಾಗೆ ಆ ಮಾಸದಲ್ಲಿ ಬರುವ ಪ್ರತಿ ಶುಕ್ರವಾರ ತಾಯಿಗೆ ಉಯ್ಯಾಲೆ ಉತ್ಸವ ನಡೆಯುತ್ತದೆ ಹಾಗೂ ತಿರುವಾಡಿಪುರಂ ಹಬ್ಬವನ್ನು ಕೊಂಡಾಡುತ್ತಾರೆ.
- ಶ್ರಾವಣ (August) ಮಾಸದಲ್ಲಿ ವಿಶೇಷತೆಯೆಂದರೆ ಗೋಕುಲಾಷ್ಟಮಿ, ಉಪಕರ್ಮ ಮತ್ತು ಗಾಯತ್ರಿ ಜಪಹಬ್ಬ ಹಾಗೂ ಹೋಮವನ್ನು ಹಮ್ಮಿಕೊಳ್ಳಲಾಗಿದೆ
- ಭಾದ್ರಪದ (september) ಮಾಸದಲ್ಲಿ ಪವಿತ್ರೋತ್ಸವ ನಡೆಯುತ್ತದೆ.
- ಆಶ್ಮೀಜ (October) ಮಾಸದಲ್ಲಿ ನವರಾತ್ರಿ ಉತ್ಸವವನ್ನು ಕೊಂಡಾಡುತ್ತಾರೆ.
- ಕಾರ್ತಿಕ (November) ಮಾಸದಲ್ಲಿ ವಿಷ್ಣು ದೀಪೋತ್ಸವ ಹಾಗೂ ಆನೆ ಹಬ್ಬ ನೋಡುವುದೇ ಒಂದು ಆನಂದ.
- ಮಾರ್ಗಶಿರ (December) ಮಾಸ ಎಂದರೆ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ, ತಿರುಪ್ಪಾವೈ ಮಹಾನಾಡು ಹಾಗು ಕೊಠಾರೋತ್ಸವ ತುಂಬಾನೇ ವಿಶೇಷವಾದ ದಿನಗಳು.
ವಸುದೇ ವಸುತಂ ದೆವಂ ಕಂಸ ಚಾಣುರ ಮರ್ಧನಂ… ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರು.
ಬನ್ನಿ ಎಲ್ಲರೂ ಬನ್ನಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುವ ಬನ್ನಿ.
ಕೃಷ್ಣ ಎಂದರೆ ಸಾಕು ಕಷ್ಟವೂ ಒಂದಿಷ್ಟಿಲ್ಲ ಎಂಬುದರ ಜೊತೆಗೆ ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು.
ಭಾರ್ಗವಿ ಪಿ
ಬೆಂಗಳೂರು