ಯಲಹಂಕ : ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ-2023 ಕ್ರಿಕೆಟ್ ಪಂದ್ಯಾವಳಿಗಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ‘ಮೈಸೂರು ವಾರಿಯರ್ಸ್’ ತಂಡಕ್ಕಾಗಿ ಯಲಹಂಕದ ಇಟಗಲ್ಪುರ ಬಳಿಯಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿ ಸೋಮವಾರ ಟ್ಯಾಲೆಂಟ್ ಹಂಟ್ ನಡೆಸಿತು.
ಈ ಕುರಿತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಸಿಓಓ, ಮೈಸೂರು ವಾರಿಯರ್ಸ್ ತಂಡದ ವ್ಯವಸ್ಥಾಪಕ ಕೆ.ಎಂ.ಸುರೇಶ್ ಮಾತನಾಡಿ ‘ಮಹಾರಾಜ ಟ್ರೋಪಿ ಕ್ರಿಕೆಟ್ ಪಂದ್ಯಾವಳಿಯನ್ನು ಈ ಹಿಂದೆ ಕೆಪಿಎಲ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮೈಸೂರು ಮಹಾರಾಜರಾದ ಶ್ರೀಕಂಠದತ್ತ ಒಡೆಯರ್ರವರ ಹೆಸರಿನಲ್ಲಿ ಮಹಾರಾಜ ಟ್ರೋಪಿ ಎಂದು ಬದಲಾಯಿಸಿ ನಡೆಸಲಾಗುತ್ತಿದೆ. ಮಹಾರಾಜ ಟ್ರೋಪಿ ಕ್ರಿಕೆಟ್ ಪಂದ್ಯಾವಳಿ ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ.
ಮೈಸೂರು ಪ್ರಾಂತ್ಯದ ವಿವಿಧ ಜಿಲ್ಲೆಗಳ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಟ್ಯಾಲೆಂಟ್ ಹಂಟ್ ನಡೆಸಿದೆ.
ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಟ್ಯಾಲೆಂಟ್ ಹಂಟ್ ಪ್ರಕ್ರಿಯೆಯಲ್ಲಿ ಸುಮಾರು 271 ಕ್ರಿಕೆಟ್ ಪ್ರತಿಭೆಗಳು ಈ ವರ್ಷದ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲು ನಡೆಸುತ್ತಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ 271 ಕ್ರಿಕೆಟ್ ಪ್ರತಿಭೆಗಳಲ್ಲಿ 15 ಕ್ರಿಕೆಟ್ ಆಟಗಾರರನ್ನು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ಮೈಸೂರು ವಾರಿಯರ್ಸ್ ತಂಡಕ್ಕೆ ಆಕ್ಷನ್ ಮೂಲಕ ಕೊಂಡುಕೊಳ್ಳುವ ಸಲುವಾಗಿ ಈ ಟ್ಯಾಲೆಂಟ್ ಹಂಟ್ ನಡೆಸಿದೆ. ಮುಂದಿನ ಟ್ಯಾಲೆಂಟ್ ಹಂಟ್ ಮೈಸೂರಿನಲ್ಲಿ ಜುಲೈ 29 ರಂದು ಎಸ್ಡಿಎನ್ಆರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ಇಬ್ಬರು ಆಟಗಾರರನ್ನು ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.
ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಉತ್ಸಾಹಿ ಯುವ ಕ್ರಿಕೆಟಿಗರು ಮೈಸೂರು ವಾರಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇಂದಿನ ಟ್ಯಾಲೆಂಟ್ ಹಂಟ್ ಪ್ರಕ್ರಿಯೆಯಲ್ಲಿ 56 ಮಧ್ಯಮ ವೇಗದ ಬೌಲರ್ಗಳು, 55 ಸ್ಪಿನ್ನರ್ಗಳು, 50 ಬ್ಯಾಟ್ಸ್ಮನ್ಗಳು, 80 ಆಲ್ರೌಂಡರ್ಗಳು ಮತ್ತು 30 ವಿಕೆಟ್ ಕೀಪರ್ಗಳು ಸೇರಿದಂತೆ ಒಟ್ಟು 271 ಯುವ ಕ್ರಿಕೆಟಿಗರು ಭಾಗವಹಿಸಿದ್ದು, ಮೈಸೂರು ವಾರಿಯರ್ಸ್ನ ಪ್ರಧಾನ ಕೋಚ್ ಆರ್ಎಕ್ಸ್ ಮುರಳೀಧರ್, ಸಹಾಯಕ ಕೋಚ್ಗಳಾದ ವಿಜಯ್ ಮದ್ಯಾಲ್ಕರ್, ಆದಿತ್ಯ ಸಾಗರ್ ಮತ್ತು ಅರ್ಜುನ್ ಹೊಯ್ಸಳ ಅವರನ್ನು ಒಳಗೊಂಡ 4 ಸದಸ್ಯರ ತಂಡದ ಉಸ್ತುವಾರಿಯಲ್ಲಿ ಇಂದಿನ ಆಯ್ಕೆ ಪ್ರಕ್ರಿಯೆ ನಡೆದಿದೆ. ಖ್ಯಾತ ಕ್ರಿಕೆಟ್ ಆಟಗಾರರಾದ ಮನೀಷ್ ಪಾಂಡೆ, ಜಡಾದೀಶ ಸುಚಿತ್, ಕರುಣ್ ನಾಯರ್, ಅಭಿಮನ್ಯು ಮುತ್ತು, ಅಮಿತ್ ವರ್ಮಾ ಕೆ, ಅಭಿನವ್ ಮನೋಹರ್ ಮುಂತಾದವರು ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ ಎಂದು ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು.
ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಮೈಸೂರು ವಾರಿಯರ್ಸ್ ತಂಡದಿಂದ ಟ್ಯಾಲೆಂಟ್ ಹಂಟ್ :
ಯಲಹಂಕ : ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ-2023 ಕ್ರಿಕೆಟ್ ಪಂದ್ಯಾವಳಿಗಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ‘ಮೈಸೂರು ವಾರಿಯರ್ಸ್’ ತಂಡಕ್ಕಾಗಿ ಯಲಹಂಕದ ಇಟಗಲ್ಪುರ ಬಳಿಯಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿ ಸೋಮವಾರ ಟ್ಯಾಲೆಂಟ್ ಹಂಟ್ ನಡೆಸಿತು.
ಈ ಕುರಿತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಸಿಓಓ, ಮೈಸೂರು ವಾರಿಯರ್ಸ್ ತಂಡದ ವ್ಯವಸ್ಥಾಪಕ ಕೆ.ಎಂ.ಸುರೇಶ್ ಮಾತನಾಡಿ ‘ಮಹಾರಾಜ ಟ್ರೋಪಿ ಕ್ರಿಕೆಟ್ ಪಂದ್ಯಾವಳಿಯನ್ನು ಈ ಹಿಂದೆ ಕೆಪಿಎಲ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಮೈಸೂರು ಮಹಾರಾಜರಾದ ಶ್ರೀಕಂಠದತ್ತ ಒಡೆಯರ್ರವರ ಹೆಸರಿನಲ್ಲಿ ಮಹಾರಾಜ ಟ್ರೋಪಿ ಎಂದು ಬದಲಾಯಿಸಿ ನಡೆಸಲಾಗುತ್ತಿದೆ. ಮಹಾರಾಜ ಟ್ರೋಪಿ ಕ್ರಿಕೆಟ್ ಪಂದ್ಯಾವಳಿ ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ.
ಮೈಸೂರು ಪ್ರಾಂತ್ಯದ ವಿವಿಧ ಜಿಲ್ಲೆಗಳ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಟ್ಯಾಲೆಂಟ್ ಹಂಟ್ ನಡೆಸಿದೆ.
ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಟ್ಯಾಲೆಂಟ್ ಹಂಟ್ ಪ್ರಕ್ರಿಯೆಯಲ್ಲಿ ಸುಮಾರು 271 ಕ್ರಿಕೆಟ್ ಪ್ರತಿಭೆಗಳು ಈ ವರ್ಷದ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲು ನಡೆಸುತ್ತಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ 271 ಕ್ರಿಕೆಟ್ ಪ್ರತಿಭೆಗಳಲ್ಲಿ 15 ಕ್ರಿಕೆಟ್ ಆಟಗಾರರನ್ನು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ಮೈಸೂರು ವಾರಿಯರ್ಸ್ ತಂಡಕ್ಕೆ ಆಕ್ಷನ್ ಮೂಲಕ ಕೊಂಡುಕೊಳ್ಳುವ ಸಲುವಾಗಿ ಈ ಟ್ಯಾಲೆಂಟ್ ಹಂಟ್ ನಡೆಸಿದೆ. ಮುಂದಿನ ಟ್ಯಾಲೆಂಟ್ ಹಂಟ್ ಮೈಸೂರಿನಲ್ಲಿ ಜುಲೈ 29 ರಂದು ಎಸ್ಡಿಎನ್ಆರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ಇಬ್ಬರು ಆಟಗಾರರನ್ನು ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.
ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಉತ್ಸಾಹಿ ಯುವ ಕ್ರಿಕೆಟಿಗರು ಮೈಸೂರು ವಾರಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇಂದಿನ ಟ್ಯಾಲೆಂಟ್ ಹಂಟ್ ಪ್ರಕ್ರಿಯೆಯಲ್ಲಿ 56 ಮಧ್ಯಮ ವೇಗದ ಬೌಲರ್ಗಳು, 55 ಸ್ಪಿನ್ನರ್ಗಳು, 50 ಬ್ಯಾಟ್ಸ್ಮನ್ಗಳು, 80 ಆಲ್ರೌಂಡರ್ಗಳು ಮತ್ತು 30 ವಿಕೆಟ್ ಕೀಪರ್ಗಳು ಸೇರಿದಂತೆ ಒಟ್ಟು 271 ಯುವ ಕ್ರಿಕೆಟಿಗರು ಭಾಗವಹಿಸಿದ್ದು, ಮೈಸೂರು ವಾರಿಯರ್ಸ್ನ ಪ್ರಧಾನ ಕೋಚ್ ಆರ್ಎಕ್ಸ್ ಮುರಳೀಧರ್, ಸಹಾಯಕ ಕೋಚ್ಗಳಾದ ವಿಜಯ್ ಮದ್ಯಾಲ್ಕರ್, ಆದಿತ್ಯ ಸಾಗರ್ ಮತ್ತು ಅರ್ಜುನ್ ಹೊಯ್ಸಳ ಅವರನ್ನು ಒಳಗೊಂಡ 4 ಸದಸ್ಯರ ತಂಡದ ಉಸ್ತುವಾರಿಯಲ್ಲಿ ಇಂದಿನ ಆಯ್ಕೆ ಪ್ರಕ್ರಿಯೆ ನಡೆದಿದೆ. ಖ್ಯಾತ ಕ್ರಿಕೆಟ್ ಆಟಗಾರರಾದ ಮನೀಷ್ ಪಾಂಡೆ, ಜಡಾದೀಶ ಸುಚಿತ್, ಕರುಣ್ ನಾಯರ್, ಅಭಿಮನ್ಯು ಮುತ್ತು, ಅಮಿತ್ ವರ್ಮಾ ಕೆ, ಅಭಿನವ್ ಮನೋಹರ್ ಮುಂತಾದವರು ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ ಎಂದು ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು.