ಹುಟ್ಟುಹಬ್ಬದ ಶುಭಾಶಯಗಳು ಅಮಾನುಲ್ಲಾ ರವರ. ಬೆಂಗಳೂರು ಉತ್ತರ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಶುಭಕೋರುವವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಾಯಕರು ಕಾರ್ಯಕರ್ತರು ಹಾಗೂ ಸ್ನೇಹಿತರು
Post navigation
ಬೃಹತ್ ಆಟೋರ್ಯಾಲಿ,ಬೃಹತ್ ಸೇಬುಹಾರ,ಬೆಳ್ಳಿಖಡ್ಗ ಉಡುಗೊರೆ ನೀಡಿ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ ಹೊಸಕೋಟೆ : ತಾಲ್ಲೂಕಿನ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರು 73ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹೊಸಕೋಟೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಅಭಿನಂದಿಸಿದರು. ನಗರದ ಎಸ್.ಜೆ.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಎಂಟಿಬಿ ನಾಗರಾಜ್ ರವರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ, ಸಮ್ಮುಖದಲ್ಲಿ ಆಚರಿಸಿಕೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದು ನಮ್ಮ ಹುಟ್ಟುಹಬ್ಬದ ಪ್ರಯುಕ್ತ ಅನಾಥಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿ ಹೊಸಕೋಟೆ ನಗರದ ಅವಿಮುಕ್ತಶ್ವರಸ್ವಾಮಿ, ಆಂಜಿನೇಯಸ್ವಾಮಿ, ಶಾರದಾಂಭೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದೇನೆ. ನನ್ನ 72ವರ್ಷಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದನ್ನು ನೋಡಿದ್ದೇನೆ. ಎಲ್ಲಾ ಏಳು ಬಿಳುಗಳನ್ನು ರಾಜಕೀಯದಲ್ಲೂ ನೋಡಿದ್ದೇನೆ. ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಎಂಟಿಬಿ ನಾಗರಾಜ್ ಯಾರು ಎಂದು ಗುರ್ತಿಸಿದ್ದು ಹೊಸಕೋಟೆ ತಾಲ್ಲೂಕು ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೆ. ನಾನು ಈ ತಾಲೂಕಿನಲ್ಲಿ ಸತತವಾಗಿ ಜನರ ಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದು, ಹಣ ಆಸ್ತಿ ಮಾಡಲು ನಾನುಬಂದವನಲ್ಲ. ಬಡವರ ಸೇವೆ ಮಾಡಲು ನಾನು ಬಂದಿದ್ದು ನಾನು ಬಿಜೆಪಿಗೆ ಹೋಗಲು ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ ಸ್ಪಂದಿಸದೆ ಇದ್ದರಿಂದ ನಾನು ಪಕ್ಷ ಬಿಡಬೇಕಾಯಿತು. ಕಳೆದ 23ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷ ಎರಡು ಸಾವಿರ ಮತಗಳಿಸಿದ್ದೇನೆ. ಆದರೆ, ಒಂದು ಸಮುದಾಯ ಹೆಚ್ಚಿನ ಮತ ನೀಡದ ಕಾರಣ ನನ್ನ ಸೋಲಾಯಿತು. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡೋಣ . ತಾಲೂಕಿನ ಅಭಿವೃದ್ಧಿ ಮಾಡೋಣ ಎಂದರು. ಹುಲ್ಲೂರು ಸಿ ಮಂಜುನಾಥ್, ಕಿರಣ್ ಕುಮಾರ್, ವೈ.ಎಸ್.ಎಂ ಮಂಜುಗೌಡ ರವರು ಎಂಟಿಬಿ ನಾಗರಾಜ್ ರವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು. ಕರುಣೆಗೋಡೆಯ ಚೇತನ್ ರವರ ನೇತೃತ್ವದಲ್ಲಿ ಸೇಬು ಹಣ್ಣಿನ ಬೃಹತ್ ಗಾತ್ರದ ಹಾರ ಹಾಕಿ ಶುಭ ಕೋರಿದರು. ಯುವ ಮುಖಂಡ ಬೀರೇಶ್ ರವರ ನೇತೃತ್ವದಲ್ಲಿ ಬೃಹತ್ ಆಟೋ ರ್ಯಾಲಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹುಲ್ಲೂರು ಸಿ ಮಂಜುನಾಥ್, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್, ಮುಖಂಡರುಗಳಾದ ಹುಲ್ಲೂರು ಕಿರಣ್ ಕುಮಾರ್, ವೈ ಎಸ್ ಎಂ ಮಂಜುಗೌಡ ಅಬಕಾರಿ ಶ್ರೀನಿವಾಸಯ್ಯ,ರಾಮಾಂಜಿನಿ,ಅರುಣ್ ಕುಮಾರ್,ಕೋಡಿಹಳ್ಳಿ ಜನಾರ್ದನ್ ಗೌಡ, ಶೌರತ್, ದೂಡ್ಡಮನೆ ಲಿಂಗಾಪುರ ಮಂಜುನಾಥ್,ಚೀಮಂಡಳಿ ಮಂಜಣ್ಣ,ನಿತಿನ್, ದೇವರಾಜು, ಗಂಗರಾಜು, ಬಿ.ನಾರಾಯಣಸ್ವಾಮಿ, ನವೀನ್, ಅತ್ತಿವಟ್ಟ ನಾಗೇಶ್, ಜಿಕೆಬಿ ಕಾಂತರಾಜು, ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.