ಬಿ.ಇ.ಎಂ.ಎಲ್. ನಗರದ ಸಿಲ್ವನ್ ವಿಲ್ಲಾ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ “ಡಿ.ಕೆ. ಹಳ್ಳಿ ಪ್ಲಾಂಟೇಶನ್ ಬ್ಲಾಕ್ ಎ” ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ನೂತನವಾಗಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತ್ತೊಂದು ಚುನಾವಣಾ ರಣರಂಗಕ್ಕೆ ವೇದಿಕೆ ಸನ್ನದ್ದವಾಗಿದೆ, ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸುವುದರ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ, ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಲೋಕಸಭೆಯ ಚುನಾವಣೆಗೆ ರಾಜಕೀಯ ದಿಕ್ಸೂಚಿಯಾಗಲಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕರ್ತರು ಮುಖಂಡರು ತಮ್ಮಲ್ಲಿರುವಂತಹ
ವೈಮನಸ್ಸುಗಳನ್ನು ಬಿಟ್ಟು ಒಟ್ಟಾಗಿ ಸಂಘಟನಾತ್ಮಕವಾಗಿ ಪಕ್ಷವನ್ನು ಬೆಳೆಸುವುದರ ಮೂಲಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಯಶೀಲರಾಗಬೇಕು. ಹಾಗೂ ಮುಂಬರುವ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಗದ್ದಿಗೆಯುಸಹ ಕಾಂಗ್ರೆಸ್ ಪಕ್ಷದ ಪಾಲಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕರ ನಿರ್ಧಾರ ಅಂತಿಮ, ಮುಖಂಡರು ತೀರ್ಮಾನಕ್ಕೆ ಬದ್ಧರಾಗಬೇಕು.
ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಆಕಾಂಕ್ಷಿತ ಅಭ್ಯರ್ಥಿ ಜಿ.ಗೋಪಾಲರೆಡ್ಡಿ ಅವರು ಮಾತನಾಡಿ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ, ಆದರೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ಅವರು ನಗರ ಪ್ರದೇಶದವಾಸಿಗಳಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವಂತೆ ತಿಳಿಸಿದರು, ಈ ಹಿನ್ನೆಲೆಯಲ್ಲಿ ನಾನು ಅಧ್ಯಕ್ಷ ಸ್ಥಾನದಿಂದ ದೂರ ಸರಿದಿದ್ದೇನೆ, ಮುಂದಿನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸುರೇಶ್ ಮತ್ತು ರಾಮಯ್ಯನವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ, ಶಾಸಕರ ಮತ್ತು ವರಿಷ್ಠರ ತೀರ್ಮಾನ ಅಂತಿಮವಾಗುತ್ತದೆ. ಈ ಹಿನ್ನಲೆಯಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೂ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ ಒಟ್ಟಾಗಿ ದುಡಿಯಬೇಕು ಎಂದು ತಿಳಿಸಿದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರ 3ನೇ ಬಾರಿ ಗೆಲುವಿಗೆ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಮತದಾರರ ಪಾತ್ರ ಮಹತ್ವದ್ದಾಗಿದೆ, ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷ ಎರಡು ಭಾಗಗಳಾಗಿ ಒಡೆದು ಹೋಗಿತ್ತು ಆದರೆ ಇಂದು ಅನೇಕ ಮಹಾನ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮತ್ತಷ್ಟು ಶಕ್ತಿ ತುಂಬಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಮರ್ ನಾಥ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ನಾರಾಯಣಮೂರ್ತಿ, ಡಿ.ಎಂ.ಕೆ. ಪಕ್ಷದ ಥಾಮಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು, ಹಾಗೂ ಅಂಬೇಡ್ಕರ್ ವಾದಿ ರಾಜಕೀಯ ಮುತ್ಸದಿಗಳು ಆದಂತ ಸೇದುರಾಮನ್ ರವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು “ಅಂಬೇಡ್ಕರ್ ಅವಾರ್ಡ್ ಫರ್ ಸೋಶಿಯಲ್ ಸರ್ವಿಸ್” ಎಂಬ ಪಾರಿತೋಷಕ ನೀಡಿ ಗೌರವಿಸಲಾಯಿತು.
ಡಿಕೆ ಹಳ್ಳಿ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಉಸ್ತುವರಿಯಾದ ಶ್ರೀ ಯುತ ಶ್ರೀ.ಜಿ. ಗೋಪಾಲರೆಡ್ಡಿ. ಹಿರಿಯ ಕಾಂಗ್ರೆಸ್ ನಾಯಕರಾದ ಗ್ರಾಮ ಪಂಚಾಯಿತಿ ಸದಸ್ಯ ಎ.ಸಿ. ರಾಮಯ್ಯ, ಜೆ ಸುರೇಶ್. ಮತ್ತು ಸಮಜಸೇವಕರಾದ ಸೇತುರಾಮಯ್ಯ. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು. ಮಾಜಿ ಮಂಡಲ್ ಪ್ರಧಾನಿ ಗೋವಿಂದಪ್ಪ. ಗ್ರಾಮ ಪಂಚಾಯಿತಿ ಸದಸ್ಯರಾದ ನಿತ್ಯ. ಮೋದಿ. ಆನಂದ್. ರಾಮಪ್ಪ. ಕೃಷ್ಣಪ್ಪ. ಡಿ.ಕೆ. ಹಳ್ಳಿ ಪಂಚಾಯಿತಿ ಯುವ ಮುಖಂಡರಾದ ಎಸ್.ಗಿರೀಶ್ ಮತ್ತು ಮುಖಂಡರಾದ ಏಸು. ನಾಗರಾಜ್. ಕರುಣಾ ಮುರ್ತಿ. ಸತ್ಯನಾರಾಯಣ. ಷಣ್ಮುಗಂ. ರಾಮ್ದಾಸ್. ಶಾಂತಕುಮಾರ್. ನವೀನ್. ರಮೇಶ್. ಇನ್ನು ಅನೇಕ ನಾಯಕರು ಭಾಗವಹಿಸಿದ್ದರು.
ಬಂಗಾರಪೇಟೆ: ಕಾಂಗ್ರೆಸ್ ಪಕ್ಷ ನನ್ನ ತವರು ಮನೆಇದ್ದಂತೆ ಕಾರಣಾಂತರಗಳಿಂದ ಕುಟುಂಬ ಸದಸ್ಯರ ನಡುವಿನ ವೈಮನಸ್ಸಿನಿಂದ ಪಕ್ಷವನ್ನು ತ್ಯಜಿಸುವ ಅನಿವಾರ್ಯವಿತ್ತು, ಆದರೆ ಇಂದು ಪುನಃ ಮರಳಿ ತವರು ಪಕ್ಷಕ್ಕೆ ಬಂದಿರುವುದು ಅತ್ಯಂತ ಸಂತಸದ ಸಂಗತಿ, ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನ ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಪಕ್ಷವನ್ನು ಸಂಘಟಿಸಿ ಸದೃಢವಾಗಿ ಕಟ್ಟಿ ಬೆಳೆಸುವುದರೊಂದಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯ ಗದ್ದುಗೆಯನ್ನು ಹಿಡಿಯಲಾಗುವುದು. ಎಂದು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಮರ್ ನಾಥ್ ತಿಳಿಸಿದರು.
ಬಿ.ಇ.ಎಂ.ಎಲ್. ನಗರದ ಸಿಲ್ವನ್ ವಿಲ್ಲಾ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ “ಡಿ.ಕೆ. ಹಳ್ಳಿ ಪ್ಲಾಂಟೇಶನ್ ಬ್ಲಾಕ್ ಎ” ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ನೂತನವಾಗಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತ್ತೊಂದು ಚುನಾವಣಾ ರಣರಂಗಕ್ಕೆ ವೇದಿಕೆ ಸನ್ನದ್ದವಾಗಿದೆ, ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸುವುದರ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ, ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಲೋಕಸಭೆಯ ಚುನಾವಣೆಗೆ ರಾಜಕೀಯ ದಿಕ್ಸೂಚಿಯಾಗಲಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕರ್ತರು ಮುಖಂಡರು ತಮ್ಮಲ್ಲಿರುವಂತಹ
ವೈಮನಸ್ಸುಗಳನ್ನು ಬಿಟ್ಟು ಒಟ್ಟಾಗಿ ಸಂಘಟನಾತ್ಮಕವಾಗಿ ಪಕ್ಷವನ್ನು ಬೆಳೆಸುವುದರ ಮೂಲಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಯಶೀಲರಾಗಬೇಕು. ಹಾಗೂ ಮುಂಬರುವ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಗದ್ದಿಗೆಯುಸಹ ಕಾಂಗ್ರೆಸ್ ಪಕ್ಷದ ಪಾಲಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕರ ನಿರ್ಧಾರ ಅಂತಿಮ, ಮುಖಂಡರು ತೀರ್ಮಾನಕ್ಕೆ ಬದ್ಧರಾಗಬೇಕು.
ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಆಕಾಂಕ್ಷಿತ ಅಭ್ಯರ್ಥಿ ಜಿ.ಗೋಪಾಲರೆಡ್ಡಿ ಅವರು ಮಾತನಾಡಿ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ, ಆದರೆ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ಅವರು ನಗರ ಪ್ರದೇಶದವಾಸಿಗಳಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವಂತೆ ತಿಳಿಸಿದರು, ಈ ಹಿನ್ನೆಲೆಯಲ್ಲಿ ನಾನು ಅಧ್ಯಕ್ಷ ಸ್ಥಾನದಿಂದ ದೂರ ಸರಿದಿದ್ದೇನೆ, ಮುಂದಿನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸುರೇಶ್ ಮತ್ತು ರಾಮಯ್ಯನವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ, ಶಾಸಕರ ಮತ್ತು ವರಿಷ್ಠರ ತೀರ್ಮಾನ ಅಂತಿಮವಾಗುತ್ತದೆ. ಈ ಹಿನ್ನಲೆಯಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೂ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ ಒಟ್ಟಾಗಿ ದುಡಿಯಬೇಕು ಎಂದು ತಿಳಿಸಿದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರ 3ನೇ ಬಾರಿ ಗೆಲುವಿಗೆ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಮತದಾರರ ಪಾತ್ರ ಮಹತ್ವದ್ದಾಗಿದೆ, ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷ ಎರಡು ಭಾಗಗಳಾಗಿ ಒಡೆದು ಹೋಗಿತ್ತು ಆದರೆ ಇಂದು ಅನೇಕ ಮಹಾನ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮತ್ತಷ್ಟು ಶಕ್ತಿ ತುಂಬಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಮರ್ ನಾಥ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ನಾರಾಯಣಮೂರ್ತಿ, ಡಿ.ಎಂ.ಕೆ. ಪಕ್ಷದ ಥಾಮಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು, ಹಾಗೂ ಅಂಬೇಡ್ಕರ್ ವಾದಿ ರಾಜಕೀಯ ಮುತ್ಸದಿಗಳು ಆದಂತ ಸೇದುರಾಮನ್ ರವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು “ಅಂಬೇಡ್ಕರ್ ಅವಾರ್ಡ್ ಫರ್ ಸೋಶಿಯಲ್ ಸರ್ವಿಸ್” ಎಂಬ ಪಾರಿತೋಷಕ ನೀಡಿ ಗೌರವಿಸಲಾಯಿತು.
ಡಿಕೆ ಹಳ್ಳಿ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಉಸ್ತುವರಿಯಾದ ಶ್ರೀ ಯುತ ಶ್ರೀ.ಜಿ. ಗೋಪಾಲರೆಡ್ಡಿ. ಹಿರಿಯ ಕಾಂಗ್ರೆಸ್ ನಾಯಕರಾದ ಗ್ರಾಮ ಪಂಚಾಯಿತಿ ಸದಸ್ಯ ಎ.ಸಿ. ರಾಮಯ್ಯ, ಜೆ ಸುರೇಶ್. ಮತ್ತು ಸಮಜಸೇವಕರಾದ ಸೇತುರಾಮಯ್ಯ. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು. ಮಾಜಿ ಮಂಡಲ್ ಪ್ರಧಾನಿ ಗೋವಿಂದಪ್ಪ. ಗ್ರಾಮ ಪಂಚಾಯಿತಿ ಸದಸ್ಯರಾದ ನಿತ್ಯ. ಮೋದಿ. ಆನಂದ್. ರಾಮಪ್ಪ. ಕೃಷ್ಣಪ್ಪ. ಡಿ.ಕೆ. ಹಳ್ಳಿ ಪಂಚಾಯಿತಿ ಯುವ ಮುಖಂಡರಾದ ಎಸ್.ಗಿರೀಶ್ ಮತ್ತು ಮುಖಂಡರಾದ ಏಸು. ನಾಗರಾಜ್. ಕರುಣಾ ಮುರ್ತಿ. ಸತ್ಯನಾರಾಯಣ. ಷಣ್ಮುಗಂ. ರಾಮ್ದಾಸ್. ಶಾಂತಕುಮಾರ್. ನವೀನ್. ರಮೇಶ್. ಇನ್ನು ಅನೇಕ ನಾಯಕರು ಭಾಗವಹಿಸಿದ್ದರು.