ವಿದ್ಯಾರ್ಥಿಗಳಲ್ಲಿ ಆಸ್ತಿ ಸಂಪತ್ತು ಅಲ್ಲ ವಿನಯ ಧರ್ಮವಿರಬೇಕು ಪ್ರಣವಾನಂದಸ್ವಾಮಿ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹೊಸಕೋಟೆ : ವಿದ್ಯಾರ್ಥಿಗಳಲ್ಲಿ ಆಸ್ತಿ ಸಂಪತ್ತು ವಿನಯ ಧರ್ಮವಿರಬೇಕು ಎಂದು ಹೊಸಕೋಟೆ ತಾಲ್ಲೂಕಿನ ಶಿವನಾಪುರದ ಆಧಿಶಕ್ತಿ ಮಹಾಸಂಸ್ಥಾನ ಮಠದ ಪ್ರಣವಾನಂದಸ್ವಾಮಿ ಹೇಳಿದರು. ಅವರು ಹೊಸಕೋಟೆ ನಗರದ ಎಸ್. ಜೆ.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ತಾಲ್ಲೂಕು ವನ್ನಿಕುಲ ತಿಗಳರ ಸಂಘ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಿಸಿ ಮಾತನಾಡಿದರು. ವಿನಯ ಇದ್ದರೆ ವಿದ್ಯೆ ತಾನಾಗಿಯೇ ಬರುತ್ತದೆ ಸರಿ ಧರ್ಮಮಾರ್ಗ ಎಂದರೆ ಸಂಸ್ಕಾರ ಇಲ್ಲವಾಗಿ ನಾವು ಸಮಾಜದಲ್ಲಿ ಸಂಸಾರಿಕವಾದ ಜೀವನ ನಡೆಸುವುದು ದೇಶದಲ್ಲಿ ಸಾಧುಸಂತರ ದರ್ಶನ ಮಾಡಿದರೆ ಅವರು ಕರುಣೆಯನ್ನು ಮಾಡುತ್ತಾರೆ ಅದ್ದರಿಂದ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣವನ್ನು ಕೊಡಬೇಕು ಆಗ ಸಮಾಜವನ್ನು ಕಟ್ಟೋಕೆ ಸಾಧ್ಯವಾಗುತ್ತೆ ಡಾ.ಅಂಬೇಡ್ಕರ್ ಒಂದು ಮಾತನ್ನು ಹೇಳುತ್ತಾರೆ ಮೊದಲು ಶಿಕ್ಷಣ ಸಂಘಟನೆ ಆಮೇಲೆ ಹೋರಾಟ ಮನುಷ್ಯನಿಗೂ ಸಾವಿದ್ದೆ ಇರುತ್ತೆ ಸಾವಿಲ್ಲದ್ದು ಮನುಷ್ಯ ಮಾಡುವ ಕೆಲಸಕ್ಕೆ ಸಾವಿಲ್ಲ.ಜಾಗೃತಿ ಮೂಡಬೇಕಾದರೆ ಮಕ್ಕಳಲ್ಲಿ ವಿದ್ಯೆ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಶರತ್ ಬಚ್ಚೇಗೌಡ ರವರು ಮಾತನಾಡಿ ಜನಸಂಖ್ಯೆ ಆಧಾರದಲ್ಲಿ ತಾಲ್ಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇರುವಂತ ವನ್ನಿಕುಲ 30 ಸಾವಿರ ಅಂದ್ರೆ 10% ಇರಬಹುದು ಈ ಸಮುದಾಯ ಬಚ್ಚೇಗೌಡರಿಗೆ ಹಿಂದಿನಿಂದಲೂ ತುಂಬಾ ಹತ್ತಿರವಾದಂತ ಸಮುದಾಯ ಮುಂದೆ ನಾನು ಸಹ ತಂದೆಯಂತೆ ಅವರನ್ನು ನಡೆಸಿಕೊಂಡು ಹೋಗುತ್ತೆನೆ ಮತ್ತೆ ವನ್ನಿಕುಲ ಮಠಕ್ಕೆ ತಾಲ್ಲೂಕಿನಲ್ಲಿ ಜಾಗವನ್ನು ಕೋಡುಸುತ್ತೇನೆ ಎಂಬ ಭರವಸೆ ನೀಡಿದರು. ಸಣ್ಣ ಹಿಂದುಳಿದ ಸಮಾಜಕ್ಕೆ ರಾಜಕೀಯವಾಗಿ ಸ್ಥಾನ ಮಾನ ಸಿಗಬೇಕು ಅದಕ್ಕೆ ಮಕ್ಕಳ ಶಿಕ್ಷಣಕ್ಕೆ ಡಿಗ್ರಿ ಕಾಲೇಜು,ಮತ್ತು ಹಾಸ್ಟೆಲ್ ಕಟ್ಟಲು ಸರ್ಕಾರದ ಜೊತೆಗೆ ವಯಕ್ತಿಕವಾಗಿ ನಮ್ಮ ಕೈಲಿಂದ ಸಹಾಯ ಮಾಡುತ್ತೇನೆ,

ಜೊತೆಗೆ ಬಚ್ಚೇಗೌಡ ಮಂತ್ರಿಯಾಗಿದ್ದಾಗ ನಗರ
ಗವಿ ರಸ್ತೆಯಲ್ಲಿ ಸಂಘದ ಜಾಗವನ್ನು ಕೊಟ್ಟು ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದರು.
ವನ್ನಿಕುಲ ತಿಗಳ ಸಂಘದ ತಾಲ್ಲೂಕು ಅಧ್ಯಕ್ಷರಾದ ಸಿ.ಮುನಿಯಪ್ಪ ರವರು ಮಾತನಾಡಿ 200 ಜನ ಮಕ್ಕಳಿಗೆ ನಮ್ಮ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಿದ್ದೇವೆ ಈ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿ ಪುರಸ್ಕಾರ ನೀಡಿದ್ದಾರೆ 24 ವರ್ಷಗಳಿಂದ ಸಂಘದ ಚಟುವಟಿಕೆಗಳನ್ನು ಮಾಡುಕೊಂಡು ಬಂದಿದ್ದಾರೆ ನಮ್ಮ ಜನಾಂಗ ಕೃಷಿ ಹೆಚ್ಚಾಗಿ ಚಟುವಟಿಕೆ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಹಿಂದುಳಿದ ಸಮುದಾಯವಾಗಿದ್ದರು ಈ ಭಾರಿ ಎಸ್.ಎಸ್.ಎಲ್.ಸಿ ಪಿಯುಸಿ ಮತ್ತು ಡಿಗ್ರಿ ಒಟ್ಟು 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಸಮಾರಂಭದಲ್ಲಿ ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ ಮಾಜಿ ವಿಧಾನಪರಿಷತ್ ಸದಸ್ಯ ಪಿ.ಆರ್ ರಮೇಶ್ ಮಾತನಾಡಿದು. ಕಾರ್ಯಕ್ರಮದಲ್ಲಿ .ನಗರಸಭೆ ಸದಸ್ಯೆ ರೂಪ ಉಮೇಶ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಮಣಪ್ಪ, ಡಿಡಿಪಿಓ ಶಿವಮ್ಮ,ಯುವ ಮುಖಂಡ ರಾಕೇಶ್, ಮುಖಂಡರುಗಳಾದ ಹೆಚ್.ಜೆ ಶ್ರೀನಿವಾಸ್ ,ಹೆಚ್.ಕೆ ಮೋಹನ್,ಸೋಮನಾಥ್, ಹೆಚ್.ಜೆ ಕೃಷ್ಣಪ್ಪ,ಜಯರಾಮ್, ಅರುಣ್ ಕುಮಾರ್ ಹೆಚ್. ಎನ್,ಮಂಜುನಾಥ್, ಶ್ರೀನಿವಾಸ್, ವೆಂಕಟೇಶ್, ಆನಂದ್, ಹಾಗೂ ಸಮುದಾಯದ ಮುಖಂಡರುಗಳು ಹಾಜರಿದ್ದರು.

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *