ಬಳ್ಳಾರಿ: ಜುಲೈ.22ರಂದು; ಲಾಳಗೊಂಡ ಸಮಾಜವನ್ನು ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸಿ ಉಪಜಾತಿ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ಅಖಿಲ ಕರ್ನಾಟಕ ಲಾಳಗೊಂಡರ ಲಿಂಗಾಯತ ಜಿಲ್ಲಾ ಘಟಕವತಿಯಿಂದ ಬಸವಭವನದಲ್ಲಿ ಏರ್ಪಡಿಸಿದ್ದ ಲಾಳಗೊಂಡರ ಸಮಾಜ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಾಳಗೊಂಡ ಸಮಾಜವನ್ನು ಉಪಜಾತಿ ಪಟ್ಟಿಯಲ್ಲಿ ಸೇರಿಸುವವರೆಗೆ ಬಿಡುವುದಿಲ್ಲ ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು, ಲಾಳಗೊಂಡ ಸಮಾಜದ ಏಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಯೊಬ್ಬರ ಸಹಕಾರದಿಂದ ಗೆದ್ದು ಸಚಿವನಾಗಿದ್ದೇನೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸಮಾಜದ ಮುಖಂಡರ ಸಿರಿಗೇರಿ ಪನ್ನರಾಜ್ ಅವರು ಮಾತನಾಡಿ, ಆದಾಯ ಕೊರತೆ ಮತ್ತು ಆರ್ಥಿಕ ಹಿಂದುಳಿದ ಜನರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಕಷ್ಟದಿಂದ ಮುಂದೆ ಬಂದಿದೆ ಲಾಳಗೊಂಡ ಸಮಾಜ ಎಂದರು.

ವೀರಶೈವ ಜನಾಂಗದಲ್ಲಿ ನಾವಿದ್ದರು, ನಾವು ಮುಖ್ಯ ವಾಹಿನಿಗೆ ಬಂದಿಲ್ಲ ಎಂಬ ಕೊರಗು ಇದು, ಇದನ್ನು ಹೋಗಲಾಡಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.

ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಲಾಳಗೊಂಡ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. ಕೆಎಎಸ್ ಅಧಿಕಾರಿ ಚೆನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಂಕರಬಂಡೆ ಯಲ್ಲನಗೌಡ ತಂಡದವರು ಸಂಗೀತ ಕಾರ್ಯಕ್ರಮ, ಜಿಲಾನ್ ಭಾಷಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ವೀ.ವಿ.ಸಂಘದ ಅಧ್ಯಕ್ಷ ಆರ್. ರಾಮನಗೌಡ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ತಿಮ್ಮನಗೌಡ ಕೆಎಎಸ್ ಅಧಿಕಾರಿ ಗಳಾದ ಕೆ‌. ಚೆನ್ನಪ್ಪ, ಮೇಲ್ಸಿಮೆ ಪೊಂಪನಗೌಡ ಸೇರಿದಂತೆ ಹಲವು ಮುಖಂಡರು ಇದ್ದರು.

2ನೇ ಸುದ್ದಿ ಸಾರ್,

ಲಾಳಗೊಂಡ ಸಮಾಜವನ್ಮು ಉಪಜಾತಿ ಪಟ್ಟಿಗೆ ಸೇರಿಸುತ್ತೇವೆ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಜುಲೈ.22ರಂದು; ಲಾಳಗೊಂಡ ಸಮಾಜವನ್ನು ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸಿ ಉಪಜಾತಿ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ಅಖಿಲ ಕರ್ನಾಟಕ ಲಾಳಗೊಂಡರ ಲಿಂಗಾಯತ ಜಿಲ್ಲಾ ಘಟಕವತಿಯಿಂದ ಬಸವಭವನದಲ್ಲಿ ಏರ್ಪಡಿಸಿದ್ದ ಲಾಳಗೊಂಡರ ಸಮಾಜ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಾಳಗೊಂಡ ಸಮಾಜವನ್ನು ಉಪಜಾತಿ ಪಟ್ಟಿಯಲ್ಲಿ ಸೇರಿಸುವವರೆಗೆ ಬಿಡುವುದಿಲ್ಲ ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು, ಲಾಳಗೊಂಡ ಸಮಾಜದ ಏಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಯೊಬ್ಬರ ಸಹಕಾರದಿಂದ ಗೆದ್ದು ಸಚಿವನಾಗಿದ್ದೇನೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸಮಾಜದ ಮುಖಂಡರ ಸಿರಿಗೇರಿ ಪನ್ನರಾಜ್ ಅವರು ಮಾತನಾಡಿ, ಆದಾಯ ಕೊರತೆ ಮತ್ತು ಆರ್ಥಿಕ ಹಿಂದುಳಿದ ಜನರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಕಷ್ಟದಿಂದ ಮುಂದೆ ಬಂದಿದೆ ಲಾಳಗೊಂಡ ಸಮಾಜ ಎಂದರು.

ವೀರಶೈವ ಜನಾಂಗದಲ್ಲಿ ನಾವಿದ್ದರು, ನಾವು ಮುಖ್ಯ ವಾಹಿನಿಗೆ ಬಂದಿಲ್ಲ ಎಂಬ ಕೊರಗು ಇದು, ಇದನ್ನು ಹೋಗಲಾಡಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.

ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಲಾಳಗೊಂಡ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. ಕೆಎಎಸ್ ಅಧಿಕಾರಿ ಚೆನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಂಕರಬಂಡೆ ಯಲ್ಲನಗೌಡ ತಂಡದವರು ಸಂಗೀತ ಕಾರ್ಯಕ್ರಮ, ಜಿಲಾನ್ ಭಾಷಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ವೀ.ವಿ.ಸಂಘದ ಅಧ್ಯಕ್ಷ ಆರ್. ರಾಮನಗೌಡ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ತಿಮ್ಮನಗೌಡ ಕೆಎಎಸ್ ಅಧಿಕಾರಿ ಗಳಾದ ಕೆ‌. ಚೆನ್ನಪ್ಪ, ಮೇಲ್ಸಿಮೆ ಪೊಂಪನಗೌಡ ಸೇರಿದಂತೆ ಹಲವು ಮುಖಂಡರು ಇದ್ದರು.

2ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *