ಯಲಹಂಕ : ಅರಕೆರೆ ಗ್ರಾ.ಪಂ.ಉಪಾಧ್ಯಕ್ಷರಾಗಿ ಇತ್ತೀಚೆಗೆ ನೂತನವಾಗಿ ಆಯ್ಕೆಯಾಗಿರುವ ಕಕ್ಕೇಹಳ್ಳಿ ಗ್ರಾಮದ ಕೆ.ಎಂ.ಅರಸೇ ಗೌಡ ಸೋಮವಾರ ತಮ್ಮ ಉಪಾಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದರು.

ಇದೇ ವೇಳೆ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್, ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಸೇರಿದಂತೆ ಹಲವು ಗಣ್ಯರು ಗ್ರಾ.ಪಂ.ನೂತನ ಉಪಾಧ್ಯಕ್ಷ ಕೆ.ಎಂ.ಅರಸೇಗೌಡ ರವರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಅರಕೆರೆ ಗ್ರಾ.ಪಂ. ಅಧ್ಯಕ್ಷೆ ಅಂಜಿನಮ್ಮ ಚೌಡಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ರಾದ ಕೆ.ಆರ್. ತಿಮ್ಮೇಗೌಡ, ಬಿ.ಸಿ. ಶಶಿಕುಮಾರ್. ಲಕ್ಷ್ಮೀ ನಾರಾಯಣ ಗೌಡ, ಮುನಿಲಕ್ಷ್ಮಮ್ಮ ಪರಶು ರಾಮ್, ಗ್ರಾ.ಪಂ. ಸದಸ್ಯರಾದ ಮಂಜುಳಾ ಅರಸೇಗೌಡ, ಶಿಲ್ಪ ರಾಜಣ್ಣ, ಭಾಗ್ಯಮ್ಮ ಈಶ್ವರಾಚಾರ್, ಇ.ಪವನ್ ಕುಮಾರ್, ಮಂಜುನಾಥ್, ಮಂಜುಳಾ ಸುರೇಶ್, ಮುನಿಲಕ್ಷ್ಮಮ್ಮ, ಪದ್ಮ ಮುನಿಕೃಷ್ಣಪ್ಪ, ರಾಮಯಲ್ಲಪ್ಪ, ಚನ್ನಪ್ಪ, ಪ್ರಕಾಶ್, ಶಾಂತಮ್ಮ, ಗಾಯತ್ರಿ, ಚಿಕ್ಕಮುನಿಯಪ್ಪ, ಮುಖಂಡರಾದ ಸಿ.ಎಲ್.ಎನ್. ಗೌಡ, ಚೊಕ್ಕನಹಳ್ಳಿ ನಾಗೇಶ್, ಮುನಿದಾಸಪ್ಪ, ಕೆ.ಎಂ.ಚನ್ನೇಗೌಡ, ಕೊಡಿಗೇಹಳ್ಳಿ ರಂಗಸ್ವಾಮಿ,ಚೇತನ್, ದೊಡ್ಡಬೆಳವಂಗಲ ರಮೇಶ್, ಅರಕೆರೆ ಹನುಮಂತರಾಯಪ್ಪ, ಕಕ್ಕೇಹಳ್ಳಿ ಲೊಕೇಶ್, ಕಡತನಮಲೆ ನಂಜೇಗೌಡ, ನೆಲ್ಲುಕುಂಟೆ ಸುಬ್ಬರಾಜು, ಪ್ರಜ್ವಲ್, ಪಿ.ಡಿ.ಓ ಬಿ.ಕೆ.ತಿಮ್ಮಯ್ಯ, ಸೇರಿದಂತೆ ಇನ್ನಿತರರಿದ್ದು, ನೂತನ ಉಪಾಧ್ಯಕ್ಷ ಕೆ.ಎಂ.ಅರಸೇಗೌಡ ರವರಿಗೆ ಶುಭ ಹಾರೈಸಿದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *