
ಚಿಕ್ಕಬಳ್ಳಾಪುರ: ಕಳೆದ ಹಲವು ದಿನಗಳಿಂದ ತರಕಾರಿ ಬೆಲೆ ದುಪ್ಪಟ್ಟು ಆಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು ಬೆಳೆ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಬೆಳ್ಳುಳ್ಳಿ ,ಈರುಳ್ಳಿ ,ಟಮೋಟಾ ಬೀನ್ಸ್ ,ಕ್ಯಾರೆಟ್ ಇನ್ನು ಹಲವು ತರಕಾರಿಗಳ ದರ ಕೆಜಿ ಗೆ ಏರಿಕೆ ಆಗಿದ್ದು ಗ್ರಾಹಕರು ದುಪ್ಪಟ್ಟು ಹಣ ನೀಡಿ ಕೊಂಡುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು ಇನ್ನು ಬೆಲೆ ಏರಿಕೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇನ್ನು ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯ ಅನುಭವಿ ವರ್ತಕರಾದ ಕಣಜೇನಹಳ್ಳಿ ಕೆ.ವಿ. ಸುರೇಶ್ ತರಕಾರಿ ಬೆಲೆ ಏರಿಕೆ ಕುರಿತು ಮಾತನಾಡಿ ಮಳೆಯಿಂದಾಗಿ ಫಸಲು ಕಮ್ಮಿ ಆಗಿದೆ ಹಾಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಕೈ ಸೇರುತ್ತಿಲ್ಲ ತರಕಾರಿ ಬೆಲೆ ಈ ಹಿಂದೆ 20 ರೂ ಇದ್ದ 40 ರೂ 50ರೂ ಇದ್ದ 100ರೂ,ಈ ಹಿಂದೆ ಮೂಟೆ 300ರೂ ಇದ್ದ ಸೌತೆಕಾಯಿ ಈಗ 500ರೂ ಆಗಿದೆ ಇನ್ನು ನೆರೆಯ ರಾಜ್ಯಗಳಿಗೊ ಕೊಡ ತರಕಾರಿ ಹೊಗುತ್ತಿದ್ದು ತರಕಾರಿ ಬೆಲೆ ಏರಿಕೆಯಾಗಿದೆ ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ರೈತರ ಮುಖದಲ್ಲಿ ಸದಾ ಖುಷಿ ಇರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.