ಯಲಹಂಕ : ಕ್ಷೇತ್ರದ ವೀರಸಾಗರ ಗ್ರಾಮದಲ್ಲಿ 1 ಕೋಟಿ ರು.ವೆಚ್ಚದ ವಾಲ್ಮೀಕಿ ಸಮುದಾಯ ಭವನ, ಪಾಕೇಗೌಡನ ಪಾಳ್ಯ, ಹೆಸರಘಟ್ಟ ಮತ್ತು ಕಸಘಟ್ಟಪುರ ಗ್ರಾಮಗಳಲ್ಲಿ ತಲಾ 50 ಲಕ್ಷ ರು. ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸುಮಾರು 3 ಕೋಟಿ 40 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಗುರುವಾರ ಭೂಮಿಪೂಜೆ ನೆರವೇರಿಸಿ ದರು. 

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಚ್.ಬಿ.ಹನುಮಯ್ಯ, ಮಂಜುನಾಥರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಹೆಸರಘಟ್ಟ ಗ್ರಾ.ಪಂ. ಅಧ್ಯಕ್ಷೆ ಶಾಂತಾ, ಉಪಾಧ್ಯಕ್ಷೆ ಅಂಜನಾದೇವಿ, ರೈತ ಮೋರ್ಚಾ ಯಲಹಂಕ ಗ್ರಾಮಾಂತರ ಮಂಡಲ ಉಪಾಧ್ಯಕ್ಷರು, ಗ್ರಾ.ಪಂ. ಸದಸ್ಯರಾದ ಪಿ.ಕೆ.ರಾಜಣ್ಣ, ವಡೇರಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ನಾಗೇಶ್, ಗ್ರಾ.ಪಂ.ಸದಸ್ಯ ವೀರಸಾಗರ ರಘು, ಹೆಸರಘಟ್ಟ ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಅಶ್ವಥ್, ಶಿವಾನಂದ, ವಸಂತಲಕ್ಷ್ಮಿ, ಲತಾ, ಪಿಡಿಓ ರುದ್ರೇಶ್, ಗ್ರಾ.ಪಂ. ಸದಸ್ಯರಾದ ಪ್ರಭಾಕರ್, ವನಜಾಕ್ಷಮ್ಮ, ಗೋವಿಂದ ರಾಜು, ವಿನಾಯಕ ಮಿತ್ರವೃಂದದ ಅಧ್ಯಕ್ಷ ಚಾಂದ್ ಪಾಷಾ, ಎಚ್.ವಿ. ಜಗದೀಶ್(ಬಸ್), ಮುರಳಿ, ಎಚ್.ಎಂ. ಜಗದೀಶ್, ರಾಜು ಸೇರಿದಂತೆ ಇನ್ನಿತರರಿದ್ದರು.

ಹುಟ್ಟಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthu

Kogilu layout

Yelahanka

9845085793

7349337989

9035282296

Leave a Reply

Your email address will not be published. Required fields are marked *