Tag: Hoskot

ಪೌಷ್ಟಿಕ ಸಪ್ತಹ ಕಾರ್ಯಕ್ರಮ

ಇಂಜನಹಳ್ಳಿಯಲ್ಲಿ ಸಪ್ಟೆಂಬರ್ ಮಾಹೆಯ ಪೋಶನ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಹೊಸಕೋಟೆ : ಇಂಜನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜಡಿಗೇನಹಳ್ಳಿ ಸರ್ಕಲ್ ಅಂಗನವಾಡಿ ಕಾರ್ಯಕರ್ತೆಯರು ಸಪ್ಟೆಂಬರ್ ಮಾಹೆಯ ಪೋಶನ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಮಾಡಲಾಯಿತು. ಪೋಷಣ ಅಭಿಯಾನದ ಸಂಯೋಜಕರಾದಂತಹ ಶ್ರೀಯುತ…

ಚಾರ್ವಿ ಎಸ್ ಗೌಡ ಜಾನವಿ ಕೇಲೋ ಇಂಡಿಯಾ

ಹೊಸಕೋಟೆಯ ಚಾರ್ವಿ ಎಸ್ ಗೌಡ, ಜಾನ್ಹಾವಿ, ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಹೊಸಕೋಟೆ : ದಿನಾಂಕ 2- 9 -2023 ರಂದು ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಟೇಕ್ವಾಂಡೊ ಅಸೋಸಿಯೇಷನ್ ಹಮ್ಮಿಕೊಂಡಿದ್ದರು. ಈ…

31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷಾರತ ಇಲಾಖೆ ಬೆಂಗಳೂರು ರವರ ಸಹಯೋಗ ದೊಂದಿಗೆ 31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರವನ್ನು ವಿಜ್ಞಾನ ಭವನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವಿ. ಎನ್. ನಾಯಕ್ ರವರು ನಿವೃತ್ತ ಪ್ರಾದ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಅವರು ಮಾತನಾಡಿ ಪ್ರತಿ ಶಾಲೆಗಳಿಂದ ವಿಜ್ಞಾನ ಶಿಕ್ಷಕರಿಗೆ ತಾವುಗಳು ತರಬೇತಿ ನೀಡಿದ ನಂತರ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸುವುದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ 10 ರಿಂದ 17 ವರ್ಷದ ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇವರಲ್ಲಿ ವಯಸ್ಸಿಗೆ ಮಾತ್ರ ಆದ್ಯತೆ ನೀಡುವುದು ಅಲ್ಲದೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಮಂಡಿಸುವಂತೆ ಜಿಲ್ಲಾ ಸಂಯೋಜನಕರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು. ರಾಜ್ಯಾಧ್ಯಕ್ಷರಾದ ಗಿರೀಶ್ ಬಿ. ಕಡ್ಳೆವಾಡರವರು ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಸಹ ನಾವು ಮಕ್ಕಳ ವಿಜ್ಞಾನ ಸಮಾವೇಶ ಕಾರ್ಯಕ್ರಮವನ್ನು ನಿಲ್ಲಿಸದೆ ಆನ್ಲೈನ್ ಮೂಲಕ ನಡೆಸಿಕೊಂಡು ಬಂದಿರುತ್ತೇವೆ. ಕ.ರಾ.ವಿ. ಪ ದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೆ ನಡೆಸಿಕೊಂಡು ಬರುತ್ತಿರುವುದು ನಮ್ಮ ದೌರ್ಭಾಗ್ಯವಾಗಿರುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹೆಚ್ಚಿನ ವಿಜ್ಞಾನ ಶಿಕ್ಷಕರು ಭಾಗವಹಿಸಿ ತರಬೇತಿಯನ್ನು ಪಡೆದು ಹೆಚ್ಚಿನ ಯೋಜನೆಗಳನ್ನು ನಿರ್ವಹಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತೆ ಜಿಲ್ಲಾ ಸಂಯೋಜಕರಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಹ ಸಂಯೋಜಕರಾದ ಹೆಚ್. ಜಿ.ಹುದ್ದರ್ ರವರು, ರಾಜ್ಯ ಕೋಶಧ್ಯಕ್ಷರಾದ ಹೆಚ್. ಎಸ್ ಸ್ವಾಮಿ ರವರು, ಕ. ರಾ. ವಿ. ಪ ಕಛೇರಿ ವ್ಯವಸ್ಥಾಪಕರಾದ ಪ್ರಭು ಎಸ್.ಮಟ್ ರವರು ಜಿಲ್ಲಾ ಸಂಯೋಜಕರುಗಳಾದ ಕೆವಿ ಶ್ರೀಕಾಂತ, ರಾಜಶೇಖರ್, ಮಂಜುಳಾ ಬಾಯಿ ರವರು ಹಾಗೂ ವಿವಿದ ಜಿಲ್ಲೆಯ ಸಂಯೋಜಕರು ಬಾಗವಹಿಸಿದ್ದರು.

31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ…

ಬೃಹತ್ ಆಟೋರ್ಯಾಲಿ,ಬೃಹತ್ ಸೇಬುಹಾರ,ಬೆಳ್ಳಿಖಡ್ಗ ಉಡುಗೊರೆ ನೀಡಿ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ ಹೊಸಕೋಟೆ : ತಾಲ್ಲೂಕಿನ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರು 73ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹೊಸಕೋಟೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಅಭಿನಂದಿಸಿದರು. ನಗರದ ಎಸ್.ಜೆ.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಎಂಟಿಬಿ ನಾಗರಾಜ್ ರವರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ, ಸಮ್ಮುಖದಲ್ಲಿ ಆಚರಿಸಿಕೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದು ನಮ್ಮ ಹುಟ್ಟುಹಬ್ಬದ ಪ್ರಯುಕ್ತ ಅನಾಥಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿ ಹೊಸಕೋಟೆ ನಗರದ ಅವಿಮುಕ್ತಶ್ವರಸ್ವಾಮಿ, ಆಂಜಿನೇಯಸ್ವಾಮಿ, ಶಾರದಾಂಭೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದೇನೆ. ನನ್ನ 72ವರ್ಷಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದನ್ನು ನೋಡಿದ್ದೇನೆ. ಎಲ್ಲಾ ಏಳು ಬಿಳುಗಳನ್ನು ರಾಜಕೀಯದಲ್ಲೂ ನೋಡಿದ್ದೇನೆ. ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಎಂಟಿಬಿ ನಾಗರಾಜ್ ಯಾರು ಎಂದು ಗುರ್ತಿಸಿದ್ದು ಹೊಸಕೋಟೆ ತಾಲ್ಲೂಕು ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೆ. ನಾನು ಈ ತಾಲೂಕಿನಲ್ಲಿ ಸತತವಾಗಿ ಜನರ ಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದು, ಹಣ ಆಸ್ತಿ ಮಾಡಲು ನಾನುಬಂದವನಲ್ಲ. ಬಡವರ ಸೇವೆ ಮಾಡಲು ನಾನು ಬಂದಿದ್ದು ನಾನು ಬಿಜೆಪಿಗೆ ಹೋಗಲು ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ ಸ್ಪಂದಿಸದೆ ಇದ್ದರಿಂದ ನಾನು ಪಕ್ಷ ಬಿಡಬೇಕಾಯಿತು. ಕಳೆದ 23ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷ ಎರಡು ಸಾವಿರ ಮತಗಳಿಸಿದ್ದೇನೆ. ಆದರೆ, ಒಂದು ಸಮುದಾಯ ಹೆಚ್ಚಿನ ಮತ ನೀಡದ ಕಾರಣ ನನ್ನ ಸೋಲಾಯಿತು. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡೋಣ . ತಾಲೂಕಿನ ಅಭಿವೃದ್ಧಿ ಮಾಡೋಣ ಎಂದರು. ಹುಲ್ಲೂರು ಸಿ ಮಂಜುನಾಥ್, ಕಿರಣ್ ಕುಮಾರ್, ವೈ.ಎಸ್.ಎಂ ಮಂಜುಗೌಡ ರವರು ಎಂಟಿಬಿ ನಾಗರಾಜ್ ರವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು. ಕರುಣೆಗೋಡೆಯ ಚೇತನ್ ರವರ ನೇತೃತ್ವದಲ್ಲಿ ಸೇಬು ಹಣ್ಣಿನ ಬೃಹತ್ ಗಾತ್ರದ ಹಾರ ಹಾಕಿ ಶುಭ ಕೋರಿದರು. ಯುವ ಮುಖಂಡ ಬೀರೇಶ್ ರವರ ನೇತೃತ್ವದಲ್ಲಿ ಬೃಹತ್ ಆಟೋ ರ್ಯಾಲಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹುಲ್ಲೂರು ಸಿ ಮಂಜುನಾಥ್, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್‌, ಮುಖಂಡರುಗಳಾದ ಹುಲ್ಲೂರು ಕಿರಣ್‌ ಕುಮಾರ್, ವೈ ಎಸ್ ಎಂ ಮಂಜುಗೌಡ ಅಬಕಾರಿ ಶ್ರೀನಿವಾಸಯ್ಯ,ರಾಮಾಂಜಿನಿ,ಅರುಣ್ ಕುಮಾರ್,ಕೋಡಿಹಳ್ಳಿ ಜನಾರ್ದನ್ ಗೌಡ, ಶೌರತ್, ದೂಡ್ಡಮನೆ ಲಿಂಗಾಪುರ ಮಂಜುನಾಥ್,ಚೀಮಂಡಳಿ ಮಂಜಣ್ಣ,ನಿತಿನ್, ದೇವರಾಜು, ಗಂಗರಾಜು, ಬಿ.ನಾರಾಯಣಸ್ವಾಮಿ, ನವೀನ್, ಅತ್ತಿವಟ್ಟ ನಾಗೇಶ್, ಜಿಕೆಬಿ ಕಾಂತರಾಜು, ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

ಬೃಹತ್ ಆಟೋರ್ಯಾಲಿ,ಬೃಹತ್ ಸೇಬುಹಾರ,ಬೆಳ್ಳಿಖಡ್ಗ ಉಡುಗೊರೆ ನೀಡಿ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ ಹೊಸಕೋಟೆ : ತಾಲ್ಲೂಕಿನ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರು 73ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹೊಸಕೋಟೆ ಬಿಜೆಪಿ ಮುಖಂಡರು…

ಹೊಸಕೋಟೆಯಲ್ಲಿ ತಾಲ್ಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ

ಹೊಸಕೋಟೆಯಲ್ಲಿ ತಾಲ್ಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಾಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ…