31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷಾರತ ಇಲಾಖೆ ಬೆಂಗಳೂರು ರವರ ಸಹಯೋಗ ದೊಂದಿಗೆ 31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರವನ್ನು ವಿಜ್ಞಾನ ಭವನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವಿ. ಎನ್. ನಾಯಕ್ ರವರು ನಿವೃತ್ತ ಪ್ರಾದ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಅವರು ಮಾತನಾಡಿ ಪ್ರತಿ ಶಾಲೆಗಳಿಂದ ವಿಜ್ಞಾನ ಶಿಕ್ಷಕರಿಗೆ ತಾವುಗಳು ತರಬೇತಿ ನೀಡಿದ ನಂತರ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸುವುದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ 10 ರಿಂದ 17 ವರ್ಷದ ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇವರಲ್ಲಿ ವಯಸ್ಸಿಗೆ ಮಾತ್ರ ಆದ್ಯತೆ ನೀಡುವುದು ಅಲ್ಲದೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಮಂಡಿಸುವಂತೆ ಜಿಲ್ಲಾ ಸಂಯೋಜನಕರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು. ರಾಜ್ಯಾಧ್ಯಕ್ಷರಾದ ಗಿರೀಶ್ ಬಿ. ಕಡ್ಳೆವಾಡರವರು ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಸಹ ನಾವು ಮಕ್ಕಳ ವಿಜ್ಞಾನ ಸಮಾವೇಶ ಕಾರ್ಯಕ್ರಮವನ್ನು ನಿಲ್ಲಿಸದೆ ಆನ್ಲೈನ್ ಮೂಲಕ ನಡೆಸಿಕೊಂಡು ಬಂದಿರುತ್ತೇವೆ. ಕ.ರಾ.ವಿ. ಪ ದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೆ ನಡೆಸಿಕೊಂಡು ಬರುತ್ತಿರುವುದು ನಮ್ಮ ದೌರ್ಭಾಗ್ಯವಾಗಿರುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹೆಚ್ಚಿನ ವಿಜ್ಞಾನ ಶಿಕ್ಷಕರು ಭಾಗವಹಿಸಿ ತರಬೇತಿಯನ್ನು ಪಡೆದು ಹೆಚ್ಚಿನ ಯೋಜನೆಗಳನ್ನು ನಿರ್ವಹಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತೆ ಜಿಲ್ಲಾ ಸಂಯೋಜಕರಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಹ ಸಂಯೋಜಕರಾದ ಹೆಚ್. ಜಿ.ಹುದ್ದರ್ ರವರು, ರಾಜ್ಯ ಕೋಶಧ್ಯಕ್ಷರಾದ ಹೆಚ್. ಎಸ್ ಸ್ವಾಮಿ ರವರು, ಕ. ರಾ. ವಿ. ಪ ಕಛೇರಿ ವ್ಯವಸ್ಥಾಪಕರಾದ ಪ್ರಭು ಎಸ್.ಮಟ್ ರವರು ಜಿಲ್ಲಾ ಸಂಯೋಜಕರುಗಳಾದ ಕೆವಿ ಶ್ರೀಕಾಂತ, ರಾಜಶೇಖರ್, ಮಂಜುಳಾ ಬಾಯಿ ರವರು ಹಾಗೂ ವಿವಿದ ಜಿಲ್ಲೆಯ ಸಂಯೋಜಕರು ಬಾಗವಹಿಸಿದ್ದರು.

Aug 30, 2023 #Hoskot

31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷಾರತ ಇಲಾಖೆ ಬೆಂಗಳೂರು ರವರ ಸಹಯೋಗ ದೊಂದಿಗೆ 31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರವನ್ನು ವಿಜ್ಞಾನ ಭವನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವಿ. ಎನ್. ನಾಯಕ್ ರವರು ನಿವೃತ್ತ ಪ್ರಾದ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಅವರು ಮಾತನಾಡಿ ಪ್ರತಿ ಶಾಲೆಗಳಿಂದ ವಿಜ್ಞಾನ ಶಿಕ್ಷಕರಿಗೆ ತಾವುಗಳು ತರಬೇತಿ ನೀಡಿದ ನಂತರ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸುವುದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ 10 ರಿಂದ 17 ವರ್ಷದ ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇವರಲ್ಲಿ ವಯಸ್ಸಿಗೆ ಮಾತ್ರ ಆದ್ಯತೆ ನೀಡುವುದು ಅಲ್ಲದೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಮಂಡಿಸುವಂತೆ ಜಿಲ್ಲಾ ಸಂಯೋಜನಕರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು. ರಾಜ್ಯಾಧ್ಯಕ್ಷರಾದ ಗಿರೀಶ್ ಬಿ. ಕಡ್ಳೆವಾಡರವರು ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಸಹ ನಾವು ಮಕ್ಕಳ ವಿಜ್ಞಾನ ಸಮಾವೇಶ ಕಾರ್ಯಕ್ರಮವನ್ನು ನಿಲ್ಲಿಸದೆ ಆನ್ಲೈನ್ ಮೂಲಕ ನಡೆಸಿಕೊಂಡು ಬಂದಿರುತ್ತೇವೆ. ಕ.ರಾ.ವಿ. ಪ ದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೆ ನಡೆಸಿಕೊಂಡು ಬರುತ್ತಿರುವುದು ನಮ್ಮ ದೌರ್ಭಾಗ್ಯವಾಗಿರುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹೆಚ್ಚಿನ ವಿಜ್ಞಾನ ಶಿಕ್ಷಕರು ಭಾಗವಹಿಸಿ ತರಬೇತಿಯನ್ನು ಪಡೆದು ಹೆಚ್ಚಿನ ಯೋಜನೆಗಳನ್ನು ನಿರ್ವಹಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತೆ ಜಿಲ್ಲಾ ಸಂಯೋಜಕರಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಹ ಸಂಯೋಜಕರಾದ ಹೆಚ್. ಜಿ.ಹುದ್ದರ್ ರವರು, ರಾಜ್ಯ ಕೋಶಧ್ಯಕ್ಷರಾದ ಹೆಚ್. ಎಸ್ ಸ್ವಾಮಿ ರವರು, ಕ. ರಾ. ವಿ. ಪ ಕಛೇರಿ ವ್ಯವಸ್ಥಾಪಕರಾದ ಪ್ರಭು ಎಸ್.ಮಟ್ ರವರು ಜಿಲ್ಲಾ ಸಂಯೋಜಕರುಗಳಾದ ಕೆವಿ ಶ್ರೀಕಾಂತ, ರಾಜಶೇಖರ್, ಮಂಜುಳಾ ಬಾಯಿ ರವರು ಹಾಗೂ ವಿವಿದ ಜಿಲ್ಲೆಯ ಸಂಯೋಜಕರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *