ಬಂಗಾರಪೇಟೆ :ದಲಿತ ಸಂಘರ್ಷ ಸಮಿತಿಯಿಂದ ಏಪ್ರಿಲ್ ಶುಕ್ರವಾರ 19ರಂದು ಎಸ್ಎನ್ ರೆಸಾರ್ಟ್ ನಲ್ಲಿ ಕರೆದಿರುವ ಛಲವಾದಿ ಬಲಗೈ ಸಮುದಾಯದ ಜನಪ್ರತಿನಿಧಿಗಳು, ಮುಖಂಡರುಗಳು,ದಲಿತ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮನವಿ ಮಾಡಿದರು.
ಪಟ್ಟಣದ ಎಸ್ಎನ್ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದ ಲೋಕಸಭಾ ಕ್ಷೇತ್ರದ ಬಂಗಾರಪೇಟೆ, ಕೆಜಿಎಫ್,ಮಾಲೂರು, ಕೋಲಾರ, ಮುಲುಬಾಗಿಲು, ಚಿಂತಾಮಣಿ,ಶಿಡ್ಲಘಟ್ಟ,ಶ್ರೀನಿವಾಸಪುರ, ಕ್ಷೇತ್ರದ ಛಲವಾದಿ ಬಲಗೈ ಸಮುದಾಯದ ಬಂಧುಗಳಿಗೆ ತಿಳಿಸುವುದೇನೆಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ತೀರ್ಮಾನಗಳನ್ನ ಚರ್ಚೆ ಮಾಡಲು ದಲಿತ ಸಮುದಾಯದ…