







ಬಂಡಿಕೊಡಿಗೇಹಳ್ಳಿ ಗ್ರಾ.ಪಂ.: ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ :
ಬ್ಯಾಟರಾಯನಪುರ : ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಪವಿತ್ರ ಸುಬ್ರಮಣಿ, ಉಪಾಧ್ಯಕ್ಷೆ ಶ್ವೇತ ಚನ್ನಕೇಶವ ರವರು ಗುರುವಾರ ತಮ್ಮ ಸ್ಥಾನದ ಪದಗ್ರಹಣ ಮಾಡಿದರು.
ಪದಗ್ರಹಣ ಕಾರ್ಯಕ್ರಮದ ಪ್ರಯುಕ್ತ ಗ್ರಾ.ಪಂ.ಕಚೇರಿಯನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಸ್ವಚ್ಛತಾ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಪೌರ ಕಾರ್ಮಿಕರು, ಗ್ರಾ.ಪಂ. ಸಿಬ್ಬಂದಿಗಳಿಗೆ ಸಮವಸ್ತ್ರ, ಸಿಹಿ ತಿನಿಸುಗಳ ಉಡುಗೊರೆ ನೀಡಿ ಗೌರವಿಸಲಾಯಿತು.
ಈ ವೇಳೆ ನೂತನ ಅಧ್ಯಕ್ಷೆ ಪವಿತ್ರ ಸುಬ್ರಮಣಿ ಮಾತನಾಡಿ ‘ಗ್ರಾ.ಪಂ.ಅಧ್ಯಕ್ಷೆ ಯಾಗಿ ಆಯ್ಕೆಯಾಗಲು ಸಹಕಾರ ನೀಡಿರುವ ಗ್ರಾ.ಪಂ.ಸರ್ವ ಸದಸ್ಯರಿಗೂ ಕೃತಜ್ಞತಾ ಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಸರ್ವ ಸದಸ್ಯರ ವಿಶ್ವಾಸದೊಂದಿಗೆ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜನಾರ್ದನ ಪಿ., ಬಿ.ಕೆ.ಮಂಜು, ಎನ್.ಜಗದೀಶ್, ಚೈತ್ರ ರಾಜಶೇಖರ್, ಗ್ರಾ.ಪಂ. ಸದಸ್ಯರಾದ ಅನಿತಾ ನಾರಾಯಣ, ಚೈತ್ರ ಪಿ.ತಿಮ್ಮೇಗೌಡ, ಜೆ.ಪವಿತ್ರ ಹರೀಶ್, ಭಾಗ್ಯಲಕ್ಷ್ಮಿ ಬಿ.ವಿ. ಚಂದ್ರಮುರಳಿ, ಆಶಾ ರವೀಂದ್ರ, ಆಂಜಿನಪ್ಪ ಕೆ.,ಎಂ.ಕೆ.ಭಾರತಿ ನಾರಾಯಣಸ್ವಾಮಿ, ಮುನೇಗೌಡ ಎನ್., ಗಿರೀಶ್ ಎಂ., ವಿ.ದೇವರಾಜ್, ನವೀನ್ ಎನ್., ಸುಬ್ರಮಣಿ ಎಂ., ಪುಷ್ಪ ನಾರಾಯಣಸ್ವಾಮಿ, ಮಂಜುನಾಥ್ ಕೆ., ಜಯಲಕ್ಷ್ಮಮ್ಮ ಶಿವಣ್ಣ, ರಾಮಕೃಷ್ಣರಾಜು, ಅಮರನಾರಾಯಣಸ್ವಾಮಿ, ಗಾಯತ್ರಿ ವಿ.ಬಸವರಾಜು, ಉಮಾ ಮುನಿರಾಜು, ಕೃಷ್ಣಪ್ಪ ಬಿ.ಎನ್.ಸೇರಿದಂತೆ ಇನ್ನಿತರರಿದ್ದರು.