ದೇವನಹಳ್ಳಿ ಸುದ್ದಿ : ಮಣಿಪುರದಲ್ಲಿ ದಲಿತ ಬುಡಕಟ್ಟು ಜನಾಂಗದ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಹಾಗೂ ಕೂಮುಗಲಭೆಯನ್ನು ಖಂಡಿಸಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತ ಜಾರಿಗೆ ಬರುವಂತೆ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಕಛೇರಿಯಲ್ಲಿ ಮಣಿಪುರ ದಲ್ಲಿನ ಬಿಜೆಪಿ ಸರ್ಕಾರದ ಕೂಮುಗಲಭೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಬಿಎಸ್ಪಿ ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, ಮಣ ಪುರದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಲಕ್ಷಿಸಿ ನೂರಾರು ಜನರನ್ನು ಹತ್ಯೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕಳೆದ ೮೦ ದಿನಗಳಿಂದ ನಿರಂತರವಾಗಿ ಬುಡಕಟ್ಟು ಜನಾಂಗದ ಮೇಲೆ ಸಾಮೂಹಿಕ ಆತ್ಯಚಾರ, ದೌರ್ಜನ್ಯ, ದಬ್ಬಾಳಿಯನ್ನು ರಾಷ್ಟçವ್ಯಾಪ್ತಿ ಖಂಡಿಸುತಿದ್ದು, ಬಿಜೆಪಿ ಮಹಿಳೆಯರಿಗೆ ಮಾತೃಸ್ಥಾನ ನೀಡುತ್ತೇವೆ ಎಂದು ಭಾಷಣಗಳಲ್ಲಿ ಬೊಬ್ಬೆ ಹೊಡೆಯುತಿದ್ದಾರೆ ಆದರೆ ಮಣ ಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಪ್ರಜ್ಙಾವಂತ ಸಮಾಜ ತಲೆತಗ್ಗಿಸುವಂತ ಘಟನೆಯಾಗಿದೆ.
ಆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸಂಪೂರ್ಣ ವಿಫಲವಾಗಿದೆ ಹಾಗೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಗಳ ಮೇಲೆ ಕೂಮುಗಲಭೆ, ಶಾಂತಿಭಂಗ ಗೊಳಿಸುವ ಷಡ್ಯಂತ್ರಗಳನ್ನು ಹೆಚ್ಚಾಗುತಿದ್ದು, ರಾಜ್ಯ ವ್ಯಾಪ್ತಿ ಬಿಜೆಪಿ ದುರಾಡಳಿತದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ|| ಬಿಆರ್. ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಗಾಳಿಗೆ ತೂರಿ, ಭ್ರಷ್ಟ ಆಡಳಿತ ವುವಸ್ಥೆ ಪರವಾಗಿ ಆಡಳಿತ ನಡೆಸುತಿರುವ ಅಲ್ಲಿನ ಮುಖ್ಯಮಂತ್ರಿ ಬಿರೆನ್ ಸಿಂಗ್ ರಾಜೀನಾಮೆ ನೀಡಬೇಕು. ಅವರು ಸರ್ಕಾರ ನಡೆಸಲು ಅಸಮರ್ಥರು, ರಾಜ್ಯಪಾಲರು ಮದ್ಯ ಪ್ರವೇಶಿಸಿ ಮುಖ್ಯಮಂತ್ರಿ ಪದವಿಯಿಂದ ಈ ಕೂಡಲೇ ವಜಾ ಗೊಳಿಸಬೇಕು. ದೇಶದಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತರನ್ನು ಸಮಾನವಾಗಿ ಕಾಣಬೇಕು ಹಾಗೂ ಜ್ಯಾತ್ಯಾತೀತ ವ್ಯವಸ್ಥೆ ಪರಿಪಾಲಕರಾಗಬೇಕು, ಪ್ರಜಾಪ್ರಭುತ್ವ ಉಳಿಯಲು ನ್ಯಾಯಾಲಯಗಳ ಕೂಡ ಕಠಿಣ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಸವರಾಜು, ಜಿಲ್ಲಾದ್ಯಕ್ಷ ನೆಲಮಂಗಲ ಮಹದೇವ್, ಉಪಾದ್ಯಕ್ಷ ನರಸಿಂಹಯ್ಯ, ದೊಡ್ಡಬಳ್ಳಾಪುರ ತಾಲ್ಲೂಕು ಅದ್ಯಕ್ಷ ಪಿಳ್ಳಪ್ಪ, ನೆಲಮಂಗಲ ಮೂರ್ತಿ, ಮಹಿಳಾ ಘಟಕದ ರಮಾದೇವಿ, ಸುವರ್ಣ, ವಿಜಯಪುರ ಹೋಬಳಿ ಅದ್ಯಕ್ಷ ಜಗದೀಶ್, ಟೌನ್ ಅದ್ಯಕ್ಷ ವಿಜಯಪುರ ನಾಗಣ್ಣ ಸೇರಿದಂತೆ ನೂರಾರು ಪದಾದಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.
ದೇವನಹಳ್ಳಿ ಸುದ್ದಿ, ಪೋಟೊ -೧
ಮಣಿಪುರದಲ್ಲಿನ ಬಿಜೆಪಿ ಸರ್ಕಾರ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಖಂಡಿಸಿ ಬಿಎಸ್ಪಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಕಛೇರಿಯ ತಹಶೀಲ್ದಾರ್ ಕಛೇರಿಯ ಗಂಗಾಧರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಸರ್ಕಾರದ ಕೂಮುಗಲಭೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಬಿಎಸ್ಪಿ ಒತ್ತಾಯ
ದೇವನಹಳ್ಳಿ ಸುದ್ದಿ : ಮಣಿಪುರದಲ್ಲಿ ದಲಿತ ಬುಡಕಟ್ಟು ಜನಾಂಗದ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಹಾಗೂ ಕೂಮುಗಲಭೆಯನ್ನು ಖಂಡಿಸಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತ ಜಾರಿಗೆ ಬರುವಂತೆ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಕಛೇರಿಯಲ್ಲಿ ಮಣಿಪುರ ದಲ್ಲಿನ ಬಿಜೆಪಿ ಸರ್ಕಾರದ ಕೂಮುಗಲಭೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಬಿಎಸ್ಪಿ ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, ಮಣ ಪುರದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಲಕ್ಷಿಸಿ ನೂರಾರು ಜನರನ್ನು ಹತ್ಯೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕಳೆದ ೮೦ ದಿನಗಳಿಂದ ನಿರಂತರವಾಗಿ ಬುಡಕಟ್ಟು ಜನಾಂಗದ ಮೇಲೆ ಸಾಮೂಹಿಕ ಆತ್ಯಚಾರ, ದೌರ್ಜನ್ಯ, ದಬ್ಬಾಳಿಯನ್ನು ರಾಷ್ಟçವ್ಯಾಪ್ತಿ ಖಂಡಿಸುತಿದ್ದು, ಬಿಜೆಪಿ ಮಹಿಳೆಯರಿಗೆ ಮಾತೃಸ್ಥಾನ ನೀಡುತ್ತೇವೆ ಎಂದು ಭಾಷಣಗಳಲ್ಲಿ ಬೊಬ್ಬೆ ಹೊಡೆಯುತಿದ್ದಾರೆ ಆದರೆ ಮಣ ಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಪ್ರಜ್ಙಾವಂತ ಸಮಾಜ ತಲೆತಗ್ಗಿಸುವಂತ ಘಟನೆಯಾಗಿದೆ.
ಆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸಂಪೂರ್ಣ ವಿಫಲವಾಗಿದೆ ಹಾಗೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಗಳ ಮೇಲೆ ಕೂಮುಗಲಭೆ, ಶಾಂತಿಭಂಗ ಗೊಳಿಸುವ ಷಡ್ಯಂತ್ರಗಳನ್ನು ಹೆಚ್ಚಾಗುತಿದ್ದು, ರಾಜ್ಯ ವ್ಯಾಪ್ತಿ ಬಿಜೆಪಿ ದುರಾಡಳಿತದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ|| ಬಿಆರ್. ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಗಾಳಿಗೆ ತೂರಿ, ಭ್ರಷ್ಟ ಆಡಳಿತ ವುವಸ್ಥೆ ಪರವಾಗಿ ಆಡಳಿತ ನಡೆಸುತಿರುವ ಅಲ್ಲಿನ ಮುಖ್ಯಮಂತ್ರಿ ಬಿರೆನ್ ಸಿಂಗ್ ರಾಜೀನಾಮೆ ನೀಡಬೇಕು. ಅವರು ಸರ್ಕಾರ ನಡೆಸಲು ಅಸಮರ್ಥರು, ರಾಜ್ಯಪಾಲರು ಮದ್ಯ ಪ್ರವೇಶಿಸಿ ಮುಖ್ಯಮಂತ್ರಿ ಪದವಿಯಿಂದ ಈ ಕೂಡಲೇ ವಜಾ ಗೊಳಿಸಬೇಕು. ದೇಶದಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತರನ್ನು ಸಮಾನವಾಗಿ ಕಾಣಬೇಕು ಹಾಗೂ ಜ್ಯಾತ್ಯಾತೀತ ವ್ಯವಸ್ಥೆ ಪರಿಪಾಲಕರಾಗಬೇಕು, ಪ್ರಜಾಪ್ರಭುತ್ವ ಉಳಿಯಲು ನ್ಯಾಯಾಲಯಗಳ ಕೂಡ ಕಠಿಣ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಸವರಾಜು, ಜಿಲ್ಲಾದ್ಯಕ್ಷ ನೆಲಮಂಗಲ ಮಹದೇವ್, ಉಪಾದ್ಯಕ್ಷ ನರಸಿಂಹಯ್ಯ, ದೊಡ್ಡಬಳ್ಳಾಪುರ ತಾಲ್ಲೂಕು ಅದ್ಯಕ್ಷ ಪಿಳ್ಳಪ್ಪ, ನೆಲಮಂಗಲ ಮೂರ್ತಿ, ಮಹಿಳಾ ಘಟಕದ ರಮಾದೇವಿ, ಸುವರ್ಣ, ವಿಜಯಪುರ ಹೋಬಳಿ ಅದ್ಯಕ್ಷ ಜಗದೀಶ್, ಟೌನ್ ಅದ್ಯಕ್ಷ ವಿಜಯಪುರ ನಾಗಣ್ಣ ಸೇರಿದಂತೆ ನೂರಾರು ಪದಾದಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.
ದೇವನಹಳ್ಳಿ ಸುದ್ದಿ, ಪೋಟೊ -೧
ಮಣಿಪುರದಲ್ಲಿನ ಬಿಜೆಪಿ ಸರ್ಕಾರ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯ ಖಂಡಿಸಿ ಬಿಎಸ್ಪಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಕಛೇರಿಯ ತಹಶೀಲ್ದಾರ್ ಕಛೇರಿಯ ಗಂಗಾಧರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.