ಪುನಶ್ಚೇತನಗೊಳಿಸಿದ ಹುಣಸಮಾರನಹಳ್ಳಿ ಕೆರೆ ಲೋಕಾರ್ಪಣೆ :

ಬ್ಯಾಟರಾಯನಪುರ : ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರತಿ ನಾಗರೀಕರು ಭಾವಿಸಬೇಕು ಹಾಗಾದಾಗ ಮಾತ್ರ ಉತ್ತಮ ಪರಿಸರವನ್ನು ನಿರೀಕ್ಷಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಸಣ್ಣ ನೀರಾವರಿ ಇಲಾಖೆಯ ಸಹಕಾರದೊಂದಿಗೆ ಐಟಿಸಿ ಮತ್ತು ಲೋವ್ಸ್ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್‌ಆರ್)ಯ ಅಡಿಯಲ್ಲಿ ಬಹು ಕೋಟಿ ರು.ಗಳ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ್ದ ಹುಣಸಮಾರನಹಳ್ಳಿ ಕೆರೆಯನ್ನು ಗುರುವಾರ ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಿದ ನಂತರ ಅವರು ಮಾತನಾಡಿದರು.

ಸುಮಾರು 22 ಎಕರೆ ಪ್ರದೇಶದಲ್ಲಿರುವ ಹುಣಸಮಾರನಹಳ್ಳಿ ಕೆರೆ ದಶಕದ ಹಿಂದೆ ಯಾವುದೇ ರೀತಿಯಲ್ಲೂ ಜನೋಪಯೋಗಕ್ಕೆ ಬಾರದಂತಹ ದುಸ್ಥಿತಿಯಲ್ಲಿತ್ತು. ಇದನ್ನು ಮನಗಂಡು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ, ಕೆಲವು ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚಿಸಿದ್ದೆವು, ಅವುಗಳ ಪೈಕಿ ಐಟಿಸಿ ಮತ್ತು ಲೋವ್ಸ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯ ಅಡಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಸಹಕರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೆರೆಯ ಪುನಶ್ಚೇತನ ಕಾರ್ಯಕ್ಕೆ ಮುಂದಾದೆವು.

ಕೆರೆಯ ಸಂಪೂರ್ಣ ಊಳೆತ್ತಿಸಿ, ಪುನಃ ಕೆರೆಯಲ್ಲಿ ಊಳು ತುಂಬಿಕೊಳ್ಳದಂತೆ ಕ್ರಮವಹಿಸಿ ಕೆರೆಗೆ ನೀರು ಬರುವ ಎಲ್ಲಾ ಮಾರ್ಗಗಳನ್ನೂ ಸ್ವಚ್ಛಗೊಳಿಸಿ ಅಚ್ಚುಕಟ್ಟುಗೊಳಿಸಿದೆವು.
ಕೆರೆಯ ಸುತ್ತಲೂ ರಾಶಿಗಳ ಲೆಕ್ಕದಲ್ಲಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರೆ ನಿರುಪಯುಕ್ತ ವಸ್ತುಗಳನ್ನು ಒಳಗೊಂಡ ಕಸವನ್ನು ತೆರವುಗೊಳಿಸಿ, ಕೆರೆಯ ಸುತ್ತಲೂ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್, ಬೆಂಚುಗಳನ್ನು ಅಳವಡಿಸಿ, 2 ಸಾವಿರ ಸಸಿಗಳನ್ನು ನೆಡುವ ಮೂಲಕ ಕೆರೆಗೆ ಕಾಯಕಲ್ಪ ನೀಡಲಾಗಿದೆ. ಶರವಣಕುಮಾರ್ ರವರು ಗ್ರಾ.ಪಂ.ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆರಂಭಗೊಂಡ ಕೆರೆಯ ಅಭಿವೃದ್ಧಿಗೆ ಅವರು ಕಾಳಜಿ ತೋರುವುದರ ಜತೆಗೆ ಅಗತ್ಯ ಸಹಕಾರ ನೀಡಿದರು. ಐಟಿಸಿ ಮತ್ತು ಲೋವ್ಸ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಹ್ಯಾಂಡ್ಸ್ ಆನ್ ಸಿಎಸ್‌ಆರ್ ಎಂಬ ಪರಿಸರ ಅಭಿವೃದ್ಧಿ ಸಂಸ್ಥೆಗೆ ನೀಡಿ ಕೆರೆಯ ಅಭಿವೃದ್ಧಿಗೆ ಇಂಬು ನೀಡಲಾಯಿತು. ಹಲವು ಸಂಸ್ಥೆಗಳ ಮತ್ತು ಹಲವು ಸ್ಥಳೀಯ ಮುಖಂಡರ ಸಹಕಾರ ಮತ್ತು ಕಾಳಜಿಯ ನಿಮಿತ್ತ ಪುನಶ್ಚೇತನಗೊಂಡಿರುವ ಹುಣಸಮಾರನಹಳ್ಳಿ ಕೆರೆಯನ್ನು ಇಂದು ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ದೈನಂದಿನ ನಡಿಗೆ, ವಿಶ್ರಾಂತಿ ಸೇರಿದಂತೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂ.ನಗರ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಅಶೋಕನ್, ಹುಣಸಮಾರನಹಳ್ಳಿ ಪುರಸಭೆಯ ಮುಖ್ಯ ಅಧಿಕಾರಿ ಕಾಂತರಾಜು, ಲೋವ್ಸ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಂಕುರ್ ಮಿತ್ತಲ್, ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯ ಸಿ.ದೊರೆಸ್ವಾಮಿ, ಗುರನಂದನ್ ರಾವ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್‌ಕುಮಾರ್, ಜಯಗೋಪಾಲ್‌ಗೌಡ, ಶ್ರೀನಿವಾಸಯ್ಯ, ತಾ.ಪಂ.ಸದಸ್ಯೆ ಸುಜಾತ ಜೆ.ಶ್ರೀನಿವಾಸ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶರವಣಕುಮಾರ್, ಹೆಚ್.ಎಸ್.ದಯಾನಂದ, ಹೆಚ್.ಪಿ.ನಾರಾಯಣಸ್ವಾಮಿ, ಸತ್ಯನಾರಾಯಣ, ಹೆಚ್.ಬಿ.ಹರೀಶ್‌ಕುಮಾರ್, ಹೆಚ್.ಪಿ.ನಾರಾಯಣಸ್ವಾಮಿ, ಲಕ್ಷ್ಮೀಪತಿ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ನಾರಾಯಣಸ್ವಾಮಿ, ಶೆಟ್ಟಿಗೆರೆ ರಾಜಣ್ಣ ಸೇರಿದಂತೆ ಇನ್ನಿತರರಿದ್ದರು.

ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಕಂದಾಯ ಸಚಿವ ಕೃಷ್ಣಬೈರೇಗೌಡ

ಪುನಶ್ಚೇತನಗೊಳಿಸಿದ ಹುಣಸಮಾರನಹಳ್ಳಿ ಕೆರೆ ಲೋಕಾರ್ಪಣೆ :

ಬ್ಯಾಟರಾಯನಪುರ : ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರತಿ ನಾಗರೀಕರು ಭಾವಿಸಬೇಕು ಹಾಗಾದಾಗ ಮಾತ್ರ ಉತ್ತಮ ಪರಿಸರವನ್ನು ನಿರೀಕ್ಷಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಸಣ್ಣ ನೀರಾವರಿ ಇಲಾಖೆಯ ಸಹಕಾರದೊಂದಿಗೆ ಐಟಿಸಿ ಮತ್ತು ಲೋವ್ಸ್ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್‌ಆರ್)ಯ ಅಡಿಯಲ್ಲಿ ಬಹು ಕೋಟಿ ರು.ಗಳ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ್ದ ಹುಣಸಮಾರನಹಳ್ಳಿ ಕೆರೆಯನ್ನು ಗುರುವಾರ ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಿದ ನಂತರ ಅವರು ಮಾತನಾಡಿದರು.

ಸುಮಾರು 22 ಎಕರೆ ಪ್ರದೇಶದಲ್ಲಿರುವ ಹುಣಸಮಾರನಹಳ್ಳಿ ಕೆರೆ ದಶಕದ ಹಿಂದೆ ಯಾವುದೇ ರೀತಿಯಲ್ಲೂ ಜನೋಪಯೋಗಕ್ಕೆ ಬಾರದಂತಹ ದುಸ್ಥಿತಿಯಲ್ಲಿತ್ತು. ಇದನ್ನು ಮನಗಂಡು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ, ಕೆಲವು ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚಿಸಿದ್ದೆವು, ಅವುಗಳ ಪೈಕಿ ಐಟಿಸಿ ಮತ್ತು ಲೋವ್ಸ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯ ಅಡಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಸಹಕರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೆರೆಯ ಪುನಶ್ಚೇತನ ಕಾರ್ಯಕ್ಕೆ ಮುಂದಾದೆವು.

ಕೆರೆಯ ಸಂಪೂರ್ಣ ಊಳೆತ್ತಿಸಿ, ಪುನಃ ಕೆರೆಯಲ್ಲಿ ಊಳು ತುಂಬಿಕೊಳ್ಳದಂತೆ ಕ್ರಮವಹಿಸಿ ಕೆರೆಗೆ ನೀರು ಬರುವ ಎಲ್ಲಾ ಮಾರ್ಗಗಳನ್ನೂ ಸ್ವಚ್ಛಗೊಳಿಸಿ ಅಚ್ಚುಕಟ್ಟುಗೊಳಿಸಿದೆವು.
ಕೆರೆಯ ಸುತ್ತಲೂ ರಾಶಿಗಳ ಲೆಕ್ಕದಲ್ಲಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರೆ ನಿರುಪಯುಕ್ತ ವಸ್ತುಗಳನ್ನು ಒಳಗೊಂಡ ಕಸವನ್ನು ತೆರವುಗೊಳಿಸಿ, ಕೆರೆಯ ಸುತ್ತಲೂ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್, ಬೆಂಚುಗಳನ್ನು ಅಳವಡಿಸಿ, 2 ಸಾವಿರ ಸಸಿಗಳನ್ನು ನೆಡುವ ಮೂಲಕ ಕೆರೆಗೆ ಕಾಯಕಲ್ಪ ನೀಡಲಾಗಿದೆ. ಶರವಣಕುಮಾರ್ ರವರು ಗ್ರಾ.ಪಂ.ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆರಂಭಗೊಂಡ ಕೆರೆಯ ಅಭಿವೃದ್ಧಿಗೆ ಅವರು ಕಾಳಜಿ ತೋರುವುದರ ಜತೆಗೆ ಅಗತ್ಯ ಸಹಕಾರ ನೀಡಿದರು. ಐಟಿಸಿ ಮತ್ತು ಲೋವ್ಸ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಹ್ಯಾಂಡ್ಸ್ ಆನ್ ಸಿಎಸ್‌ಆರ್ ಎಂಬ ಪರಿಸರ ಅಭಿವೃದ್ಧಿ ಸಂಸ್ಥೆಗೆ ನೀಡಿ ಕೆರೆಯ ಅಭಿವೃದ್ಧಿಗೆ ಇಂಬು ನೀಡಲಾಯಿತು. ಹಲವು ಸಂಸ್ಥೆಗಳ ಮತ್ತು ಹಲವು ಸ್ಥಳೀಯ ಮುಖಂಡರ ಸಹಕಾರ ಮತ್ತು ಕಾಳಜಿಯ ನಿಮಿತ್ತ ಪುನಶ್ಚೇತನಗೊಂಡಿರುವ ಹುಣಸಮಾರನಹಳ್ಳಿ ಕೆರೆಯನ್ನು ಇಂದು ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ದೈನಂದಿನ ನಡಿಗೆ, ವಿಶ್ರಾಂತಿ ಸೇರಿದಂತೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂ.ನಗರ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಅಶೋಕನ್, ಹುಣಸಮಾರನಹಳ್ಳಿ ಪುರಸಭೆಯ ಮುಖ್ಯ ಅಧಿಕಾರಿ ಕಾಂತರಾಜು, ಲೋವ್ಸ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಂಕುರ್ ಮಿತ್ತಲ್, ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯ ಸಿ.ದೊರೆಸ್ವಾಮಿ, ಗುರನಂದನ್ ರಾವ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್‌ಕುಮಾರ್, ಜಯಗೋಪಾಲ್‌ಗೌಡ, ಶ್ರೀನಿವಾಸಯ್ಯ, ತಾ.ಪಂ.ಸದಸ್ಯೆ ಸುಜಾತ ಜೆ.ಶ್ರೀನಿವಾಸ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶರವಣಕುಮಾರ್, ಹೆಚ್.ಎಸ್.ದಯಾನಂದ, ಹೆಚ್.ಪಿ.ನಾರಾಯಣಸ್ವಾಮಿ, ಸತ್ಯನಾರಾಯಣ, ಹೆಚ್.ಬಿ.ಹರೀಶ್‌ಕುಮಾರ್, ಹೆಚ್.ಪಿ.ನಾರಾಯಣಸ್ವಾಮಿ, ಲಕ್ಷ್ಮೀಪತಿ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ನಾರಾಯಣಸ್ವಾಮಿ, ಶೆಟ್ಟಿಗೆರೆ ರಾಜಣ್ಣ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *