ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಬಿಜೆಪಿ ನಾಯಕ ಶ್ರೀ ಈಶ್ವರಸಿಂಗ್ ಠಾಕೂರ್ ಅವರು ಪೂರ್ಣಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೀದರ್ ನಗರದ ಪ್ರಸಿದ್ಧ  ಕ್ರಾಂತಿ ಗಣೇಶ್ ಮಂದಿರ ಬಳಿ ಬೋರ್‌ವೆಲ್ ಕೊರೆಸಿಕೊಡುವುದಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ  ಈಶ್ವರಸಿಂಗ್ ಠಾಕೂರ್ ಅವರು ಭರವಸೆ ನೀಡಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಸೋತರೂ  ಈಶ್ವರಸಿಂಗ್ ಠಾಕೂರ್ ಅವರು ತಮ್ಮ ಭರವಸೆ ಮರೆಯಲಿಲ್ಲ. ಆಷಾಢ ಏಕಾದಶಿಯ ಪವಿತ್ರ ದಿನ ಕ್ರಾಂತಿ ಗಣೇಶ ಮಂದಿರ ಬಳಿ ಬೋರ್‌ವೆಲ್ ಹಾಕಿಸಿಕೊಟ್ಟಿದ್ದಾರೆ. ಎರಡು ಇಂಚ್ ನೀರು ಲಭಿಸಿದ್ದು ಭಕ್ತರು, ಸಾರ್ವಜನಿಕರು ಸಂತಸಗೊoಡಿದ್ದಾರೆ.

ಹಲವು ದಶಕಗಳಿಂದ ಹಿಂದೂ ಧರ್ಮಕ್ಕಾಗಿ  ಈಶ್ವರಸಿಂಗ್ ಠಾಕೂರ್ ಹೋರಾಡುತ್ತಿದ್ದಾರೆ. ಪ್ರಸಿದ್ಧ ನರಸಿಂಹ ಝರಣಿ ಕ್ಷೇತ್ರದ ಆಸ್ತಿ ಸಂರಕ್ಷಣೆಗೆ ಅವರು ನಡೆಸಿದ ಹೋರಾಟ ಸ್ಮರಣೀಯ. ಪೊಲೀಸರ ಲಾಠಿ ಏಟುಗಳನ್ನು ತಿಂದು ಅವರು ದೇವಸ್ಥಾನ ಜಮೀನು ಉಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಇದೇ ರೀತಿಯು ಪ್ರಕರಣಗಳಲ್ಲಿ ಹಿಂದೂ ದೇವಸ್ಥಾನಗಳ, ಹಿಂದೂಗಳ ಹಿತರಕ್ಷಣೆಗೆ ಶ್ರಮಿಸಿದ್ದಾರೆ. ಅವರೊಬ್ಬ ಹಿಂದುತ್ವವಾದಿಯಾಗಿ, ಹಿಂದೂ ಸಹೋದರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತ ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಕ್ರಾoತಿ ಗಣೇಶ ಮಂದಿರ ಬಳಿ ಬೋರ್‌ವೆಲ್ ಹಾಕಿಸಿಕೊಟ್ಟು, ತಮ್ಮ ಭರವಸೆಯನ್ನು ಪೂರ್ಣಗೊಳಿಸಿದ  ಈಶ್ವರಸಿಂಗ್ ಠಾಕೂರ್ ಅವರಿಗೆ ದೇವಸ್ಥಾನದ ಪರವಾಗಿ, ಸಮಸ್ತ ಹಿಂದೂಗಳ ಪರವಾಗಿ ಕೃತಕ್ಞತೆ ಸಲ್ಲಿಸಲಾಗುತ್ತದೆ. ಚುನಾವಣೆಯಲ್ಲಿ ಗೆದ್ದವರೇ ಭರವಸೆ ಪೂರ್ಣಗೊಳಿಸಲಾರರು. ಆದರೆ, ಹಿಂದೂ ನಾಯಕರಾದ ಈಶ್ವರಸಿಂಗ್‌ಜಿ ಅವರು ಸೋತ ನಂತರವೂ ತಮ್ಮ ವಾಗ್ದಾನವನ್ನು ಪೂರ್ಣಗೊಳಿಸಿದ್ದಾರೆ. ಅವರೊಬ್ಬ ಮೇಲ್ಪಂಕ್ತಿಯ, ಅತ್ಯುನ್ನತ ವಿಚಾರಧಾರೆಯ, ಮಾತು ತಪ್ಪದ, ಅಗ್ರ ನಾಯಕರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಅಭಿ ಕಾಳೆ, ವಿಕ್ರಮ ಮುದಾಳೆ, ಸುರಜಸಿಂಗ ಠಾಕೂರ, ಲಕ್ಷ್ಮಣ ಬೀದರಕರ್, ನಾಗೇಶ ಶೀಲವಂತ. ಸಾಯಿಕಿರಣ. ಸಂಜು ಕೆಂಚ. ಸಾಯಿನಾಥ್ ಶಾಸ್ತ್ರಿ.ಅಶೋಕ ನವಲ ಕೆಲೆ. ಶೇಖರ್ ದೇವಿದಾಸ್. ಮೋಹನ್ ಎಲ್ಲೂರ್ ಕರ್. ವಿಜಯಕುಮಾರ್ ವಾಗದಾಳೆ. ಹಾಗೂ ಮುಂತಾದವರು ಇದ್ದರು

Leave a Reply

Your email address will not be published. Required fields are marked *