ಚಿಕ್ಕಬಳ್ಳಾಪುರದಲ್ಲಿ‌ ಮಾಜಿ/ಹಾಲಿ ಶಾಸಕರ ನಡುವೆ ದೀಪ ಹಚ್ಚುವ ಟಾಕ್ ವಾರ್ ಜೋರು, ಮಾಜಿ ಸಚಿವ ಡಾ.ಕೆ.ಸುಧಾಕರ್ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ 
ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಭೋಗನಂದೀಶ್ವರ ದೇವಸ್ಥಾನದಲ್ಲಿ ಬಂದು ದೀಪ ಹಚ್ಚಲಿ ಎಂದು ಮಾಜಿ ಸಚಿವ ಸುಧಾಕರ್ ಪ್ರದೀಪ್ ಈಶ್ವರ್ ವಿರುದ್ದ ಸವಾಲ್ ಹಾಕಿದ್ದ ವಿಚಾರಕ್ಕೆ ಶಾಸಕ ಈಶ್ವರ್ ಪ್ರತಿಕ್ರಿಯೆ ನೀಡಿದ್ದು ನಿವೇಶನ ವಿಚಾರದಲ್ಲಿ ನಾನು ಸುಳ್ಳು ಆರೋಪ ಮಾಡುತಿದ್ದೇನೆ ಅನ್ನೋದಾದ್ರೆ ಡಾ.ಕೆ.ಸುಧಾಕರ್ ಕೋವಿಡ್ ಟೈಮ್ನಲ್ಲಿ ಅವ್ಯವಹಾರ ಮಾಡಿಲ್ಲ ಅಂತ ದೀಪ ಹಚ್ಚಲಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ.ಚಿಕ್ಕಬಳ್ಳಾಪುರ ನಗರದ ಖಾಸಗಿ ಹೊಟೇಲೊಂದರಲ್ಲಿ ಎಂ ಎಲ್ ಎ ಹೆಸರಲ್ಲಿ ವೆಬ್ ಸೈಟ್ ಲಾಂಚ್ ಮಾಡಿದ ಮೇಲೆ ಮಾದ್ಯಮಗಳೊಂದಿಗೆ ಮಾತನಾಡಿ 
ಅವರು ನನ್ನ ಮೇಲೆ ಮಾಡಿರುವ ಆರೋಪ ಸಾಭೀತುಪಡಿಸಿ ದೀಪ ಹಚ್ವಲಿ ಅದರ ಜತೆಗೆ ಕೋವಿಡ್ ವೇಳೆ ಸಾವಿರಾರು ಕೋಟಿ ಅವ್ಯವಹಾರ ನಡೆಸಿಲ್ಲ ಅಂತ ದೀಪ ಹಚ್ಚಲಿ ನೋಡೋಣ ನಾನು 
ಎಲ್ಲಾ ದಾಖಲೆ ಸಮೇತ ಬಂದು ನಂದಿ ದೇವಸ್ಥಾನದ ಮುಂದೆ ಬಿಡುಗಡೆ ಮಾಡ್ತೇನೆ ಎಂದು ಸವಾಲು ಹಾಕಿದ್ದಾರೆ.ಸಾದ್ಯವಾದರೆ ಎಸ್.ಐ.ಟಿ.ತನಿಖೆಗೂ ನಮ್ಮ ಸರ್ಕಾರ ಚಿಂತನೆ ನಡೆಸಿದೆ ಕೊರೋನಾ ವೇಳೆ ಭ್ರಷ್ಟಾಚಾರ ಮಾಡಿಲ್ಲ ಅಂತ ದೀಪ ಹಚ್ಚಲಿ ನೊಡೋಣ ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡು ಹಾಕ್ಕೊಂಡು ದೀಪ ಹಚ್ಚೋಣ ಎಂದು ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ವ್ಯಂಗವಾಗಿ ಟಾಂಗ್ ನೀಡಿದರು.

Leave a Reply

Your email address will not be published. Required fields are marked *