ಬ್ಯಾಟರಾಯನಪುರ : ನಿಗದಿತ ಸಮಯದಲ್ಲಿ ಸಾಲದ ಮರುಪಾವತಿ ಸಹಕಾರಿ ಸಂಘಗಗಳ ಯಶಸ್ಸಿನ ಗುಟ್ಟಾಗಿದ್ದು, ಸಾಲ ಪಡೆದ ಖಾತೆದಾರರು ಪಡೆದ ಸಾಲವನ್ನು ನಿಶ್ಚಿತ ವೇಳೆಯಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳ ಏಳೆಗೆಯಲ್ಲಿ ತಾವೂ ಸಹ ಪಾಲುದಾರರಾಗಬೇಕು ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ 5ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿಯಲ್ಲಿ 1838 ಮಂದಿ ಶೇರುದಾರರಿದ್ದು, ಪ್ರಸ್ತುತ ರೂ.೬ ಕೋಟಿ ರು.ಗಳ ವಹಿವಾಟು ನಡೆಯುತ್ತಿದೆ. ಸೊಸೈಟಿಯಿಂದ ಶೇರುದಾರರಿಗೆ ನೀಡಿರುವ ಸಾಲ ಶೇ. 95%ರಷ್ಟು ಪ್ರಾಮಾಣಿಕವಾಗಿ ಮರುಪಾವತಿಯಾಗುತ್ತಿದೆ. ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರ ಉತ್ತಮ ರೀತಿಯ ಸಮನ್ವಯತೆಯಿಂದ ಸೊಸೈಟಿಯು ಈ ವರ್ಷ 9.75 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಹೈಕೋರ್ಟ್‌ನ ಹಿರಿಯ ವಕೀಲರು, ಜ.ಕ್ರೆ.ಕೋ.ಆ.ಸೋಸೈಟಿಯ ನಿರ್ದೇಶಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಮುಂತಾದ ಮೌಲ್ಯಗಳು ಸಹಕಾರಿ ಸಂಸ್ಥೆಗಳ ಯಶಸ್ಸಿನ ಸೂತ್ರಗಳಾಗಿದ್ದು, ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಇವುಗಳನ್ನು ತಮ್ಮ ಮೂಲಮಂತ್ರವಾಗಿ ಅಳವಡಿಸಿಕೊಳ್ಳಬೇಕು. ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ, ನಿಬ್ಬಂದಿ ಮತ್ತು ಶೇರುದಾರ ಸದಸ್ಯರ ನಡುವೆ ಪರಸ್ಪರ ಸಹಕಾರ ಬಹುಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಮರಣಹೊಂದಿದ ಶೇರುದಾರರ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲ ಮಿತಿಯೊಳಗೆ ಸಾಲ ಮರುಪಾವತಿ ಮಾಡಿದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ವೈಯಕ್ತಿಕ ಜಾಮೀನು ಸಾಲಗಾ ರರಿಗೆ ಸನ್ಮಾನ ಹಾಗೂ ಯಶಸ್ವಿನಿ ಯೋಜನೆಯ ಫಲಾನುಭ ವಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಿ.ನಾಗರಾಜಪ್ಪ, ನಿರ್ದೇಶಕರಾದ ಬಿ.ಜಿ. ರಮೇಶ್, ವಿನೋದ್‌ಕುಮಾರ್ ವ್ಯಾಸ, ಬಿ.ಕೆ.ರವೀಂದ್ರನಾಥಗೌಡ, ಎಸ್.ಮಾರುತಿ, ಸಿ.ಎ.ಚಿಕ್ಕಣ್ಣ, ರತ್ನಮ್ಮ, ಸುಮಿತ್ರ, ಜಿ.ಆಂಜನಪ್ಪ, ಈ.ಕೃಷ್ಣಪ್ಪ, ಕಾರ್ಯದರ್ಶಿ ಎಸ್.ಟಿ.ರಾಕೇಶ್, ಯಶೋಧ ಉಪಸ್ಥಿತರಿದ್ದರು.

ನಿಶ್ವಿತ ಸಮಯದಲ್ಲಿ ಸಾಲ ಮರುಪಾವತಿ ಸಹಕಾರಿ ಸಂಘಗಳ ಯಶಸ್ಸು ಗುಟ್ಟು : ರವಿಕುಮಾರ್

ಬ್ಯಾಟರಾಯನಪುರ : ನಿಗದಿತ ಸಮಯದಲ್ಲಿ ಸಾಲದ ಮರುಪಾವತಿ ಸಹಕಾರಿ ಸಂಘಗಗಳ ಯಶಸ್ಸಿನ ಗುಟ್ಟಾಗಿದ್ದು, ಸಾಲ ಪಡೆದ ಖಾತೆದಾರರು ಪಡೆದ ಸಾಲವನ್ನು ನಿಶ್ಚಿತ ವೇಳೆಯಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳ ಏಳೆಗೆಯಲ್ಲಿ ತಾವೂ ಸಹ ಪಾಲುದಾರರಾಗಬೇಕು ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ 5ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿಯಲ್ಲಿ 1838 ಮಂದಿ ಶೇರುದಾರರಿದ್ದು, ಪ್ರಸ್ತುತ ರೂ.೬ ಕೋಟಿ ರು.ಗಳ ವಹಿವಾಟು ನಡೆಯುತ್ತಿದೆ. ಸೊಸೈಟಿಯಿಂದ ಶೇರುದಾರರಿಗೆ ನೀಡಿರುವ ಸಾಲ ಶೇ. 95%ರಷ್ಟು ಪ್ರಾಮಾಣಿಕವಾಗಿ ಮರುಪಾವತಿಯಾಗುತ್ತಿದೆ. ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರ ಉತ್ತಮ ರೀತಿಯ ಸಮನ್ವಯತೆಯಿಂದ ಸೊಸೈಟಿಯು ಈ ವರ್ಷ 9.75 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಹೈಕೋರ್ಟ್‌ನ ಹಿರಿಯ ವಕೀಲರು, ಜ.ಕ್ರೆ.ಕೋ.ಆ.ಸೋಸೈಟಿಯ ನಿರ್ದೇಶಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಮುಂತಾದ ಮೌಲ್ಯಗಳು ಸಹಕಾರಿ ಸಂಸ್ಥೆಗಳ ಯಶಸ್ಸಿನ ಸೂತ್ರಗಳಾಗಿದ್ದು, ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಇವುಗಳನ್ನು ತಮ್ಮ ಮೂಲಮಂತ್ರವಾಗಿ ಅಳವಡಿಸಿಕೊಳ್ಳಬೇಕು. ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ, ನಿಬ್ಬಂದಿ ಮತ್ತು ಶೇರುದಾರ ಸದಸ್ಯರ ನಡುವೆ ಪರಸ್ಪರ ಸಹಕಾರ ಬಹುಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಮರಣಹೊಂದಿದ ಶೇರುದಾರರ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲ ಮಿತಿಯೊಳಗೆ ಸಾಲ ಮರುಪಾವತಿ ಮಾಡಿದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ವೈಯಕ್ತಿಕ ಜಾಮೀನು ಸಾಲಗಾ ರರಿಗೆ ಸನ್ಮಾನ ಹಾಗೂ ಯಶಸ್ವಿನಿ ಯೋಜನೆಯ ಫಲಾನುಭ ವಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಿ.ನಾಗರಾಜಪ್ಪ, ನಿರ್ದೇಶಕರಾದ ಬಿ.ಜಿ. ರಮೇಶ್, ವಿನೋದ್‌ಕುಮಾರ್ ವ್ಯಾಸ, ಬಿ.ಕೆ.ರವೀಂದ್ರನಾಥಗೌಡ, ಎಸ್.ಮಾರುತಿ, ಸಿ.ಎ.ಚಿಕ್ಕಣ್ಣ, ರತ್ನಮ್ಮ, ಸುಮಿತ್ರ, ಜಿ.ಆಂಜನಪ್ಪ, ಈ.ಕೃಷ್ಣಪ್ಪ, ಕಾರ್ಯದರ್ಶಿ ಎಸ್.ಟಿ.ರಾಕೇಶ್, ಯಶೋಧ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *