ಚಿಕ್ಕಬಳ್ಳಾಪುರ: ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ರಕ್ತದಾನ ಹಾಗಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ್ ಕರೇ ನೀಡಿದರು.
ಅವರು ಇದೇ ಬುಧವಾರ23ರಂದು ನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಚಿಕ್ಕಬಳ್ಳಾಪುರ ನಗರ ಮಂಡಲ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹುತಾತ್ಮ ಯೋಧರ ನೆನಪಿನಲ್ಲಿ ಬ್ರಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕುರಿತು ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಭಾರತೀಯ ಜನತಾ ಪಕ್ಷದಿಂದ ಸತತವಾಗಿ11ವರ್ಷಗಳಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಇನ್ನು ನಮ್ಮ ವಿಭಾಗದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹವಾಗುತ್ತಿದೆ ಈ ವರ್ಷವೂ ಕೂಡ ಅತಿ ಹೆಚ್ಚು ಯುನಿಟ್ ರಕ್ತ ಸಂಗ್ರಹ ಮಾಡುವ ಗುರಿಯೊಂದಿಗೆ ಈ ರಕ್ತದಾನ ಶಿಬಿರ ನಡೆಯಲಿದೆ.
18ರಿಂದ 60 ವರ್ಷದ ಎಲ್ರೂ ರಕ್ತದಾನ ಮಾಡಬಹುದಾಗಿದೆ ಆರೋಗ್ಯ ತಜ್ಞರ ಪ್ರಕಾರ 
ರಕ್ತದಾನದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ ದೇಹಕ್ಕೆ ಹೊಸ ಉತ್ಸಾಹ ಹುಮ್ಮಸ್ಸು ದೊರೆಯುತ್ತದೆ ರಕ್ತಾದಾನ ನಂತರ 24 ಗಂಟೆಯೊಳಗೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಸಣ್ಣ ಸಣ್ಣ ಕಾಯಿಲೆಗಳಿಂದ ಮುಕ್ತವಾಗಬಹುದು ಹಾಗಾಗಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಈ ಒಂದು ಶಿಬಿರದಲ್ಲಿ ಬಂದು ರಕ್ತದಾನ ಮಾಡಿ ಜೀವ ಉಳಿಸೂ ಮಹಾ ಕಾರ್ಯಕ್ಕೆ ಮುಂದಾಗಬೇಕು ಎಂದರು.ಇನ್ನು ಜಿಲ್ಲೆಯಾದ್ಯಂತ ಕೂಡ ಎಲ್ಲಾ ನಗರ ಮಂಡಲ ವತಿಯಿಂದ ಇಂತಹ ಶಿಬಿರಗಳನ್ನು
ಹಮ್ಮಿಕೊಳ್ಳಲಾಗುವುದು ಎಂದರು.ಈ ಬಾರಿ ಸಹ 200ಕ್ಕು ಹೆಚ್ಚುಯೂನಿಟ್ ರಕ್ತದಾನವಾಗುವ ನಿರೀಕ್ಷೆ ಇದೆ ತಪ್ಪದೆ ಎಲ್ಲರೂ ಭಾಗವಹಿಸಿ ರಕ್ತದಾನಮಾಡುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಅನು ಆನಂದ್
ಅಜಿತ್.ರಘು.ಟೈಲರ್ಸೀನಾ.ಮಲ್ಲಿಕಾ.ಸೌಮ್ಯಇತರರು ಇದ್ದರು.

Leave a Reply

Your email address will not be published. Required fields are marked *