ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ನಡೆದ ಡಿ ಎಲ್ ಆರ್ ಸಿ ಸಭೆಯಲ್ಲಿ ಪಾಲ್ಗೊಂಡ ಸಂಸದ ಬಚ್ಚೇಗೌಡರು ಮಾದ್ಯಮಗಳೊಂದಿಗೆ ಮಾತನಾಡಿ ಪರೋಕ್ಷವಾಗಿ ಬಿಜೆಪಿ ವಿರುದ್ದವೆ ವಾಗ್ದಾಳಿ ಮಾಡಿದರು.
ನನಗೆ ವಯಸ್ಸಾಯಿತು ಸಾಕಾಯ್ತು ರಾಜಕೀಯದಲ್ಲಿ ಬಹಳ ಶ್ರಮ ಪಟ್ಟಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.50 ವರ್ಷ ರಾಜಕೀಯ‌ ಸೇವೆ ಮಾಡಿದ್ದೇನೆ, ನನ್ನ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ,ಐದಾರು ಬಾರಿ ಶಾಸಕ ಆಗಿದ್ದೆ ಮಂತ್ರಿಯಾಗಿದ್ದೆ,
ನಾನು ಇನ್ನು ಸಕ್ರಿಯ ರಾಜಕಾರಣದಲ್ಲಿ ಇರಲ್ಲ ಎಂದರು.
ಐದು ಗ್ಯಾರಂಟಿಗಳನ್ನು ಚಾಕಚಕ್ಯತೆಯಿಂದ ಜಾರಿಗೆ ತಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.ಸಿದ್ದರಾಮಯ್ಯ ಇವೆಲ್ಲ ಜಾರಿಗೆ ತರುವಂಥಹ ಬುದ್ದಿವಂತಿಕೆ ಇದೆ‌,ಸಿದ್ದರಾಮಯ್ಯ ಬಹಳ ಸಾರಿ ಚುನಾಯಿತರಾಗಿದ್ದಾರೆ,ಸಿದ್ದರಾಯ್ಯ ಬಹಳ ವರ್ಷ ವಿತ್ತ ಸಚಿವರಾಗಿರುವ ಅನುಭವ ಇದೆ, ಇದುವರೆಗೂ ಬಿಜೆಪಿ ಅಧ್ಯಕ್ಷರನ್ನು ಮಾಡಿಲ್ಲ ಬಿಜೆಪಿ, ಮೂರು ತಿಂಗಳ ಹತ್ತತ್ರ ನಾಲ್ಕನೇ ತಿಂಗಳಾಗ್ತಾ ಇದೆ, ಪ್ರತಿ ಪಕ್ಷದ ನಾಯಕನನ್ನು ಮಾಡಲು ಆಗಲಿಲ್ಲ ಎಂದು ವಿವರಿಸಿದರು.
ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲ್ಲ ನನಗೆ ವಯಸ್ಸಾಯಿತು ಇನ್ಮುಂದೆ ಪಕ್ಷದ ಚಟುವಟಿಕೆ ಮಾಡಿಕೊಂಡಿರ್ತೀನಿ ಎಂದರು.
ಹಿರಿಯ ರಾಜಕಾರಣಿ ಬಿಜೆಪಿ ಪಕ್ಷದಿಂದ ಸಂಸದರಾಗಿ ಗೆದ್ದಿರುವ ಬಿ.ಎನ್ ಬಚ್ಚೇಗೌಡರು ಪಕ್ಷದ ವಿರುದ್ದವೇ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಇನ್ನು ಬಿಜೆಪಿ ರಾಜ್ಯದಲ್ಲಿ ವರ್ಚಸ್ಸು ಕಳೆದುಕೊಂಡಿದ್ದೆ ಕಾರಣ ಕಾಂಗ್ರೇಸ್ ಸರ್ಕಾರ ದುಡ್ಡು ಕೊಟ್ಟು ಕೊಂಡುಕೊಳ್ತೀವಿ ಅಂದ್ರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಮೋಸ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ದವೂ ಪರೋಕ್ಷವಾಗಿ ಕಿಡಿಕಾರಿದರು.ಕಾಂಗ್ರೇಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ಉತ್ತಮವಾಗಿವೆ ಸಿದ್ದರಾಮಯ್ಯ13 ಬಾರಿ ಬಡ್ಜೆಟ್ ಮಂಡನೆ ಮಾಡಿ ಉತ್ತಮ ಹಣಕಾಸು ನಿರ್ವಾಹಕರು ಎಂದು ಹಾಡಿಹೊಗಳಿದರು.
ಸಭೆಯಲ್ಲಿ ಕೆನರಾ ಬ್ಯಾಂಕ್ ಎಲ್ ಡಿ ಎಂ ಸಧಾನಂದ ಕಲಗಿ,ಕೆನರಾ ಬ್ಯಾಂಕ್ ಎಜಿಎಂ ಸುರೇಶ್,ಆರ್ ಬಿ ಐ ಬ್ಯಾಂಕ್ ಶಾಂತ ಕುಮಾರಿ,ನಬಾರ್ಡ್ ಬ್ಯಾಂಕ್ ಎಜಿಎಂ ರಾಘವೇಂದ್ರ ಚದಲಪುರ ರುಡ್ ಸೆಟ್ ಡೈರೆಕ್ಟರ್ ರಾಘವೇಂದ್ರ ದೇಶಪಾಂಡೆ,ಕೆನರಾ ಬ್ಯಾಂಕ್ ಎಫ್ ಎಲ್ ಸಿ ಮ್ಯಾನೇಜರ್ ಕವಿತ,ಎಸ್ ಬಿ ಐ ,ಬರೋಡಾ ಬ್ಯಾಂಕ್,
ಕರ್ನಾಟಕ ಬ್ಯಾಂಕ್,ಕೆ ಜಿ ಬಿ ಅಧಿಕಾರಿಗಳು ಮತ್ತು ಇಲಾಖಾ ಅಧಿಕಾರಿಗಳು ಬಾಗವಹಿಸಿದ್ದರು.

Leave a Reply

Your email address will not be published. Required fields are marked *