ಹುಬ್ಬಳ್ಳಿ :- ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ 14 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಯಾಗಿದೆ ಎಂದು ಶಾಸಕ ಎಂ ಆರ್ ಪಾಟೀಲ್ ಹೇಳಿದರು.
ಕುಂದಗೋಳ ತಾಲೂಕು ಯರಿನಾರಾಯಣಪುರ , ಯರಗುಪ್ಪಿ, ಗುಡೇನಕಟ್ಟಿ, ಹಿರೇನರ್ತಿ, ಚಿಕ್ಕನರ್ತಿ, ಬಸಾಪೂರ, ಚಾಕಲಬ್ಬಿ, ರೊಟ್ಟಿಗವಾಡ, ಬರದ್ವಾಡ ಹೀಗೆ ಒಟ್ಟು 14 ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಶಾಸಕ ಎಮ್.ಆರ್.ಪಾಟೀಲ್ ಅವರ ನಿರಂತರ ಶ್ರಮದ ಫಲವಾಗಿ ಇಂದು ನವಿಲುತೀರ್ಥ ಜಲಾಶಯದಿಂದ ಎಮ್.ಆರ್.ಬಿ.ಸಿ ಕಾಲುವೆ ಮೂಲಕ ನೀರು ಬಿಡಲು ಬೆಳಗಾವಿ ಪ್ರಾದೇಶಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಅವರು ಆದೇಶವನ್ನು ಹೊರಡಿಸಿದ್ದಾರೆ.
ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಬರಗಾಲದ ಮುನ್ಸೂಚನೆ ಇರುವ ಕಾರಣದಿಂದ ಕೆರೆ-ಕಟ್ಟೆಗಳಲ್ಲಿ ನೀರು ಇಲ್ಲದಂತಾಗಿ ಜನ-ಜಾನುವಾರುಗಳಿಗೆ ತೊಂದರೆ ಉಂಟಾಗಿತ್ತು. ಹಲವು ದಿನಗಳಿಂದ ಕುಂದಗೋಳ ತಾಲೂಕಿನ 14 ಹಳ್ಳಿಗಳಿಗೆ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಬರುವ ಕುಡಿಯುವ ನೀರು ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.
ಇದನ್ನು ಅರಿತ ಕುಂದಗೋಳ ಮತಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ 14 ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸುವಂತೆ ಕೆಲ ದಿನಗಳ ಹಿಂದೆ ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಸೂಚನೆ ನೀಡಿದರು. ಇದಕ್ಕೆ ಪ್ರತಿಯಾಗಿ ಧಾರವಾಡ ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಪತ್ರ ಬರೆದು ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು.
ಅದರಂತೆ ತಾಲೂಕಿನ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಅರಿತ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ 7 ಗ್ರಾಮಗಳು, ನವಲಗುಂದ ತಾಲೂಕಿನ 15 ಗ್ರಾಮಗಳು ಹಾಗೂ ಕುಂದಗೋಳ ತಾಲೂಕಿನ 14 ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿದಿನ 700 ಕ್ಯೂಸೆಕ್ ನಂತೆ ಆ.22 ರಿಂದ ಸೆ.5 ರವರೆಗೆ ಒಟ್ಟು 0.907 ಟಿಎಂಸಿ ನೀರು ಬಿಡಲು ತಿಳಿಸಿದ್ದಾರೆ.
ಈ ಮೂಲಕ ತಾಲೂಕಿನ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಮ್.ಆರ್.ಪಾಟೀಲ್ ಅವರಿಗೆ ತಾಲುಕಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.

14 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ: ಶಾಸಕ ಎಂ ಆರ್ ಪಾಟೀಲ್


ಹುಬ್ಬಳ್ಳಿ :- ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ 14 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಯಾಗಿದೆ ಎಂದು ಶಾಸಕ ಎಂ ಆರ್ ಪಾಟೀಲ್ ಹೇಳಿದರು.
ಕುಂದಗೋಳ ತಾಲೂಕು ಯರಿನಾರಾಯಣಪುರ , ಯರಗುಪ್ಪಿ, ಗುಡೇನಕಟ್ಟಿ, ಹಿರೇನರ್ತಿ, ಚಿಕ್ಕನರ್ತಿ, ಬಸಾಪೂರ, ಚಾಕಲಬ್ಬಿ, ರೊಟ್ಟಿಗವಾಡ, ಬರದ್ವಾಡ ಹೀಗೆ ಒಟ್ಟು 14 ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಶಾಸಕ ಎಮ್.ಆರ್.ಪಾಟೀಲ್ ಅವರ ನಿರಂತರ ಶ್ರಮದ ಫಲವಾಗಿ ಇಂದು ನವಿಲುತೀರ್ಥ ಜಲಾಶಯದಿಂದ ಎಮ್.ಆರ್.ಬಿ.ಸಿ ಕಾಲುವೆ ಮೂಲಕ ನೀರು ಬಿಡಲು ಬೆಳಗಾವಿ ಪ್ರಾದೇಶಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಅವರು ಆದೇಶವನ್ನು ಹೊರಡಿಸಿದ್ದಾರೆ.
ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಬರಗಾಲದ ಮುನ್ಸೂಚನೆ ಇರುವ ಕಾರಣದಿಂದ ಕೆರೆ-ಕಟ್ಟೆಗಳಲ್ಲಿ ನೀರು ಇಲ್ಲದಂತಾಗಿ ಜನ-ಜಾನುವಾರುಗಳಿಗೆ ತೊಂದರೆ ಉಂಟಾಗಿತ್ತು. ಹಲವು ದಿನಗಳಿಂದ ಕುಂದಗೋಳ ತಾಲೂಕಿನ 14 ಹಳ್ಳಿಗಳಿಗೆ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಬರುವ ಕುಡಿಯುವ ನೀರು ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.
ಇದನ್ನು ಅರಿತ ಕುಂದಗೋಳ ಮತಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ 14 ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸುವಂತೆ ಕೆಲ ದಿನಗಳ ಹಿಂದೆ ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಸೂಚನೆ ನೀಡಿದರು. ಇದಕ್ಕೆ ಪ್ರತಿಯಾಗಿ ಧಾರವಾಡ ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಪತ್ರ ಬರೆದು ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು.
ಅದರಂತೆ ತಾಲೂಕಿನ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಅರಿತ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ 7 ಗ್ರಾಮಗಳು, ನವಲಗುಂದ ತಾಲೂಕಿನ 15 ಗ್ರಾಮಗಳು ಹಾಗೂ ಕುಂದಗೋಳ ತಾಲೂಕಿನ 14 ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿದಿನ 700 ಕ್ಯೂಸೆಕ್ ನಂತೆ ಆ.22 ರಿಂದ ಸೆ.5 ರವರೆಗೆ ಒಟ್ಟು 0.907 ಟಿಎಂಸಿ ನೀರು ಬಿಡಲು ತಿಳಿಸಿದ್ದಾರೆ.
ಈ ಮೂಲಕ ತಾಲೂಕಿನ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಮ್.ಆರ್.ಪಾಟೀಲ್ ಅವರಿಗೆ ತಾಲುಕಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *