ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ ಹೊಸಕೋಟೆ : ನಗರದ ಕಾಲೇಜು ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆದರ್ಶ ದಂಪತಿಗಳಾದ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಕೇಂದ್ರ ವಿಭಾಗದ ಸಂಯೋಜಕರಾದಂತ ಶಕುಂತಲಾ ಅಕ್ಕ ಹಾಗೂ ರತ್ನಕ್ಕ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಲಿಂಗೇಗೌಡ ಅಣ್ಣ, ನಾರಾಯಣಪ್ಪನವರು, ಶಿವಶಂಕರ ಶಾಸ್ತ್ರಿ ರವರು,ಸುರೇಶಣ್ಣ, ಶಾರದಕ್ಕ, ಭವಾನಿ ಅಕ್ಕ ಹಾಗೂ ಬ್ರಹ್ಮಕುಮಾರಿಸ್ ನ ಅಣ್ಣಂದಿರು ತಮ್ಮಂದಿರು ಭಾಗವಹಿಸಿದ್ದರು.
