ದೇವನಹಳ್ಳಿ: ಯೋಗ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು ನಾನು ಮೊದಲು ದೆಹಲಿಯಲ್ಲಿ ಇದ್ದಾಗ ವಾಕ್ ಮಾಡುತ್ತಿದ್ದೆ ಈಗ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹೊರಗಡೆ ವಾಕ್ ಮಾಡಿದರೆ ಕಲುಷಿತ ಗಾಳಿಯಿಂದಾಗಿ ಕಫ ಕಟ್ಟಿದರೆ ಕಪ್ಪಾಗಿ ಕಾಣಿಸುತ್ತದೆ ಇದರಿಂದ ನಾನು ಕೂಡ ಪ್ರತಿದಿನ ಮನೆಯಲ್ಲಿಯೇ ಮುಂಜಾನೆ ಯೋಗ ಪ್ರಾಣಾಯಾಮ ಮಾಡುತ್ತೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಯೋಗ ಪಟುಗಳು ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸ ಉಂಟುಮಾಡಿದೆ. ಇಂದಿನ ಕಾರ್ಯಕ್ರಮದಲ್ಲಿ ಯೋಗ ಪಟುಗಳು ಪ್ರದರ್ಶಿಸಿರುವ ಈ ರೀತಿಯ ಯೋಗಾಸನಗಳನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಇವರನ್ನು ಎಷ್ಟು ಶ್ಲಾಘನೆ ಮಾಡಿದರು ಕಡಿಮೆಯೇ ಇವರಲ್ಲಿ ನಾಲ್ಕು ಯೋಗಸ್ಪರ್ಧಿಗಳು ನವೆಂಬರ್ 19ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ತೆರಳುತ್ತಿರುವುದು ಸಂತಸವನ್ನುಂಟು ಮಾಡಿದೆ ಇವರುಗಳ ಸ್ಪರ್ಧೆಗೆ ತೆರಳುವ ಖರ್ಚನ್ನು ಸರ್ಕಾರದ ವತಿಯಿಂದ ತಲಾ ಒಬ್ಬರಿಗೆ 1 ಲಕ್ಷ ದಂತೆ 4 ಸ್ಪರ್ಧಿಗಳಿಗೆ 4 ಲಕ್ಷ ಸಹಾಯಧನವನ್ನು ನೀಡುವ ವ್ಯವಸ್ಥೆ ಮಾಡುತ್ತೇನೆ, ಉಳಿದ ಖರ್ಚನ್ನು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಮಾರುತಿ ಅವರು ಭರಿಸುವುದಾಗಿ ಹೇಳಿದ್ದಾರೆ ಹಾಗಾಗಿ ಕ್ರೀಡಾಪಟುಗಳು ಆಸ್ಟ್ರೇಲಿಯಾದ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ ಈಗಾಗಲೇ ಕ್ರಿಕೆಟ್ ಒಲಂಪಿಕ್ ಮುಂತಾದ ಕ್ರೀಡೆಗಳಲ್ಲಿ ಭಾರತ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ನಮ್ಮ ಗ್ರಾಮಾಂತರ ಜಿಲ್ಲೆಯಿಂದ ಇವರುಗಳು ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಈ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ತೆರಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಅಲ್ಲದೆ ಯೋಗ ನೃತ್ಯ ಪ್ರದರ್ಶನವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ ನಿಹಾರಿಕ ಅವರನ್ನು ಮತ್ತು ಈ ಕಾರ್ಯಕ್ರಮ ಆಯೋಜನೆ ಮಾಡಿದ ಮಾರುತಿ ಅವರಿಗೂ ಅಭಿನಂದನೆಗಳು, ಎಂದು ಆಹಾರ, ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪನವರು ಹೇಳಿದರು.

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಇವರ ವತಿಯಿಂದ ದೇವನಹಳ್ಳಿಯ ಬೂದಿಗೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ ಮಾತನಾಡಿ, ಯೋಗಾಸನ ಬಹಳ ಪುರಾತನವಾದದ್ದು ರಾಮಾಯಣ ಮಹಾಭಾರತ ಕಾಲದಿಂದಲೂ ಯೋಗಾಸನ ಮಾಡಲಾಗುತ್ತಿತ್ತು ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ ನಾವು ದಿನನಿತ್ಯ ಯೋಗವನ್ನು ಮಾಡುವುದರಿಂದ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಳಿಗ್ಗೆ ಯೋಗಾಸನ ಮಾಡಿದರೆ ಇಡೀ ದಿನ ಉಲ್ಲಾಸದಿಂದ ಇರಬಹುದು ಮಾನ್ಯ ಮಂತ್ರಿಗಳಾದ ಕೆಎಚ್ ಮುನಿಯಪ್ಪನವರು ಪ್ರತಿ ದಿನ ಬೆಳಿಗ್ಗೆ ಯೋಗ ಮಾಡುವುದರಿಂದ ಅವರು ಗಟ್ಟಿಮುಟ್ಟಾಗಿ ಇದ್ದಾರೆ ಮತ್ತು ಅವರ ಆರೋಗ್ಯ ಮತ್ತು ಈ ಮಟ್ಟದ ಸಾಧನೆಗೆ ಮತ್ತು ಯಶಸ್ವಿಯ ಹಿಂದೆ ಅವರ ಪತ್ನಿ ನಾಗರತ್ನಮ್ಮ ನವರ ಸಹಕಾರ ಕೂಡ ಇದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮಾರುತಿ, ಮಾಜಿ ಸಂಸದ ಸಿ ನಾರಾಯಣ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಮುಖಂಡರುಗಳಾದ ಚೌಡಪ್ಪನಹಳ್ಳಿ ಲೋಕೇಶ್, ಖುದ್ದೂಸ್, ಪಟಾಲಪ್ಪ, ಅನಂತಕುಮಾರಿ ಚಿನ್ಮಪ್ಪ, ಮುನಿಕೃಷ್ಣ, ಸೋಮಣ್ಣ ಮುಂತಾದವರು ಯೋಗ ಕ್ರೀಡಾ ಪಟುಗಳು ಮತ್ತು ಯೋಗ ತರಬೇತುದಾರರು ಇದ್ದರು.

ಬೆಂಗಳೂರಿನ ಕಲುಷಿತ ವಾತಾವರಣದಲ್ಲಿ ವಾಕ್ ಮಾಡುವುದಕ್ಕಿಂತ ಮನೆಯಲ್ಲಿ ಯೋಗ ಮಾಡುವುದು ಉತ್ತಮ: ಕೆ ಎಚ್ ಮುನಿಯಪ್ಪ.

ದೇವನಹಳ್ಳಿ: ಯೋಗ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು ನಾನು ಮೊದಲು ದೆಹಲಿಯಲ್ಲಿ ಇದ್ದಾಗ ವಾಕ್ ಮಾಡುತ್ತಿದ್ದೆ ಈಗ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹೊರಗಡೆ ವಾಕ್ ಮಾಡಿದರೆ ಕಲುಷಿತ ಗಾಳಿಯಿಂದಾಗಿ ಕಫ ಕಟ್ಟಿದರೆ ಕಪ್ಪಾಗಿ ಕಾಣಿಸುತ್ತದೆ ಇದರಿಂದ ನಾನು ಕೂಡ ಪ್ರತಿದಿನ ಮನೆಯಲ್ಲಿಯೇ ಮುಂಜಾನೆ ಯೋಗ ಪ್ರಾಣಾಯಾಮ ಮಾಡುತ್ತೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಯೋಗ ಪಟುಗಳು ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸ ಉಂಟುಮಾಡಿದೆ. ಇಂದಿನ ಕಾರ್ಯಕ್ರಮದಲ್ಲಿ ಯೋಗ ಪಟುಗಳು ಪ್ರದರ್ಶಿಸಿರುವ ಈ ರೀತಿಯ ಯೋಗಾಸನಗಳನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ಇವರನ್ನು ಎಷ್ಟು ಶ್ಲಾಘನೆ ಮಾಡಿದರು ಕಡಿಮೆಯೇ ಇವರಲ್ಲಿ ನಾಲ್ಕು ಯೋಗಸ್ಪರ್ಧಿಗಳು ನವೆಂಬರ್ 19ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ತೆರಳುತ್ತಿರುವುದು ಸಂತಸವನ್ನುಂಟು ಮಾಡಿದೆ ಇವರುಗಳ ಸ್ಪರ್ಧೆಗೆ ತೆರಳುವ ಖರ್ಚನ್ನು ಸರ್ಕಾರದ ವತಿಯಿಂದ ತಲಾ ಒಬ್ಬರಿಗೆ 1 ಲಕ್ಷ ದಂತೆ 4 ಸ್ಪರ್ಧಿಗಳಿಗೆ 4 ಲಕ್ಷ ಸಹಾಯಧನವನ್ನು ನೀಡುವ ವ್ಯವಸ್ಥೆ ಮಾಡುತ್ತೇನೆ, ಉಳಿದ ಖರ್ಚನ್ನು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಮಾರುತಿ ಅವರು ಭರಿಸುವುದಾಗಿ ಹೇಳಿದ್ದಾರೆ ಹಾಗಾಗಿ ಕ್ರೀಡಾಪಟುಗಳು ಆಸ್ಟ್ರೇಲಿಯಾದ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ ಈಗಾಗಲೇ ಕ್ರಿಕೆಟ್ ಒಲಂಪಿಕ್ ಮುಂತಾದ ಕ್ರೀಡೆಗಳಲ್ಲಿ ಭಾರತ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ನಮ್ಮ ಗ್ರಾಮಾಂತರ ಜಿಲ್ಲೆಯಿಂದ ಇವರುಗಳು ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಈ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ತೆರಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಅಲ್ಲದೆ ಯೋಗ ನೃತ್ಯ ಪ್ರದರ್ಶನವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ ನಿಹಾರಿಕ ಅವರನ್ನು ಮತ್ತು ಈ ಕಾರ್ಯಕ್ರಮ ಆಯೋಜನೆ ಮಾಡಿದ ಮಾರುತಿ ಅವರಿಗೂ ಅಭಿನಂದನೆಗಳು, ಎಂದು ಆಹಾರ, ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪನವರು ಹೇಳಿದರು.

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಇವರ ವತಿಯಿಂದ ದೇವನಹಳ್ಳಿಯ ಬೂದಿಗೆರೆ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ ಮಾತನಾಡಿ, ಯೋಗಾಸನ ಬಹಳ ಪುರಾತನವಾದದ್ದು ರಾಮಾಯಣ ಮಹಾಭಾರತ ಕಾಲದಿಂದಲೂ ಯೋಗಾಸನ ಮಾಡಲಾಗುತ್ತಿತ್ತು ಎಂದು ಹಲವಾರು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ ನಾವು ದಿನನಿತ್ಯ ಯೋಗವನ್ನು ಮಾಡುವುದರಿಂದ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಳಿಗ್ಗೆ ಯೋಗಾಸನ ಮಾಡಿದರೆ ಇಡೀ ದಿನ ಉಲ್ಲಾಸದಿಂದ ಇರಬಹುದು ಮಾನ್ಯ ಮಂತ್ರಿಗಳಾದ ಕೆಎಚ್ ಮುನಿಯಪ್ಪನವರು ಪ್ರತಿ ದಿನ ಬೆಳಿಗ್ಗೆ ಯೋಗ ಮಾಡುವುದರಿಂದ ಅವರು ಗಟ್ಟಿಮುಟ್ಟಾಗಿ ಇದ್ದಾರೆ ಮತ್ತು ಅವರ ಆರೋಗ್ಯ ಮತ್ತು ಈ ಮಟ್ಟದ ಸಾಧನೆಗೆ ಮತ್ತು ಯಶಸ್ವಿಯ ಹಿಂದೆ ಅವರ ಪತ್ನಿ ನಾಗರತ್ನಮ್ಮ ನವರ ಸಹಕಾರ ಕೂಡ ಇದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮಾರುತಿ, ಮಾಜಿ ಸಂಸದ ಸಿ ನಾರಾಯಣ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಮುಖಂಡರುಗಳಾದ ಚೌಡಪ್ಪನಹಳ್ಳಿ ಲೋಕೇಶ್, ಖುದ್ದೂಸ್, ಪಟಾಲಪ್ಪ, ಅನಂತಕುಮಾರಿ ಚಿನ್ಮಪ್ಪ, ಮುನಿಕೃಷ್ಣ, ಸೋಮಣ್ಣ ಮುಂತಾದವರು ಯೋಗ ಕ್ರೀಡಾ ಪಟುಗಳು ಮತ್ತು ಯೋಗ ತರಬೇತುದಾರರು ಇದ್ದರು.

Leave a Reply

Your email address will not be published. Required fields are marked *