ಶ್ರೀ ದ್ರೌಪದಿ ಜಯಂತಿ ಪ್ರಯುಕ್ತ ಶ್ರೀ ದ್ರೌಪದದೇವಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೊಸಕೋಟೆ : ನಗರದ ಮೇಲಿನ ಪೇಟೆಯಲ್ಲಿರುವ ಶ್ರೀ ದ್ರೌಪದದೇವಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ದ್ರೌಪದಿ ಜಯಂತಿ ಪ್ರಯುಕ್ತ ಭಾನುವಾರ ಅಮ್ಮನವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆ ಮತ್ತು ಉಯ್ಯಾಲೋತ್ಸವ ಹಾಗೂ ಸಹಸ್ರ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ (ಹರಿ) ,ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಚಂದ್ರನ್, ಮುನಿನಂಜಪ್ಪ, ರವೀಂದ್ರ ಹೆಚ್ ಜಿ, ಮಂಜುನಾಥ್, ಉಮೇಶ್, ರವಿ, ಪ್ರಭಾಕರ್, ಅಯ್ಯಣ್ಣಪ್ಪ, ಪೂಜಾರಿಗಳಾದ ಅಜಯ್, ಹರಿ, ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
