.

ಕೊರಟಗೆರೆ;- ಪತ್ರಿಕೋದ್ಯಮಕ್ಕೆ ವಿಶೇಷವಾದ ಶಕ್ತಿ ಇದ್ದು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕೆ ಇದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣ ಮಾದ್ಯಮಗಳು ಡಿ.ಪೇಕ್ ಸುದ್ದಿಗಳು ಬಿತ್ತರಿಸುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಳವಳ ವ್ಯಕ್ತ ಪಡಿಸಿದರು.
ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಕನ್ನಡ ನುಡಿನಮ, ಪತ್ರಿಕಾ ದಿನಾಚರಣೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಕೆ, ಮಹಿಳಾ ಸಾಧಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮ ಎನ್ನುವುದು ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಒಂದು ಭಾಗವಾಗಿದ್ದು ಈ ನಾಲ್ಕು ಅಂಗಗಳಲ್ಲಿ ಒಂದು ಅಂಗ ಸರಿ ಇಲ್ಲದಿದ್ದರೂ ಪ್ರಜಾಪ್ರಭುತ್ವ ಗೊಂದಲದಲ್ಲಿ ಸಿಲುಕುತ್ತದೆ, ಪ್ರತಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರದ ಶಕ್ತಿ ಸಮಾಜವನ್ನು ತಿದ್ದುವಂತಹದ್ದು.ಅದ್ದರಿಂದ ಆಧುನಿಕ ಮಟ್ಟದಲ್ಲಿ ಪತ್ರಿಕೋದ್ಯಮಕ್ಕೆ ವಿಶೇಷ ಶಕ್ತಿ ಇದೆ, ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ಮಾತನಾಡುವ ವಿಚಾರ ವಸ್ತು ನಿಷ್ಠವಾದರೂ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಭಿಪ್ರಾಯ ಜನರ ಮನಮೇಲೆ ಪರಿಣಾಮ ಭೀರುವಂತೆ ಮಾಡುವ ಶಕ್ತಿಯನ್ನು ಪ್ರತಿಕೋದ್ಯಮಕ್ಕೆ ಇದೆ ಎಂದು ತಿಳಿಸಿದರು.
ದೇಶದ ಅಭಿವೃಧ್ದಿಗೆ ಶಿಕ್ಷಣ ಪೂರಕವಾಗಿದ್ದು ಗ್ರಾಮೀಣ ಭಾಗದ ಪತ್ರಕರ್ತರ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕಲ್ಪಿಸಿ ದೇಶದ ಉತ್ತಮ ನಾಗರೀಕರನ್ನಾಗಿ ರೂಪಿಸುವ ದೃಷ್ಠಿಯಿಂದ ತುಮಕೂರು ಜಿಲ್ಲೆಯ ಎಲ್ಲಾ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಿ ವರ್ಷ ೨೫ ವಿದ್ಯಾರ್ಥಿಗಳಿಗೆ ತಲಾ ೧ ಲಕ್ಷ ರೂಗಳಂತೆ ೨೫ ಲಕ್ಷ ರೂಗಳು ನೀಡುವುದಾಗಿ ಆಶ್ವಾಸನೆ ನೀಡಿದ್ದು ಇದಕ್ಕೆ ಒಂದು ಸಮಿತಿ ರಚಿಸಿಕೊಂಡು ವಿತರಿಸುವಂತೆ ಪತ್ರಕರ್ತರ ಸಂಘಕ್ಕೆ ಸೂಚಿಸಿದ ಸಚಿವರು ಕಾರ್ಯನಿರತ ಪತ್ರಕರ್ತರೊಂದಿಗೆ ಸದಾ ಇದ್ದು ಅವರ ಕಷ್ಟ ಸುಖಗಳಿಲ್ಲಿ ಭಾಗಿಯಾಗವುದಾಗಿ ತಿಳಿಸಿದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ ಮಾತನಾಡಿ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ತಾಲೂಕಿನ ಪತ್ರಕರ್ತರ ಸಮಸ್ಯಗಳಿಗೆ ಸ್ಪಂದಿಸುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಪತ್ರಕರ್ತರ ಮಕ್ಕಳ ಉತ್ತಮ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ ಪ್ರತಿ ವರ್ಷ ಪ್ರತಿ ಪತ್ರಕರ್ತ ಪ್ರತಿಭಾವಂತ ವಿದ್ಯಾರ್ಥಿಗೆ ೧ ಲಕ್ಷ ರೂಗಳಂತೆ ಜಿಲ್ಲೆಯ ೨೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಭರವಸೆ ನೀಡಿರು ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಗೆ ಹೃದಯ ಪೂರ್ವಕ ಕೃತಜ್ಷತೆ ಸಲ್ಲಿಸುತ್ತಿದ್ದೆವೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಗೆ ಒಂದು ಸಮಿತಿ ರಚಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ಜಿಲ್ಲೆಯ ಪತ್ರಕರ್ತರೊಂದಿಗೆ ಸ್ನೇಹ ಜೀವಿಯಾಗಿದ್ದು ಪತ್ರಕರ್ತರ ಸಮಸ್ಯ ಅರಿತಿರುವ ಸಚಿವರು ಸರಕಾರದಲ್ಲಿ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು ಪತ್ರಕರ್ತರ ಸಮಸ್ಯಗಳ ಪರಿಹಾರಕ್ಕೆ ಮುಂದಾಗಬೇಕಾಗಿ ಮನವಿ ಮಾಡಿ ದೇಶದಲ್ಲಿಯೇ ಯಾವ ಶಾಸಕರು, ಸಚಿವರು ಮಾಡದಂತ ಕಾರ್ಯ ಜಿಲ್ಲೆಯ ಪತ್ರಕರ್ತ ೨೫ ಮಕ್ಕಳ ವಿಧ್ಯಾಭ್ಯಾಸಕ್ಕೆ ಪ್ರತಿ ವರ್ಷ ೧ ಲಕ್ಷ ರೂಗಳು ವಿದ್ಯಾರ್ಥಿ ವೇತನ ನೀಡುವ ಆಶ್ವಾಸನೆ ನೀಡಿದ್ದು ಇನ್ನಿತ ಶಾಸಕರುಗಳಿಗೆ, ಮಂತ್ರಿಗಳಿಗೆ, ಸಂಸದರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕುಲ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಹಿದಾ ಜಮ್‌ಜಮ್, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪದ್ಮಿನಿ, ರೈತ ಮಹಿಳೆ ಮಂಜಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಕೆ.ಎಸ್. ಅಮೂಲ್ಯ, ಕ್ರೀಡೆಯಲ್ಲಿ ಸಾಧನೆ ಮಾಡಿದ ಕಾವ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಪದ್ಮನಾಭ್, ತೋವಿನಕೆರೆ ಪದ್ಮರಾಜು, ಕೆ.ವಿ.ಪುರಷೋತ್ತಮ್, ಎನ್.ಮೂರ್ತಿ, ಉಮಾಶಂಕರ್, ಎ.ಆರ್.ಚಿದಂಬರ್‌ರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಇಓ ಜೆ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಕುಲ ಸಚಿವೆ ನಾಹಿದಾ ಜಮ್‌ಜಮ್, ತಹಶೀಲ್ದಾರ್ ಮಂಜುನಾಥ್, ತಾ.ಪಂ.ಇಓ ಅಪೂರ್ವಅನಂತರಾಮು, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ, ರಘುರಾಮ್, ಉಪಾಧ್ಯಕ್ಷ ಚಿಕ್ಕೀರಪ್ಪ, ರಾಜ್ಯ ನಿರ್ದೇಶಕ ಸಿದ್ದಲಿಂಗಸ್ವಾಮಿ, ಮುಖಂಡ ಎಂಎನ್‌ಜೆ ಮಂಜುನಾಥ್ ನಿರ್ದೇಶಕ ಎನ್.ಮೂರ್ತಿ, ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ನಗರಸಭಾ ಮಾಜಿ ಉಪಾಧ್ಯಕ್ಷ ವಾಲೆಚಂದ್ರಯ್ಯ, ಹೂಲಿಕುಂಟೆ ರುದ್ರಪ್ರಸಾದ್, ಇತರರು ಇದ್ದರು.

Leave a Reply

Your email address will not be published. Required fields are marked *