ಪಬ್ಲಿಕ್ ಪವರ್ ಸುದ್ದಿ
ವರದಿ -ಸದಾನಂದ, ಶಿಡ್ಲಘಟ್ಟ,

ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರದಹಳ್ಳಿಯ ಮುನೇಂದ್ರ ಬಿನ್ ಮುನಿಕೃಷ್ಣಪ್ಪ ರವರು ಫಾರಂ ಕೋಳಿಯ ಅಂಗಡಿಯನ್ನು ಗೋಣಿಮರದಹಳ್ಳಿಯ ಬಸ್ಟಾಂಡ್ ನಲ್ಲಿ ಹಾಕಿ ಕೊಂಡಿದ್ದು ಉಳಿಕೆ ಫಾರಂ ಕೋಳಿಗಳನ್ನು ಗ್ರಾಮದ ವೆಂಕಟರವಣಪ್ಪ ಬಿನ್ ವೆಂಕಟೇಶಪ್ಪರವರುಗಳ ಮನೆಗಳ ಹತ್ತಿರ ಸುಮಾರು ಆರು ತಿಂಗಳುಗಳಿಂದ ಇಟ್ಟುಕೊಂಡಿದ್ದು ಇದರಿಂದ ನೊಣಗಳು ಎತ್ತೇಚ್ಚವಾಗಿ ಮನೆಗಳಿಗೆ ನುಗ್ಗಿ ತಿನ್ನುವ ಪದಾರ್ಥಗಳ ಮೇಲೆಯೂ ಸಹ ಕುಳಿತುಕೊಂಡು ವೆಂಕಟರವಣಪ್ಪ ಮನೆಯಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗೂ ಸಹ ಹೋಗಿ ಬಂದಿರುವುದು ಉಂಟು ಇದರ ಜೊತೆಗೆ ವೆಂಕಟರವಣಪ್ಪ ರವರ ತಾಯಿಗೆ ಹೊಟ್ಟೆ ಆಪರೇಷನ್ ಆಗಿದ್ದು ಮತ್ತೇ ಯಾವುದೇ ಕಾಯಿಲೆಗೆ ತುತ್ತಾದರು ಪ್ರಾಣಾಪಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಡಾಕ್ಟರ್ ತಿಳಿಸಿದ್ದಾರೆ.

ಆದ್ದರಿಂದ ಇದನ್ನು ತೆರೆವುಗೊಳಿಸುವಂತೆ ಸದರಿ ಮನೆಯವರು ಸಾಕಷ್ಟು ಸಲ ಕೇಳಿಕೊಂಡರು ಮನೇಂದ್ರರವರು ತಲೆ ಕೆಡಿಸಿಕೊಳ್ಳದೆ ಆತನ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ ಆಗ ಎಚ್ಚೆತ್ತುಕೊಂಡ ವೆಂಕಟರವಣಪ್ಪರವರು ಮೇ 17 ನೇ ತಾರೀಖು ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ರವರಾದ ಗೋಪಾಲ ರವರಿಗೆ ಅರ್ಜಿ ಮೂಲಕ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದು ಪರಿಶೀಲಿಸಿ ಮುನೇಂದ್ರರವರಿಗೆ ಕೂಡಲೇ ಉಳಿಕೆ ಕೋಳಿಗಳನ್ನು ತೆರೆವುಗೊಳಿಸಿ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾಗಿ ತಿಳಿಸಿದರು. ಆದರು ಅಧಿಕಾರಿಗಳ ಮಾತನ್ನು ಲೆಕ್ಕಿಸದೆ ಇನ್ನೂ ಅಲ್ಲಿಯೇ ಮುಂದುವರೆಸುತ್ತಿದ್ದಾರೆ ತದ ನಂತರ ವೆಂಕಟರವಣಪ್ಪರವರು ಪಿಡಿಒ ರವರಿಗೆ ಮತ್ತೇ ಕರೆ ಮಾಡಿ ಮಾಹಿತಿ ತಿಳಿಸಲಾಗಿದ್ದು, ಪಂಚಾಯಿತಿ ಕಡೆಯಿಂದ ಮತ್ತೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೂಡಲೇ ತೆರೆವುಗೊಳಿಸಲು ಎಚ್ಚರಿಕೆ ನೀಡಲಾಗಿತ್ತು ಆದರೂ ಅವರು ಯಾರಿಗೂ ಭಯಪಡದೆ ಮತ್ತೇ ಕೋಳಿಗಳನ್ನು ಅಲ್ಲಿಯೇ ಇಟ್ಟು ವ್ಯಾಪಾರ ನಡೆಸುತ್ತಿದ್ದು ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ದಯವಿಟ್ಟು ಮೇಲಾಧಿಕಾರಿಗಳಾದರೂ ಈ ಕಡೆ ಗಮನ ಹರಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ವೆಂಕಟರವಣಪ್ಪರವರು ತಮ್ಮ ಅಳಲನ್ನು ತೋಡಿಕೊಂಡರು…

Leave a Reply

Your email address will not be published. Required fields are marked *