ದೇವನಹಳ್ಳಿ : ಲೋಕಸಭೆ ವಿಪಕ್ಷಗಳ ಸಭೆಯಲ್ಲಿ ಬರೋಬ್ಬರಿ 24 ಪಕ್ಷಗಳ 40ಕ್ಕೂ ಅಧಿಕ ನಾಯಕರು ಭಾಗಿಯಾಗಿ ಬಿಜೆಪಿ ದುರಾಡಳಿತಕ್ಕೆ ಪ್ರಬಲ ಪೈಪೋಟಿ ನೀಡಲು ಮಹಾ ಘಟ್ ಬಂಧನ್ ಸಬೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಕೆಎಚ್.ಮುನಿಯಪ್ಪ ಅಭಿಪ್ರಾಯಿಸಿದರು.

ದೇವನಹಳ್ಳಿ ತಾಲ್ಲೂಕು ಕನ್ನಮಂಗಲದಲ್ಲಿ ೫೮ ಲಕ್ಷ ರೂ ವೆಚ್ಚದ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ದೇವನಹಳ್ಳಿ :ಗ್ರಾಮೀಣ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವೃತ್ತಿಯಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚಾಪು ಮೂಡಿಸಲು ಹಾತೂರೆ ಯುವ ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಸಲು ಅಗತ್ಯವಾದ ಪುಸ್ತಕಗಳಿರುವ ಮಾದರಿ ಗ್ರಂಥಾಲಯವನ್ನು ಸ್ಥಾಪಿಸ ಲಾಗಿದೆ, ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ತಾಲೂಕಿನ ಕಸಬಾ ಹೋಬಳಿ ಕನ್ನಮಂಗಲ ಗ್ರಾಮಪಂಚಾ ಯತಿ ಆವರಣದಲ್ಲಿ 57 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಎರಡು ಅಂತಸ್ಥಿನ ಡಿಜಿಟಲ್ ಗ್ರಂಥಾಲಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ಕೆ.ಎಚ್‌.ಮುನಿಯಪ್ಪ ಅವರು ಶಾರದ ಪೂಜೆಯೊಂದಿಗೆ ಟೇಪ್ ಕತ್ತರಿಸುವುದರ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದಿಗೂ ಬಡವರ ಪರವಾಗಿದ್ದು, ಎಲ್ಲಾ ಗ್ಯಾರೆಂಟಿಗಳನ್ನು ಜಾರಿಗೆ ತರುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತದೆ ಇವುಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಲೋಪದೋಷಗಳು ಕಂಡುಬರುವುದು ಸಹಜ ಆದರೆ ಬಿಜೆಪಿಯವರ ದೊಡ್ಡ -ದೊಡ್ಡ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವ ಮನಸ್ಥಿತಿ ಹೊಂದಿದೆ ಆದರೆ ದೇಶದ ರೈತರು ಸ್ವಸಹಾಯ ಸಂಘಗಳ ಸಾಲ ಮನ್ನಾ ಏಕೆ ಮಾಡಲಾಗುವುದಿಲ್ಲ ಎಂದು ಪ್ರಶ್ನಿಸುವುದರ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ – ಯುವಕರಿಗೂ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಹೀಯಾಳಿಸುವುದು ಸಮಂಜಸವಲ್ಲ‌ವೆಂದು ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.

ಕನ್ನಮಂಗಲ ಗ್ರಾಮಪಂಚಾಯತಿ ಅಧ್ಯಕ್ಷ ಲಕ್ಷ್ಮೀಕಾಂತ್‌ ಮಾತನಾಡಿ ಡಿಜಿಟಲ್ ಗ್ರಂಥಾಲಯವು ಪಂಚಾಯತಿ ವ್ಯಾಪ್ತಿಯ ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ನಿರುದ್ಯೋಗ ಯುವಕ ಯುವತಿಯರಿಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಪ್ರತಿ ಯೊಬ್ಬರು ಗ್ರಂಥಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಂಡು ಶೈಕ್ಷಣಿಕವಾಗಿ ಮುಂದೆಬರಬೇಕು ಎಂದರು.
ಗ್ರಾ.ಪಂ.ಸದಸ್ಯ ವೆಂಕಟಸ್ವಾಮಿ ಅವರು ಮಾತನಾಡಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣ ಮಾಡಬೇಕೆನ್ನುವ ಎಲ್ಲಾ ಸದಸ್ಯರು ಕನಸು ನೆರವೇರಿದೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದ್ದರೆ, ಯುವಪೀಳಿಗೆ ಶೈಕ್ಷಣಿಕ ಜ್ಞಾನಾರ್ಜನೆ ಅನುಕೂಲವಾಗುವುದರ ಜೊತೆಗೆ ಪ್ರತಿಯೊಬ್ಬರು ಓದುವ ಹವ್ಯಾಸ ರೂಡಿಸಿಕೊಳ್ಳುತ್ತಾರೆ ಹಾಗೂ ಸ್ಪರ್ದಾತ್ಮಕ ಪರೀಕ್ಷೆ ಎದುರಿಸುವವರಿಗೆ ಅವಶ್ಯಕವಾದ ಪುಸ್ತಕಗಳು ದೊರೆತರೆ ಅವರಿಗೆ ಅನುಕೂಲವಾಗಲಿದೆ. ಗ್ರಂಥಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಇದೇ ವೇಳೆ ಕೆಪಿಸಿಸಿ ಸದಸ್ಯರು ವಿ. ಶಾಂತಕುಮಾರ್
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತ ಸಿಇಒ ಅನುರಾಧ, ಇಒ ಶ್ರೀನಾಥ್ ಗೌಡ ,ಪಂಚಾಯತ್ ಮಾಜಿ ಸದಸ್ಯರು ಕೆ.ಸಿ ಮಂಜುನಾಥ್, ಕನ್ನಮಂಗಲ ಗ್ರಾಪಂ ಮಾಜಿ ಅಧ್ಯಕ್ಷಹಾಲಿ ಸದಸ್ಯ ಕೆ.ಆರ್. ನಾಗೇಶ್, ಎಸ್ ಜಿ ಮಂಜುನಾಥ್, ವೆಂಕಟಸ್ವಾಮಿ, ಗೌರಮ್ಮಮೂರ್ತಿ, ಅಂಬರೀಶ್, ನರಸಿಂಹ ಮೂರ್ತಿ, ಸೋಮಶೇಖರ್, ರಾದಿಕಾತ್ಯಾಗರಾಜು, ಕೃಷ್ಣಯ್ಯ, ಪಿಡಿಒ ಆದರ್ಶಕುಮಾರ್ ಕಾಂಗ್ರೆಸ್ ಪಕ್ಷದ ಮುಖಂಡರು ಗಳಾದ ಚನ್ನಹಳ್ಳಿ ರಾಜಣ್ಣ, ಚಿನ್ನಪ್ಪ ಸೇರಿದಂತೆ ಜಿಲ್ಲಾಡಳಿತ, ಕಂದಾಯ ಮತ್ತು ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಹಾ ಘಟ್ ಬಂಧನ್ ಸಬೆಗೆ 24 ಪಕ್ಷಗಳ 40ಕ್ಕೂ ಅಧಿಕ ನಾಯಕರಿಂದ ಉತ್ತಮ ಪ್ರತಿಕ್ರಿಯೆ ಕೆಎಚ್.ಮುನಿಯಪ್ಪ

ದೇವನಹಳ್ಳಿ : ಲೋಕಸಭೆ ವಿಪಕ್ಷಗಳ ಸಭೆಯಲ್ಲಿ ಬರೋಬ್ಬರಿ 24 ಪಕ್ಷಗಳ 40ಕ್ಕೂ ಅಧಿಕ ನಾಯಕರು ಭಾಗಿಯಾಗಿ ಬಿಜೆಪಿ ದುರಾಡಳಿತಕ್ಕೆ ಪ್ರಬಲ ಪೈಪೋಟಿ ನೀಡಲು ಮಹಾ ಘಟ್ ಬಂಧನ್ ಸಬೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಕೆಎಚ್.ಮುನಿಯಪ್ಪ ಅಭಿಪ್ರಾಯಿಸಿದರು.

ದೇವನಹಳ್ಳಿ ತಾಲ್ಲೂಕು ಕನ್ನಮಂಗಲದಲ್ಲಿ ೫೮ ಲಕ್ಷ ರೂ ವೆಚ್ಚದ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ದೇವನಹಳ್ಳಿ :ಗ್ರಾಮೀಣ ಪ್ರದೇಶದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವೃತ್ತಿಯಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚಾಪು ಮೂಡಿಸಲು ಹಾತೂರೆ ಯುವ ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಸಲು ಅಗತ್ಯವಾದ ಪುಸ್ತಕಗಳಿರುವ ಮಾದರಿ ಗ್ರಂಥಾಲಯವನ್ನು ಸ್ಥಾಪಿಸ ಲಾಗಿದೆ, ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.

ತಾಲೂಕಿನ ಕಸಬಾ ಹೋಬಳಿ ಕನ್ನಮಂಗಲ ಗ್ರಾಮಪಂಚಾ ಯತಿ ಆವರಣದಲ್ಲಿ 57 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಎರಡು ಅಂತಸ್ಥಿನ ಡಿಜಿಟಲ್ ಗ್ರಂಥಾಲಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ಕೆ.ಎಚ್‌.ಮುನಿಯಪ್ಪ ಅವರು ಶಾರದ ಪೂಜೆಯೊಂದಿಗೆ ಟೇಪ್ ಕತ್ತರಿಸುವುದರ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದಿಗೂ ಬಡವರ ಪರವಾಗಿದ್ದು, ಎಲ್ಲಾ ಗ್ಯಾರೆಂಟಿಗಳನ್ನು ಜಾರಿಗೆ ತರುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತದೆ ಇವುಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಲೋಪದೋಷಗಳು ಕಂಡುಬರುವುದು ಸಹಜ ಆದರೆ ಬಿಜೆಪಿಯವರ ದೊಡ್ಡ -ದೊಡ್ಡ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವ ಮನಸ್ಥಿತಿ ಹೊಂದಿದೆ ಆದರೆ ದೇಶದ ರೈತರು ಸ್ವಸಹಾಯ ಸಂಘಗಳ ಸಾಲ ಮನ್ನಾ ಏಕೆ ಮಾಡಲಾಗುವುದಿಲ್ಲ ಎಂದು ಪ್ರಶ್ನಿಸುವುದರ ಮೂಲಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ – ಯುವಕರಿಗೂ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಹೀಯಾಳಿಸುವುದು ಸಮಂಜಸವಲ್ಲ‌ವೆಂದು ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.

ಕನ್ನಮಂಗಲ ಗ್ರಾಮಪಂಚಾಯತಿ ಅಧ್ಯಕ್ಷ ಲಕ್ಷ್ಮೀಕಾಂತ್‌ ಮಾತನಾಡಿ ಡಿಜಿಟಲ್ ಗ್ರಂಥಾಲಯವು ಪಂಚಾಯತಿ ವ್ಯಾಪ್ತಿಯ ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ನಿರುದ್ಯೋಗ ಯುವಕ ಯುವತಿಯರಿಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಪ್ರತಿ ಯೊಬ್ಬರು ಗ್ರಂಥಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಂಡು ಶೈಕ್ಷಣಿಕವಾಗಿ ಮುಂದೆಬರಬೇಕು ಎಂದರು.
ಗ್ರಾ.ಪಂ.ಸದಸ್ಯ ವೆಂಕಟಸ್ವಾಮಿ ಅವರು ಮಾತನಾಡಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣ ಮಾಡಬೇಕೆನ್ನುವ ಎಲ್ಲಾ ಸದಸ್ಯರು ಕನಸು ನೆರವೇರಿದೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದ್ದರೆ, ಯುವಪೀಳಿಗೆ ಶೈಕ್ಷಣಿಕ ಜ್ಞಾನಾರ್ಜನೆ ಅನುಕೂಲವಾಗುವುದರ ಜೊತೆಗೆ ಪ್ರತಿಯೊಬ್ಬರು ಓದುವ ಹವ್ಯಾಸ ರೂಡಿಸಿಕೊಳ್ಳುತ್ತಾರೆ ಹಾಗೂ ಸ್ಪರ್ದಾತ್ಮಕ ಪರೀಕ್ಷೆ ಎದುರಿಸುವವರಿಗೆ ಅವಶ್ಯಕವಾದ ಪುಸ್ತಕಗಳು ದೊರೆತರೆ ಅವರಿಗೆ ಅನುಕೂಲವಾಗಲಿದೆ. ಗ್ರಂಥಾಲಯದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಇದೇ ವೇಳೆ ಕೆಪಿಸಿಸಿ ಸದಸ್ಯರು ವಿ. ಶಾಂತಕುಮಾರ್
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತ ಸಿಇಒ ಅನುರಾಧ, ಇಒ ಶ್ರೀನಾಥ್ ಗೌಡ ,ಪಂಚಾಯತ್ ಮಾಜಿ ಸದಸ್ಯರು ಕೆ.ಸಿ ಮಂಜುನಾಥ್, ಕನ್ನಮಂಗಲ ಗ್ರಾಪಂ ಮಾಜಿ ಅಧ್ಯಕ್ಷಹಾಲಿ ಸದಸ್ಯ ಕೆ.ಆರ್. ನಾಗೇಶ್, ಎಸ್ ಜಿ ಮಂಜುನಾಥ್, ವೆಂಕಟಸ್ವಾಮಿ, ಗೌರಮ್ಮಮೂರ್ತಿ, ಅಂಬರೀಶ್, ನರಸಿಂಹ ಮೂರ್ತಿ, ಸೋಮಶೇಖರ್, ರಾದಿಕಾತ್ಯಾಗರಾಜು, ಕೃಷ್ಣಯ್ಯ, ಪಿಡಿಒ ಆದರ್ಶಕುಮಾರ್ ಕಾಂಗ್ರೆಸ್ ಪಕ್ಷದ ಮುಖಂಡರು ಗಳಾದ ಚನ್ನಹಳ್ಳಿ ರಾಜಣ್ಣ, ಚಿನ್ನಪ್ಪ ಸೇರಿದಂತೆ ಜಿಲ್ಲಾಡಳಿತ, ಕಂದಾಯ ಮತ್ತು ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *