ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ಸ್ತ್ರೀ ಸಂಭ್ರಮ’ ಕಾರ್ಯಕ್ರಮ :

‘ವಿಶ್ವವಾಣಿ ಫೌಂಡೇಶನ್’ ನಿಂದ ವಿವಿಧ ಸೇವೆ, ಸವಲತ್ತುಗಳ ವಿತರಣೆ :

ಯಲಹಂಕ : ವಿಶ್ವ‌ ಮಹಿಳಾ ದಿನಾಚರಣೆ ಪ್ರಯುಕ್ತ ‘ವಿಶ್ವವಾಣಿ ಫೌಂಡೇಶನ್’ ಮತ್ತು ಯಲಹಂಕ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಸಹಯೋಗದಲ್ಲಿ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸ್ತ್ರೀ ಸಂಭ್ರಮ’ ಕಾರ್ಯಕ್ರಮವನ್ನು ಯಲಹಂಕ ಶಾಸಕರು, ‘ವಿಶ್ವವಾಣಿ ಫೌಂಡೇಶನ್’ ನ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಮಹಿಳೆಯರನ್ನು ಗೌರವಿಸುವುದು, ಪೂಜ್ಯ ಭಾವನೆಯಿಂದ ಕಾಣುವುದು ಭಾರತೀಯರಿಗೆ ಹೊಸದೇನಲ್ಲ. ಆದಿ‌ಕಾಲದಿಂದಲೂ ನಮ್ಮಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡುವ ಸದ್ಭಾವನೆ ಇದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ತೀರಾ ಇತ್ತೀಚಿನದು, ಆದರೆ ಮಹಿಳಾ ಗೌರವ ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಇದೆ. ನಾವು ಆಧ್ಯತೆಯಿಂದ ಪೂಜಿಸುವ ಪಾರ್ವತಿ, ಲಕ್ಷ್ಮಿ, ಸರಸ್ವತಿ ಇದಕ್ಕೆ ಸಾಕ್ಷಿಯಾಗಿದೆ. ನಾವು ನಮ್ಮ ದೇಶವನ್ನು ಮಾತೃಭೂಮಿ ಎಂದೇ ಸಂಭೋದಿಸುತ್ತೇವೆ. ಜಗತ್ತನಲ್ಲಿ ದೇಶವನ್ನು ತಾಯಿಯ ಹೆಸರಲ್ಲಿ ಕರೆಯುವ ಏಕೈಕ ದೇಶ ಭಾರತ. ನಮ್ಮ ದೇಶದ ನದಿಗಳಾದ ಗಂಗೆ, ಯಮುನೆ, ಸತಸ್ವತಿ, ತುಂಗೆ, ಕಾವೇರಿ ಎಲ್ಲವೂ ಸ್ತ್ರೀ ನಾಮದಲ್ಲೇ ಇವೆ ಎಂದರು.

ನಮ್ಮ ಮಹಿಳೆಯರಿಗೆ ಅಪಾರವಾದ ಶಕ್ತಿಯಿದೆ, ಆದರೆ ಅವರಿಗಿರುವ ಶಕ್ತಿಯ ಬಗ್ಗೆ ನಮ್ಮ ಮಹಿಳೆಯರಿಗೆ ಅರಿವಿರುವುದಿಲ್ಲ. ಎಂದಿಗೂ ಕತ್ತಿ ಹಿಡಿದು ಹೋರಾಡದ ಒಮಕೆ ಓಬವ್ವ ಕೇವಲ ಒಂದು ಒನಕೆಯಿಂದ ನೂರಾರು ಶತೃಗಳನ್ನು ಕೊಂದು ಪತಿಧರ್ಮ, ರಾಜಧರ್ಮ ಪಾಲಿಸಿದ ಉದಾಹರಣೆ ನಮ್ಮ ಇತಿಹಾಸದಲ್ಲಿದೆ. ತಮ್ಮ ರಾಜ್ಯವನ್ನು ಶತೃಗಳಿಂದ ಕಾಪಾಡಿಕೊಳ್ಳಲು ಕುದುರೆ ಏರಿ ಬ್ರಿಟಿಷರೊಂದಿಗೆ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ನಮ್ಮ ದೇಶದ ಹೆಮ್ಮೆಯ ಮಹಿಳಾ ಮಣಿಗಳು. ಆದರೆ ಇತ್ತೀಚೆಗೆ ನಮ್ಮ ಮಹಿಳೆಯರು ಕಷ್ಟಗಳನ್ನು ಎದುರಿಸಲಾದೆ, ದೃತಿಗೆಟ್ಟು ಮಕ್ಕಳನ್ನು ಕೊಂದು ತಾವೂ‌ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಗಳನ್ನು ನೋಡಿದಾಗ ನೋವುಂಟಾಗುತ್ತದೆ, ನಮ್ಮ ಮಹಿಳೆಯರು ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಜಯಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮ ಉದ್ದೇಶಿಸಿ ವಿಶ್ವವಾಣಿ ಫೌಂಡೇಶನ್ ನ ಕಾರ್ಯದರ್ಶಿ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ವಿಶ್ವವಾಣಿ ಫೌಂಡೇಶನ್’ ಮತ್ತು ಭಾರತೀಯ ಜನತಾ ಪಾರ್ಟಿ ಯಲಹಂಕ ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ ” ಅಂಗವಾಗಿ ‘ಸ್ತ್ರೀ – ಸಂಭ್ರಮ’ ಶೀರ್ಷಿಕೆ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಯಲಹಂಕ ಗ್ರಾಮೀಣ ಭಾಗದ ಮಹಿಳಾ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರಿಗೆ ಸನ್ಮಾನ, ಉಡುಗೊರೆಗಳ ವಿತರಣೆ, ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ, ಉಚಿತ ಔಷಧಿ ವಿತರಣೆ, ಉಚಿತ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್, ಅಗತ್ಯ ಇರುವವರಿಗೆ ಶಸ್ತ್ರ ಚಿಕಿತ್ಸೆ, ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ 250 ಜನರಿಗೆ ಉಚಿತ ಕ್ಯಾಟ್ರಾಕ್ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ , ಸಪ್ತಗಿರಿ ಆಸ್ಪತ್ರೆ ವತಿಯಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ಎಲ್ಲಾ ರೋಗಗಳ ಉಚಿತ ತಪಾಸಣೆ, ಚಿಕಿತ್ಸೆ, ಔಷಧಿಗಳ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಂದ 20ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ,‌ ಮಾಸಿಕ ಸಂತೆಯ ಮೂಲಕ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಂದ ತಯಾರಿಸಲಾದ ಆಹಾರ ಪದಾರ್ಥಗಳು ಮತ್ತು ವಿವಿಧ ಗೃಹೋಪಯೋಗಿ ಸಾಧನ, ಸಲಕರಣೆಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ವತಿಯಿಂದ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ವಿತರಣೆ ಮಾಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇಂಬು ನೀಡಲಾಗಿದೆ. ನಮ್ಮದೇ ಮಹಿಳೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವವಾಣಿ ಫೌಂಡೇಶನ್ ಮತ್ತು ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಮೂಲಕ ಮಹಿಳೆಯರ ಉನ್ನತಿಗಾಗಿ ಕಳೆದ ಹಲವು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳ ಮೂಲಕ ಶ್ರಮಿಸಲಾಗುತ್ತಿದೆ. ಉಚಿತ ಟೈಲರಿಂಗ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಉಚಿತ ಹೊಲಿಗೆ ಯಂತ್ರಗಳ ವಿತರಣೆ, ದುರ್ಬಲ ಆರ್ಥಿಕ ವರ್ಗದ ಮಹಿಳೆಯರ ಏಳಿಗೆಗಾಗಿ ಸಾಲ ಸೌಲಭ್ಯ, ಸಹಾಯಧನ ವಿತರಣೆ, ಕರಕುಶಲ ಉದ್ಯಮ, ಗುಡಿ ಕೈಗಾರಿಕೆಗಳಿಗೆ ನೆರವು ಹೀಗೆ ಹಲವು ಆಯಾಮಗಳಲ್ಲಿ ಶ್ರಮಿಸಲಾಗುತ್ತಿದ್ದು, ಮಹಿಳೆಯರು ಸ್ವಾವಲಂಬಿ ಬದಕು ಕಟ್ಟಿಕೊಳ್ಳಬೇಕು ಎಂಬುದು ವಿಶ್ವವಾಣಿ ಫೌಂಡೇಶನ್ ನ ಧ್ಯೇಯವಾಗಿದ್ದು, ನಮ್ಮ ಸೇವೆ ಎಂದೆಂದಿಗೂ ಮುಂದುವರಿ ಯಲಿದೆ ಎಂದರು.

ಸ್ತ್ರೀ ಸಂಭ್ರಮದ ಮಹತ್ವದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಂದ್ರ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಬಿಜೆಪಿ ಮುಖಂಡ ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ನಗರ ಮಂಡಲ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಶ್ರೀನಿವಾಸಯ್ಯ, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಮಹಿಳಾ ಮೋರ್ಚಾದ ಹೇಮಲತಾ ಚಿದಾನಂದ್, ಸರಸ್ವತಿ ಮಾಯಣ್ಣ ಸೇರಿದಂತೆ ಹಲವು ಗಣ್ಯರಿದ್ದರು.

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮ ಸಹಸ್ರಾರು ಮಹಿಳೆಯರ ಪಾಲ್ಗೊಳ್ಳುವಿಕೆಯ ಮೂಲಕ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *