ರೈತರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ನಬಾರ್ಡ್ ಸಹಕಾರ
ಮಯೂರ ಕಾಂಬಳೆ

ಹುಬ್ಬಳ್ಳಿ :-ನವಲಗುಂದ ಮತ್ತು ನಾವಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್.ಬಿ.ಐ) ಹಾಗೂ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆ ಇವುಗಳ ಸಹಯೋಗದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಬಾರ್ಡ್ ಯಶೋಗಾಥೆಗಳ ಕುರಿತು ಅಭಿವೃದ್ಧಿ ಮಾಧ್ಯಮ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮಯೂರ ಕಾಂಬಳೆ ಮಾತನಾಡಿ, ಧಾರವಾಡ ಜಿಲ್ಲೆಯ ನವಲಗುಂದ ಬ್ಲಾಕ್‌ನ ರೈತರು ನೇರ ಮಾರುಕಟ್ಟೆ ಮತ್ತು ಕಡಿಮೆ ವೆಚ್ಚದಲ್ಲಿ ಇನ್‌ಪುಟ್ ಸಂಗ್ರಹಣೆಗಾಗಿ ಸವಾಲುಗಳನ್ನು ಎದುರಿಸುತ್ತಿದ್ದರು. ಇದರಿಂದಾಗಿ ಈ ಪ್ರದೇಶದಲ್ಲಿ ಎಫ್‌ಪಿಒ ರಚನೆಯ ಅಗತ್ಯವಿತ್ತು. 2016 ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ಬ್ಲಾಕ್‌ನಲ್ಲಿ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆಯನ್ನು ನಬಾರ್ಡ್ ಮೂಲಕ ಭಾರತ ಸರ್ಕಾರದ ಉತ್ಪನ್ನ ನಿಧಿಯ ಅಡಿಯಲ್ಲಿ ರಚಿಸಲಾಗಿದೆ. ದೇಶಪಾಂಡೆ ಫೌಂಡೇಶನ್ ಜಾರಿಗೊಳಿಸಿದ ಎಫ್‌ಪಿಒಗೆ ನಬಾರ್ಡ್‌ನಿಂದ ರೂ.9.06 ಲಕ್ಷಗಳ ಒಟ್ಟು ಅನುದಾನ ಬೆಂಬಲವನ್ನು ಮಂಜೂರು ಮಾಡಲಾಗಿದೆ. ಇದು ನವಲಗುಂದ ಬ್ಲ್ಯಾಕ್‌ ನ 40 ಹಳ್ಳಿಗಳನ್ನು ಒಳಗೊಂಡ 1124 ಸದಸ್ಯರನ್ನು ಹೊಂದಿದೆ. ಹೆಸರು, ಮಕ್ಕೆಜೋಳ, ಕಡಲೆ, ಸೋಯಾಬೀನ್, ಮೆಣಸಿನಕಾಯಿ, ಈರುಳ್ಳಿ ಇತ್ಯಾದಿ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ವ್ಯವಹರಿಸುತ್ತದೆ. ಕಲ್ಮೇಶ್ವರವು ರಾಜ್ಯದ ಮೊದಲ ಪ್ರಮಾಣೀಕೃತ ಬೀಜಗಳನ್ನು ಉತ್ಪಾದಿಸುವ ರೈತ ಉತ್ಪಾದಕ ಸಂಸ್ಥೆಯಾಗಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಹೆಸರು ಬೆಳೆಯ ಫೌಂಡೇಶನ್ ಬೀಜಗಳನ್ನು ಒದಗಿಸಲಾಗುತ್ತಿದೆ.
ಇನ್ಪುಟ್ ಗಳ ಖರೀದಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾಂಸ್ಥಿಕ ಖರೀದಿದಾರರಿಗೆ ಮಾರ್ಕೆಟಿಂಗ್, ಬೀಜ ಉತ್ಪಾದನೆ, ಮಣ್ಣು ಪರೀಕ್ಷೆ ಮತ್ತು ಕೃಷಿ ಹೊಂಡಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತದೆ. ಈ ರೈತ ಉತ್ಪಾದಕ ಸಂಸ್ಥೆಯು ಸಂಸ್ಕರಣಾ ಘಟಕ ಮತ್ತು ಕಾರ್ಯನಿರತ ಬಂಡವಾಳವನ್ನು ಸ್ಥಾಪಿಸಲು ನಾಬ್ ಕಿಸಾನ್ ನಿಂದ 1.70 ಕೋಟಿ ರೂ. ಗಳ ಹಣಕಾಸು ಸೌಲಭ್ಯ ಪಡೆದುಕೊಂಡಿದೆ. ಸಂಸ್ಕರಣಾ ಘಟಕದಲ್ಲಿ ಬೇಳೆಕಾಳುಗಳ ಸಂಸ್ಕರಣೆ ಮತ್ತು ತೈಲ ಹೊರತೆಗೆಯುವ ಯಂತ್ರೋಪಕರಣಗಳಿವೆ. ರೈತ ಸದಸ್ಯರ ಉತ್ಪನ್ನಗಳನ್ನು ಮಾರಾಟ ಮಾಡಲು ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಸಮೃದ್ಧಿ ಪಲ್ಸಸ್, ಘೋದಾವತ್ ಗ್ರೂಪ್, ಎ.ಡಿ.ಎಂ, ಅನುಪಮಾ ಫುಡ್, ರಾಕೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇತ್ಯಾದಿಗಳೊಂದಿಗೆ ಸಾಂಸ್ಥಿಕ ಒಪ್ಪಂದವನ್ನು ಮಾಡಿಕೊಂಡಿದೆ. 2021-22 ರಲ್ಲಿ ವರದಿಯಾದ ಕಾರ್ಯಾಚರಣೆಗಳ ಆದಾಯವು ರೂ. 13.70 ಕೋಟಿಗಳಷ್ಟಿತ್ತು. 2022-23 ರಲ್ಲಿ ರೂ .20 ಕೋಟಿಯನ್ನು ದಾಟುವ ನಿರೀಕ್ಷೆಯಿದೆ. ರೈತರು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಇನ್ಪುಟ್ ಗಳನ್ನು ಪಡೆಯಲು ಸಮರ್ಥರಾಗಿದ್ದಾರೆ. ಸಾಂಸ್ಥಿಕ ಖರೀದಿದಾರರು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ರೈತ ಉತ್ಪಾದಕ ಸಂಸ್ಥೆ ನೇರ ಮಾರುಕಟ್ಟೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ ಎಂದರು.
ದೇಶಪಾಂಡೆ ಫೌಂಡೇಶನ್ ನ ಸಂದೀಪ್ ನಾಯ್ಕ ಮಾತನಾಡಿ, ಉತ್ತರ ಕರ್ನಾಟಕದ ಕೃಷಿಯು ಪ್ರಧಾನವಾಗಿ ಮಳೆಯಾಶ್ರಿತವಾಗಿದೆ. ಈ ಪ್ರದೇಶದಲ್ಲಿ ಕೃಷಿ ಹೊಂಡದ ನಿರ್ಮಾಣವು ಬೇಸಿಗೆಯಲ್ಲೂ ನೀರಿನ ಲಭ್ಯತೆಗೆ ಕಾರಣವಾಯಿತು. ಇದರಿಂದಾಗಿ ಕೃಷಿ ಉತ್ಪಾದಕತೆ ಸುಧಾರಿಸುತ್ತದೆ. ಜಂಟಿ ಹೊಣೆಗಾರಿಕೆ ಗುಂಪುಗಳ ಮೂಲಕ ಕೃಷಿ ಹೊಂಡಗಳಿಗೆ ಹಣಕಾಸು ಒದಗಿಸುವುದು ತ್ರಿಪಕ್ಷೀಯ ಯೋಜನೆಯಾಗಿದೆ. ಇದು ನಬಾರ್ಡ್‌ನಿಂದ ಕಲ್ಪಿಸಲ್ಪಟ್ಟಿದೆ ಮತ್ತು ದೇಶಪಾಂಡೆ ಫೌಂಡೇಶನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲುದಾರಿಕೆಯಲ್ಲಿ ಉತ್ತರ ಕರ್ನಾಟಕದ 4 ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯು ಎಸ್.ಬಿ.ಐ.ನೊಂದಿಗೆ 1000 ಜೆ.ಎಲ್. ಜಿ ಗಳ ಕ್ರೆಡಿಟ್ ಲಿಂಕ್ ನ್ನು ಒಳಗೊಂಡಿದೆ. ಈ ಜಿಲ್ಲೆಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಹಣಕಾಸು ಒದಗಿಸುವುದಕ್ಕಾಗಿ ಪ್ರತ್ಯೇಕವಾಗಿ, ನಬಾರ್ಡ್ ದೇಶಪಾಂಡೆ ಫೌಂಡೇಶನ್‌ಗೆ ಯೋಜನೆಯಡಿಯಲ್ಲಿ ಜೆಎಲ್‌ಜಿ ರಚನೆ ಮತ್ತು ಕ್ರೆಡಿಟ್ ಲಿಂಕ್ ಮಾಡಲು ರೂ.40 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ. 10010012 ಅಡಿಗಳು ಯೋಜನೆಯಡಿಯಲ್ಲಿ ಅಳವಡಿಸಿಕೊಂಡ ಪ್ರಮಾಣಿತ ಕೃಷಿ ಹೊಂಡದ ಗಾತ್ರವಾಗಿದೆ. ಪ್ರತಿ ಹೊಂಡವು ಸುಮಾರು 33.5 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದರಿಂದ ಸರಿಸುಮಾರು 5 ಎಕರೆ ಭೂಮಿಗೆ ನೀರಾವರಿ ಮಾಡಬಹುದು. ಜೆಎಲ್ ಜಿಯ ಪ್ರತಿಯೊಬ್ಬ ರೈತ ಸದಸ್ಯನು ತನ್ನ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಸಾಲವನ್ನು ಪಡೆಯುತ್ತಾನೆ. ಪ್ರತಿ ಹೊಂಡದ ಘಟಕದ ವೆಚ್ಚ ರೂ.80 ಸಾವಿರ ಆಗಿರುತ್ತದೆ. ಇದರಲ್ಲಿ ರೂ.60 ಸಾವಿರ ಸಾಲದ ಮೊತ್ತ ಮತ್ತು ರೂ.20 ಸಾವಿರ ರೈತರ ಪಾಲು ಆಗಿರುತ್ತದೆ. ಇಲ್ಲಿಯವರೆಗೆ 358 ಜೆಎಲ್ ಜಿಗಳನ್ನು ರಚಿಸಲಾಗಿದೆ. ಯೋಜನೆಯ ಅಡಿಯಲ್ಲಿ ಕ್ರೆಡಿಟ್ ಲಿಂಕ್ ಮಾಡಲಾಗಿದೆ. ಇದರ ಪರಿಣಾಮವಾಗಿ 2,475 ಕೃಷಿಹೊಂಡಗಳು ಸ್ಥಾಪಿತವಾಗಿವೆ. 2,475 ಕುಟುಂಬಗಳು ಮತ್ತು 9,900 ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಕೃಷಿ ಹೊಂಡದ ಕಾರಣದಿಂದ ಹೆಚ್ಚುವರಿ ಬೆಳೆ ಋತುವಿನ ಪರಿಣಾಮವಾಗಿ ರೈತರ ಆದಾಯದಲ್ಲಿ ಕನಿಷ್ಠ 2 ರಿಂದ 3 ಪಟ್ಟು ಹೆಚ್ಚಳವಾಗಲಿದೆ. ಈ ಪ್ರದೇಶದಲ್ಲಿ ಹಿಂದೆ ಬೆಳೆಯದ ತೋಟಗಾರಿಕೆ ಬೆಳೆಗಳು ಮತ್ತು ತರಕಾರಿ ಬೆಳೆಗಳನ್ನು ಈಗ ಬೆಳೆಯಲಾಗುತ್ತಿದೆ. ಈ ಯೋಜನೆಯಡಿ ಸಾಲ ಪಡೆದ ಶೇ. 25 ರಷ್ಟು ರೈತರು ಈಗಾಗಲೇ ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ್ದಾರೆ ಎಂದು ತಿಳಿಸಿದರು.
ಕಲ್ಮೇಶ್ವರ ರೈತ ಸಂಘದ ಉಮಾ ಮಣಕವಾಡ ಮಾತನಾಡಿ, 2021 ರಲ್ಲಿ ಕೃಷಿ ಹೊಂಡ ನಿರ್ಮಿಸಲು ಬ್ಯಾಂಕಿನಿಂದ 60 ಸಾವಿರ ಸಾಲ ಪಡೆದುಕೊಂಡೆ. ಎರಡು ವರ್ಷದಲ್ಲಿ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಿದೆ. ಈಗ 6 ಎಕರೆ 4 ಗುಂಟೆ ಜಮೀನಿನಲ್ಲಿ ಮೆಣಸಿನಕಾಯಿ, ಹೆಸರು, ಕಡಲೆಕಾಯಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಹೊಂಡದಿಂದ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.
ನಾಗಸ್ವಾಮೀಜಿ‌ ರೈತ ಸಂಘದ ಅಧ್ಯಕ್ಷರಾದ ಬಸನಗೌಡ ಮುದಿಗೌಡ್ರ ಮಾತನಾಡಿ, ಬ್ಯಾಂಕಿನಿಂದ ಸಾಲ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇವೆ. ಇದರಿಂದ ಬೆಳೆಗಳಿಗೆ ಕಾಲ ಕಾಲಕ್ಕೆ ನೀರು ಹರಿಸಲಾಗುತ್ತದೆ. ಅಲ್ಲದೇ ಇಳುವರಿಯಲ್ಲಿ ಯಾವುದೇ ಕುಂಠಿತವಾಗುವುದಿಲ್ಲ. ಸಾವಯವ ಕೃಷಿ ವಿಧಾನದಿಂದ ಹೆಚ್ಚಿನ ಲಾಭ ಪಡೆಯಬಹುದು. ಸರ್ಕಾರದ ಸಬ್ಸಿಡಿಗಳು ಅವಶ್ಯಕತೆಯಿರುವ ರೈತರಿಗೆ ಸಿಗಬೇಕು ಎಂದರು.
ಪ್ರವೀಣ ಶರೇವಾಡ ಮಾತನಾಡಿ, 4 ಎಕರೆಯಲ್ಲಿ ಭೀಮಾ ಬ್ಯಾಂಬು ಹಾಕಲಾಗಿದೆ. ತೋಟಗಾರಿಕೆ, ಮೆಣಸು, ಪಪ್ಪಾಯ, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರಿಗೆ ಉತ್ತಮ ಬಿತ್ತನೆ ಬೀಜ, ರಸಗೊಬ್ಬರ, ಕೃಷಿಹೊಂಡ, ಉತ್ತಮ ಮಳೆ ಹಾಗೂ ಯೋಗ್ಯ ಮಾರುಕಟ್ಟೆ ದೊರೆಯಬೇಕು. ನಬಾರ್ಡ್ ಸಹಕಾರದಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ರಜತ್ ಮಾತನಾಡಿ, 48 ತಿಂಗಳ ಅವಧಿಗೆ ಸಾಲವನ್ನು ನೀಡಲಾಗುತ್ತದೆ. ಪ್ರತಿ 6 ತಿಂಗಳಿಗೆ ತುಂಬುವ ಅವಕಾಶವಿದೆ. 358 ಗುಂಪುಗಳಿದ್ದು, 2,475 ಕೃಷಿಹೊಂಡಗಳ ನಿರ್ಮಾಣಕ್ಕೆ ಸಾಲ ಒದಗಿಸಲಾಗಿದೆ. ನರಗುಂದ, ನವಲಗುಂದ ಸೇರಿದಂತೆ ವಿವಿಧ ಭಾಗದ ರೈತರು ಸಾಲ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.
ನಾವಳ್ಳಿ ಗ್ರಾಮದ ರೈತ ವೀರಪ್ಪ ಪಲ್ಲೇದ ಮಾತನಾಡಿ, 3 ಎಕರೆಯಲ್ಲಿ ಹೆಸರು, ತೆಂಗು, ಕರಿಬೇವು, ನೇರಳೆ, ಅಲಸಂದಿ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿ ಹೊಂಡದಿಂದ ಬೆಳೆಗಳಿಗೆ ನೀರು‌ ಪೂರೈಸಲಾಗುತ್ತದೆ. ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರವನ್ನು ಬಳಕೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ಈ ವೇಳೆ ಕಲ್ಮೇಶ್ವರ ರೈತ‌ ಉತ್ಪಾದಕ ಸಂಸ್ಥೆಯ ಬೀಜ ಉತ್ಪಾದನಾ ಕೇಂದ್ರ, ಬೆಳೆ ಕಾಳು ಒಡೆಯುವ ಯಂತ್ರಗಳು, ಶೇಂಗಾ, ಕುಸುಬಿ ಎಣ್ಣೆ ತಯಾರಿಕಾ ಘಟಕ, ನಾವಳ್ಳಿ ಗ್ರಾಮದ ವೀರಪ್ಪ ಪಲ್ಲೇದ ಅವರ ಹೊಲಕ್ಕೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೃತ್ಯುಂಜಯ ಸಾಲಿಮಠ, ದೇಶಪಾಂಡೆ ಫೌಂಡೇಶನ್ ನ ಕೃಷಿ ವಿಭಾಗದ ಅಧಿಕಾರಿ ಯೂನುಸ್ ಖಾನ್, ರೌನತ್ ಗೋಸ್ ಸೇರಿದಂತೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

ಮಾಧ್ಯಮ ಪ್ರತಿನಿಧಿಗಳಿಗೆ ಅಭಿವೃದ್ಧಿ ಮಾಧ್ಯಮ‌ ಪ್ರವಾಸ.


ರೈತರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ನಬಾರ್ಡ್ ಸಹಕಾರ
ಮಯೂರ ಕಾಂಬಳೆ

ಹುಬ್ಬಳ್ಳಿ :-ನವಲಗುಂದ ಮತ್ತು ನಾವಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್.ಬಿ.ಐ) ಹಾಗೂ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆ ಇವುಗಳ ಸಹಯೋಗದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಬಾರ್ಡ್ ಯಶೋಗಾಥೆಗಳ ಕುರಿತು ಅಭಿವೃದ್ಧಿ ಮಾಧ್ಯಮ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮಯೂರ ಕಾಂಬಳೆ ಮಾತನಾಡಿ, ಧಾರವಾಡ ಜಿಲ್ಲೆಯ ನವಲಗುಂದ ಬ್ಲಾಕ್‌ನ ರೈತರು ನೇರ ಮಾರುಕಟ್ಟೆ ಮತ್ತು ಕಡಿಮೆ ವೆಚ್ಚದಲ್ಲಿ ಇನ್‌ಪುಟ್ ಸಂಗ್ರಹಣೆಗಾಗಿ ಸವಾಲುಗಳನ್ನು ಎದುರಿಸುತ್ತಿದ್ದರು. ಇದರಿಂದಾಗಿ ಈ ಪ್ರದೇಶದಲ್ಲಿ ಎಫ್‌ಪಿಒ ರಚನೆಯ ಅಗತ್ಯವಿತ್ತು. 2016 ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ಬ್ಲಾಕ್‌ನಲ್ಲಿ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆಯನ್ನು ನಬಾರ್ಡ್ ಮೂಲಕ ಭಾರತ ಸರ್ಕಾರದ ಉತ್ಪನ್ನ ನಿಧಿಯ ಅಡಿಯಲ್ಲಿ ರಚಿಸಲಾಗಿದೆ. ದೇಶಪಾಂಡೆ ಫೌಂಡೇಶನ್ ಜಾರಿಗೊಳಿಸಿದ ಎಫ್‌ಪಿಒಗೆ ನಬಾರ್ಡ್‌ನಿಂದ ರೂ.9.06 ಲಕ್ಷಗಳ ಒಟ್ಟು ಅನುದಾನ ಬೆಂಬಲವನ್ನು ಮಂಜೂರು ಮಾಡಲಾಗಿದೆ. ಇದು ನವಲಗುಂದ ಬ್ಲ್ಯಾಕ್‌ ನ 40 ಹಳ್ಳಿಗಳನ್ನು ಒಳಗೊಂಡ 1124 ಸದಸ್ಯರನ್ನು ಹೊಂದಿದೆ. ಹೆಸರು, ಮಕ್ಕೆಜೋಳ, ಕಡಲೆ, ಸೋಯಾಬೀನ್, ಮೆಣಸಿನಕಾಯಿ, ಈರುಳ್ಳಿ ಇತ್ಯಾದಿ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ವ್ಯವಹರಿಸುತ್ತದೆ. ಕಲ್ಮೇಶ್ವರವು ರಾಜ್ಯದ ಮೊದಲ ಪ್ರಮಾಣೀಕೃತ ಬೀಜಗಳನ್ನು ಉತ್ಪಾದಿಸುವ ರೈತ ಉತ್ಪಾದಕ ಸಂಸ್ಥೆಯಾಗಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಹೆಸರು ಬೆಳೆಯ ಫೌಂಡೇಶನ್ ಬೀಜಗಳನ್ನು ಒದಗಿಸಲಾಗುತ್ತಿದೆ.
ಇನ್ಪುಟ್ ಗಳ ಖರೀದಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾಂಸ್ಥಿಕ ಖರೀದಿದಾರರಿಗೆ ಮಾರ್ಕೆಟಿಂಗ್, ಬೀಜ ಉತ್ಪಾದನೆ, ಮಣ್ಣು ಪರೀಕ್ಷೆ ಮತ್ತು ಕೃಷಿ ಹೊಂಡಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತದೆ. ಈ ರೈತ ಉತ್ಪಾದಕ ಸಂಸ್ಥೆಯು ಸಂಸ್ಕರಣಾ ಘಟಕ ಮತ್ತು ಕಾರ್ಯನಿರತ ಬಂಡವಾಳವನ್ನು ಸ್ಥಾಪಿಸಲು ನಾಬ್ ಕಿಸಾನ್ ನಿಂದ 1.70 ಕೋಟಿ ರೂ. ಗಳ ಹಣಕಾಸು ಸೌಲಭ್ಯ ಪಡೆದುಕೊಂಡಿದೆ. ಸಂಸ್ಕರಣಾ ಘಟಕದಲ್ಲಿ ಬೇಳೆಕಾಳುಗಳ ಸಂಸ್ಕರಣೆ ಮತ್ತು ತೈಲ ಹೊರತೆಗೆಯುವ ಯಂತ್ರೋಪಕರಣಗಳಿವೆ. ರೈತ ಸದಸ್ಯರ ಉತ್ಪನ್ನಗಳನ್ನು ಮಾರಾಟ ಮಾಡಲು ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಸಮೃದ್ಧಿ ಪಲ್ಸಸ್, ಘೋದಾವತ್ ಗ್ರೂಪ್, ಎ.ಡಿ.ಎಂ, ಅನುಪಮಾ ಫುಡ್, ರಾಕೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇತ್ಯಾದಿಗಳೊಂದಿಗೆ ಸಾಂಸ್ಥಿಕ ಒಪ್ಪಂದವನ್ನು ಮಾಡಿಕೊಂಡಿದೆ. 2021-22 ರಲ್ಲಿ ವರದಿಯಾದ ಕಾರ್ಯಾಚರಣೆಗಳ ಆದಾಯವು ರೂ. 13.70 ಕೋಟಿಗಳಷ್ಟಿತ್ತು. 2022-23 ರಲ್ಲಿ ರೂ .20 ಕೋಟಿಯನ್ನು ದಾಟುವ ನಿರೀಕ್ಷೆಯಿದೆ. ರೈತರು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಇನ್ಪುಟ್ ಗಳನ್ನು ಪಡೆಯಲು ಸಮರ್ಥರಾಗಿದ್ದಾರೆ. ಸಾಂಸ್ಥಿಕ ಖರೀದಿದಾರರು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ರೈತ ಉತ್ಪಾದಕ ಸಂಸ್ಥೆ ನೇರ ಮಾರುಕಟ್ಟೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ ಎಂದರು.
ದೇಶಪಾಂಡೆ ಫೌಂಡೇಶನ್ ನ ಸಂದೀಪ್ ನಾಯ್ಕ ಮಾತನಾಡಿ, ಉತ್ತರ ಕರ್ನಾಟಕದ ಕೃಷಿಯು ಪ್ರಧಾನವಾಗಿ ಮಳೆಯಾಶ್ರಿತವಾಗಿದೆ. ಈ ಪ್ರದೇಶದಲ್ಲಿ ಕೃಷಿ ಹೊಂಡದ ನಿರ್ಮಾಣವು ಬೇಸಿಗೆಯಲ್ಲೂ ನೀರಿನ ಲಭ್ಯತೆಗೆ ಕಾರಣವಾಯಿತು. ಇದರಿಂದಾಗಿ ಕೃಷಿ ಉತ್ಪಾದಕತೆ ಸುಧಾರಿಸುತ್ತದೆ. ಜಂಟಿ ಹೊಣೆಗಾರಿಕೆ ಗುಂಪುಗಳ ಮೂಲಕ ಕೃಷಿ ಹೊಂಡಗಳಿಗೆ ಹಣಕಾಸು ಒದಗಿಸುವುದು ತ್ರಿಪಕ್ಷೀಯ ಯೋಜನೆಯಾಗಿದೆ. ಇದು ನಬಾರ್ಡ್‌ನಿಂದ ಕಲ್ಪಿಸಲ್ಪಟ್ಟಿದೆ ಮತ್ತು ದೇಶಪಾಂಡೆ ಫೌಂಡೇಶನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲುದಾರಿಕೆಯಲ್ಲಿ ಉತ್ತರ ಕರ್ನಾಟಕದ 4 ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯು ಎಸ್.ಬಿ.ಐ.ನೊಂದಿಗೆ 1000 ಜೆ.ಎಲ್. ಜಿ ಗಳ ಕ್ರೆಡಿಟ್ ಲಿಂಕ್ ನ್ನು ಒಳಗೊಂಡಿದೆ. ಈ ಜಿಲ್ಲೆಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಹಣಕಾಸು ಒದಗಿಸುವುದಕ್ಕಾಗಿ ಪ್ರತ್ಯೇಕವಾಗಿ, ನಬಾರ್ಡ್ ದೇಶಪಾಂಡೆ ಫೌಂಡೇಶನ್‌ಗೆ ಯೋಜನೆಯಡಿಯಲ್ಲಿ ಜೆಎಲ್‌ಜಿ ರಚನೆ ಮತ್ತು ಕ್ರೆಡಿಟ್ ಲಿಂಕ್ ಮಾಡಲು ರೂ.40 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ. 10010012 ಅಡಿಗಳು ಯೋಜನೆಯಡಿಯಲ್ಲಿ ಅಳವಡಿಸಿಕೊಂಡ ಪ್ರಮಾಣಿತ ಕೃಷಿ ಹೊಂಡದ ಗಾತ್ರವಾಗಿದೆ. ಪ್ರತಿ ಹೊಂಡವು ಸುಮಾರು 33.5 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದರಿಂದ ಸರಿಸುಮಾರು 5 ಎಕರೆ ಭೂಮಿಗೆ ನೀರಾವರಿ ಮಾಡಬಹುದು. ಜೆಎಲ್ ಜಿಯ ಪ್ರತಿಯೊಬ್ಬ ರೈತ ಸದಸ್ಯನು ತನ್ನ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಸಾಲವನ್ನು ಪಡೆಯುತ್ತಾನೆ. ಪ್ರತಿ ಹೊಂಡದ ಘಟಕದ ವೆಚ್ಚ ರೂ.80 ಸಾವಿರ ಆಗಿರುತ್ತದೆ. ಇದರಲ್ಲಿ ರೂ.60 ಸಾವಿರ ಸಾಲದ ಮೊತ್ತ ಮತ್ತು ರೂ.20 ಸಾವಿರ ರೈತರ ಪಾಲು ಆಗಿರುತ್ತದೆ. ಇಲ್ಲಿಯವರೆಗೆ 358 ಜೆಎಲ್ ಜಿಗಳನ್ನು ರಚಿಸಲಾಗಿದೆ. ಯೋಜನೆಯ ಅಡಿಯಲ್ಲಿ ಕ್ರೆಡಿಟ್ ಲಿಂಕ್ ಮಾಡಲಾಗಿದೆ. ಇದರ ಪರಿಣಾಮವಾಗಿ 2,475 ಕೃಷಿಹೊಂಡಗಳು ಸ್ಥಾಪಿತವಾಗಿವೆ. 2,475 ಕುಟುಂಬಗಳು ಮತ್ತು 9,900 ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಕೃಷಿ ಹೊಂಡದ ಕಾರಣದಿಂದ ಹೆಚ್ಚುವರಿ ಬೆಳೆ ಋತುವಿನ ಪರಿಣಾಮವಾಗಿ ರೈತರ ಆದಾಯದಲ್ಲಿ ಕನಿಷ್ಠ 2 ರಿಂದ 3 ಪಟ್ಟು ಹೆಚ್ಚಳವಾಗಲಿದೆ. ಈ ಪ್ರದೇಶದಲ್ಲಿ ಹಿಂದೆ ಬೆಳೆಯದ ತೋಟಗಾರಿಕೆ ಬೆಳೆಗಳು ಮತ್ತು ತರಕಾರಿ ಬೆಳೆಗಳನ್ನು ಈಗ ಬೆಳೆಯಲಾಗುತ್ತಿದೆ. ಈ ಯೋಜನೆಯಡಿ ಸಾಲ ಪಡೆದ ಶೇ. 25 ರಷ್ಟು ರೈತರು ಈಗಾಗಲೇ ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ್ದಾರೆ ಎಂದು ತಿಳಿಸಿದರು.
ಕಲ್ಮೇಶ್ವರ ರೈತ ಸಂಘದ ಉಮಾ ಮಣಕವಾಡ ಮಾತನಾಡಿ, 2021 ರಲ್ಲಿ ಕೃಷಿ ಹೊಂಡ ನಿರ್ಮಿಸಲು ಬ್ಯಾಂಕಿನಿಂದ 60 ಸಾವಿರ ಸಾಲ ಪಡೆದುಕೊಂಡೆ. ಎರಡು ವರ್ಷದಲ್ಲಿ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಿದೆ. ಈಗ 6 ಎಕರೆ 4 ಗುಂಟೆ ಜಮೀನಿನಲ್ಲಿ ಮೆಣಸಿನಕಾಯಿ, ಹೆಸರು, ಕಡಲೆಕಾಯಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಹೊಂಡದಿಂದ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.
ನಾಗಸ್ವಾಮೀಜಿ‌ ರೈತ ಸಂಘದ ಅಧ್ಯಕ್ಷರಾದ ಬಸನಗೌಡ ಮುದಿಗೌಡ್ರ ಮಾತನಾಡಿ, ಬ್ಯಾಂಕಿನಿಂದ ಸಾಲ ಪಡೆದು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇವೆ. ಇದರಿಂದ ಬೆಳೆಗಳಿಗೆ ಕಾಲ ಕಾಲಕ್ಕೆ ನೀರು ಹರಿಸಲಾಗುತ್ತದೆ. ಅಲ್ಲದೇ ಇಳುವರಿಯಲ್ಲಿ ಯಾವುದೇ ಕುಂಠಿತವಾಗುವುದಿಲ್ಲ. ಸಾವಯವ ಕೃಷಿ ವಿಧಾನದಿಂದ ಹೆಚ್ಚಿನ ಲಾಭ ಪಡೆಯಬಹುದು. ಸರ್ಕಾರದ ಸಬ್ಸಿಡಿಗಳು ಅವಶ್ಯಕತೆಯಿರುವ ರೈತರಿಗೆ ಸಿಗಬೇಕು ಎಂದರು.
ಪ್ರವೀಣ ಶರೇವಾಡ ಮಾತನಾಡಿ, 4 ಎಕರೆಯಲ್ಲಿ ಭೀಮಾ ಬ್ಯಾಂಬು ಹಾಕಲಾಗಿದೆ. ತೋಟಗಾರಿಕೆ, ಮೆಣಸು, ಪಪ್ಪಾಯ, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರಿಗೆ ಉತ್ತಮ ಬಿತ್ತನೆ ಬೀಜ, ರಸಗೊಬ್ಬರ, ಕೃಷಿಹೊಂಡ, ಉತ್ತಮ ಮಳೆ ಹಾಗೂ ಯೋಗ್ಯ ಮಾರುಕಟ್ಟೆ ದೊರೆಯಬೇಕು. ನಬಾರ್ಡ್ ಸಹಕಾರದಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ರಜತ್ ಮಾತನಾಡಿ, 48 ತಿಂಗಳ ಅವಧಿಗೆ ಸಾಲವನ್ನು ನೀಡಲಾಗುತ್ತದೆ. ಪ್ರತಿ 6 ತಿಂಗಳಿಗೆ ತುಂಬುವ ಅವಕಾಶವಿದೆ. 358 ಗುಂಪುಗಳಿದ್ದು, 2,475 ಕೃಷಿಹೊಂಡಗಳ ನಿರ್ಮಾಣಕ್ಕೆ ಸಾಲ ಒದಗಿಸಲಾಗಿದೆ. ನರಗುಂದ, ನವಲಗುಂದ ಸೇರಿದಂತೆ ವಿವಿಧ ಭಾಗದ ರೈತರು ಸಾಲ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.
ನಾವಳ್ಳಿ ಗ್ರಾಮದ ರೈತ ವೀರಪ್ಪ ಪಲ್ಲೇದ ಮಾತನಾಡಿ, 3 ಎಕರೆಯಲ್ಲಿ ಹೆಸರು, ತೆಂಗು, ಕರಿಬೇವು, ನೇರಳೆ, ಅಲಸಂದಿ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿ ಹೊಂಡದಿಂದ ಬೆಳೆಗಳಿಗೆ ನೀರು‌ ಪೂರೈಸಲಾಗುತ್ತದೆ. ಮಣ್ಣಿನ ಫಲವತ್ತತೆಗೆ ಸಾವಯವ ಗೊಬ್ಬರವನ್ನು ಬಳಕೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ಈ ವೇಳೆ ಕಲ್ಮೇಶ್ವರ ರೈತ‌ ಉತ್ಪಾದಕ ಸಂಸ್ಥೆಯ ಬೀಜ ಉತ್ಪಾದನಾ ಕೇಂದ್ರ, ಬೆಳೆ ಕಾಳು ಒಡೆಯುವ ಯಂತ್ರಗಳು, ಶೇಂಗಾ, ಕುಸುಬಿ ಎಣ್ಣೆ ತಯಾರಿಕಾ ಘಟಕ, ನಾವಳ್ಳಿ ಗ್ರಾಮದ ವೀರಪ್ಪ ಪಲ್ಲೇದ ಅವರ ಹೊಲಕ್ಕೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಲ್ಮೇಶ್ವರ ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೃತ್ಯುಂಜಯ ಸಾಲಿಮಠ, ದೇಶಪಾಂಡೆ ಫೌಂಡೇಶನ್ ನ ಕೃಷಿ ವಿಭಾಗದ ಅಧಿಕಾರಿ ಯೂನುಸ್ ಖಾನ್, ರೌನತ್ ಗೋಸ್ ಸೇರಿದಂತೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *