ಚಿಕ್ಕಬಳ್ಳಾಪುರ : ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಅಸ್ಸಾಂನ ಬಿಜೆಪಿಯ ಕಾರ್ಯಕರ್ತರು ಅಡ್ಡಗಟ್ಟಿ, ಹಲ್ಲೆ ನಡೆಸಲು ಮುಂದಾಗಿರುವುದರನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್‌ವೃತ್ತದಲ್ಲಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ವೀರಪ್ಪಮೊಯ್ಲಿ, ಹಿಂದೆ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾದ ಬೆನ್ನಲ್ಲೇ ಪ್ರಸ್ತುತ ಬಡಕಾರ್ಮಿಕ, ರೈತರಿಗೆ ನ್ಯಾಯ ಒದಗಿಸುವ ರಾಹುಲ್‌ಗಾಂಧಿ ಅವರು ಮಣಿಪುರದಿಂದ ಮುಂಬೈವರೆಗೆ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ತಡೆಯಲು ಬಿಜೆಪಿ ಕೆಲಗೂಂಡಾಗಳನ್ನು ಬಿಟ್ಟು ಯಾತ್ರೆಯನ್ನು ತಡೆಯಲು ಮುಂದಾಗಿದ್ದು, ದೇಶದಲ್ಲಿ ಬಿಜೆಪಿ ದೌರ್ಜನ್ಯವು ಮಿತಿ ಮೀರಿದೆ ಎಂದು ಕಿಡಿಕಾರಿದರು.
ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಯಾತ್ರೆಯಲ್ಲಿ ದೇಶದಲ್ಲಿ ಅಭದ್ರತೆಗೆ ಅನುವು ಮಾಡಿಕೊಡಲಿಲ್ಲ. ಆದರೆ ಪ್ರಸ್ತುತ ಕೈಗೊಂಡಿರುವ ಶಾಂತಿಯುತ ಯಾತ್ರೆಗೆ ಹೆದರಿ ಬಿಜೆಪಿ ಸರ್ಕಾರವಿರುವ ಅಸ್ಸಾಂನಲ್ಲಿ ತಡೆ ಹಾಕಿರುವುದು ಖಂಡನೀಯ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯು ಸೋಲನ್ನು ಅನುಭವಿಸುವ ಭೀತಿ, ಹತಾಶೆಯಿಂದ ದೌರ್ಜನ್ಯ ನಡೆಸಲು ಮುಂದಾಗಿದೆ ಎಂದು ಟೀಕಿಸಿದರು.
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಾಜಿ ಆಗಲಿದ್ದಾರೆ. ಜನ ಮೋದಿ ವಿರುದ್ಧ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ಹಿಂದೂ ಧರ್ಮದ ತುಷ್ಟೀಕರಣ, ನಿರುದ್ಯೋಗ, ಜಿಡಿಪಿ ಕುಸಿತ, ದೌರ್ಜನ್ಯ ಇತ್ಯಾದಿ ಅನ್ಯಾಯಗಳಿಂದ ಜನಸಮಾನ್ಯರು ಮುಂದಿನ ಚುನಾವಣೆಯಲ್ಲಿ ಮೋದಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಡೌಟ್ ಅಯೋದ್ಯೆಯಲ್ಲಿರಾಮಲಲ್ಲಾನ ಪ್ರತಿಷ್ಠಾಪನಾ ಕಾರ್ಯಕ್ರಮ ದ ಅಂಗವಾಗಿ ಮೋದಿ ಹನ್ನೊಂದು ದಿನಗಳ ಕಠಿಣ ಉಪವಾಸ ಮಾಡಿದ್ದರು. ಬರೀ ಎಳೆನೀರು ಮಾತ್ರ ಕುಡಿದು ಭಕ್ತಿಯಿಂದ ಪೋಜೆ ನೆರವೇರಿಸಿದರು ಎಂಬುದು ಬರೀ ಸುಳ್ಳು ವೈದ್ಯರ ಅಭಿಪ್ರಾಯದ ಪ್ರಕಾರ…

ಶ್ರೀರಾಮ : ಕುಶಲ ಸಂಘಟನೆಯ ಆದರ್ಶ !

ಈ ಭೂಮಿಯಲ್ಲಿ ಪ್ರಭು ಶ್ರೀರಾಮನಂತೆ ಯತಾರ್ಥ ಆದರ್ಶ ಎಂದರೆ ಸ್ವತಃ ಅವರೊಬ್ಬರೇ ! ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಸ್ನೇಹಿತ, ಆದರ್ಶ ರಾಜ ಮುಂತಾದ ಅನೇಕ ಆದರ್ಶಗಳನ್ನು ನಮ್ಮ ಮುಂದಿಟ್ಟಿದ್ದಾರೆ; ಆದರೆ ಅದರೊಂದಿಗೆ ಶ್ರೀ ರಾಮನ ಕುಶಲ ಸಂಘಟನಾ…

ಸನಾತನ ಸಂಸ್ಥೆಯ ಪ್ರಸಿದ್ಧಿಪತ್ರ

ದಿನಾಂಕ : ೨೨.೦೧.೨೦೨೪ ಶ್ರೀರಾಮಮಂದಿರದ ಸಮಾರಂಭದಲ್ಲಿ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ವಂದನಿಯ ಉಪಸ್ಥಿತಿ ! ರಾಮಮಂದಿರದಲ್ಲಿ ಮತ್ತೊಮ್ಮೆ ರಾಮಲಲ್ಲ ಪ್ರತಿಷ್ಠಾಪನೆ ಆಗುವುದು ಎಂದರೆ ರಾಮರಾಜ್ಯದ ನಾಂದಿಯೇ ! – ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ , ಸನಾತನ ಸಂಸ್ಥೆ…

ಕ್ಲಿಯರ್‌ಟ್ರಿಪ್ ಮತ್ತು ಫ್ಲಿಪ್‌ಕಾರ್ಟ್ ಟ್ರಾವೆಲ್ ನಿಂದ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ವಿನೂತನ ಹೆಜ್ಜೆ; ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ‘ದರ್ಶನ್ ಡೆಸ್ಟಿನೇಷನ್ಸ್’ ಆರಂಭ

ಈ ರಾಷ್ಟ್ರವ್ಯಾಪಿ ಆಚರಣೆಯ ಗೌರವಾರ್ಥವಾಗಿ, ಕ್ಲಿಯರ್‌ಟ್ರಿಪ್ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ 1,008 ಉಚಿತ ವಿಮಾನ ಟಿಕೆಟ್‌ಗಳನ್ನು ನೀಡುತ್ತಿದೆ. ಈ ಕೊಡುಗೆಯು ಫ್ಲಿಪ್‌ಕಾರ್ಟ್ ಟ್ರಾವೆಲ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಿರುತ್ತದೆ. ರಾಷ್ಟ್ರ, 23 ಜನವರಿ 2024: ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಿನಲ್ಲಿ, ಫ್ಲಿಪ್‌ಕಾರ್ಟ್…

ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸಂಸದರ ಕಛೇರಿ ಮುಂದೆ ಬೃಹತ್ ಧರಣಿ

ಕೋಲಾರ : ಕೇಂದ್ರ ಸರಕಾರವು ಮುಂಬರುವ ಫೆಬ್ರವರಿ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಐಸಿಡಿಎಸ್ ಯೋಜನೆಯ ಅನುದಾನ ಹೆಚ್ಚಳ, ಕನಿಷ್ಠ ವೇತನ ಜಾರಿ ಸೇರಿದಂತೆ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ನೀತಿಗಳಿಗಾಗಿ ಅಗ್ರಹಿಸಿ, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂದು…

ಗುಣಶೀಲದಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಉಚಿತ ಪರೀಕ್ಷಾ ಶಿಬಿರ*

ಬೆಂಗಳೂರು, ಜನವರಿ 24, 2024: ನವೆಂಬರ್ 2023ರಲ್ಲಿ ಯಶಸ್ವಿಯಾಗಿ ಶಿಬಿರ ಪೂರೈಸಿದ ನಂತರ ಅಪಾರ ಬೇಡಿಕೆಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಸಂತೋಷದ ಕುಟುಂಬಕ್ಕೆ ಈ ವರ್ಷ ಮತ್ತೊಂದು ಶಿಬಿರವನ್ನು ಆಯೋಜಿಸಲಾಗಿದೆ. 47 ವರ್ಷಗಳ ಅನುಭವ ಹೊಂದಿರುವ ಗುಣಶೀಲ ಮಕ್ಕಳ ಜನನದಲ್ಲಿ ವಿಸ್ಮಯಗಳನ್ನು…

ಎಂ.ಎಸ್.ಡಿ.ಇ. ವೃತ್ತಿಶಿಕ್ಷಣದಲ್ಲಿ ಮೆಕಾಂಗ್-ಗಂಗಾ ಸಹಕಾರದ ಅಡಿಯಲ್ಲಿ ತರಬೇತುದಾರರ ಸಾಮರ್ಥ್ಯಗಳ ವೃದ್ಧಿ

ಬೆಂಗಳೂರು, ಜನವರಿ 23, 2024: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಅಡಿಯಲ್ಲಿ ಡೈರೆಕ್ಟೊರೇಟ್ ಜನರಲ್ ಆಫ್ ಟ್ರೈನಿಂಗ್ (ಡಿ.ಜಿ.ಟಿ.) ಜನವರಿ 22, 2024ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ನಲ್ಲಿ ಮೆಕಾಟ್ರಾನಿಕ್ ಸಿಸ್ಟಮ್ಸ್ ಮೇಲೆ 2…

ಸಿಲಿಂಡರ್ ಸ್ಫೋಟ : ಮನೆಯ ಮೇಲ್ಛಾವಣಿಯ ಶೀಟ್ ಗೋಡೆ ಬಿರುಕು :

ಬ್ಯಾಟರಾಯನಪುರ : ಸಿಲಿಂಡರ್ ಸ್ಫೋಟದಿಂದಾಗಿ ಮನೆಯ ಮೇಲ್ಛಾವಣಿಯ ಶೀಟ್, ಗೋಡೆ ಬಿರುಕು ಬಿಟ್ಡಿರುವುದರ ಜತೆಗೆ ಮನೆಯಲ್ಲಿದ್ದ ಫ್ರಿಜ್, ಟಿವಿ, ಅಡಿಗೆ ಸಾಮಾನುಗಳು ಸುಟ್ಟು ಹೋಗಿರುವ ಘಟನೆ ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಬಡಾವಣೆಯ ಬಂಡೆ ಸಮೀಪದ ಕಲೋನಿಯಲ್ಲಿ ಸಂಭವಿಸಿದೆ. ಕೋಗಿಲು ಬಡಾವಣೆಯ ಎಸ್…