Month: September 2023

ಶಶಸ್ತ್ರ ಕಾಯ್ದೆ ಅಡಿಯಲ್ಲಿ ಆರೋಪಿಗಳು ಮತ್ತು ನಾಡ ಬಂದೂಕು ವಶ: ಕೆಜಿಎಫ್: 24.09. 2023 ರಂದು ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಸರ ಹದ್ದಿನಲ್ಲಿ ಬಣಗೆರೆ ಗೊಲ್ಲಹಳ್ಳಿ ಗ್ರಾಮದ ಕೆರೆ ಕಟ್ಟೆ ಮೇಲೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಆರೋಪಿಗಳಾದ ಮುನಿಸ್ವಾಮಿ, ಕೆಜಿಎಫ್ ಮತ್ತು ರಾಹುಲ್ ಕುಪ್ಪಂ ತಾಲೂಕು, ಆಂಧ್ರಪ್ರದೇಶ ದವರನ್ನ ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀ ಮಂಜುನಾಥ .ಬಿ ಎ ಎಸ್ ಐ .ವಿ ರಮೇಶ್ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್.ಸುನಿಲ್ ಕುಮಾರ್. ಪರಶುರಾಮ. ಕೌಳಗಿ. ರವಿಕುಮಾರ್ ರವರು ವಶಕ್ಕೆ ಪಡೆದು, ವಿಚಾರಣೆ ಮಾಡಿ ಅವರು ಬೇಟೆ ಆಡಲು ಅವರೊಂದಿಗೆ ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ನಾಡ ಬಂದೂಕು ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಮತ್ತು ಸಿಬ್ಬಂದಿಯವರ ಉತ್ತಮ ಕಾರ್ಯವನ್ನು ಪ್ರಶಂಸಿಸಲಾಗಿದೆ.

ಸಾಲ ವಸೂಲಾತಿಯಲ್ಲಿ ಪಿಎಲ್ಡಿ ಬ್ಯಾಂಕ್ ಅವಿಭಜಿತ ಜಿಲ್ಲೆಗೆ ಪ್ರಥಮ ಸ್ಥಾನ ವಿಟ್ಟಪನಹಳ್ಳಿ ವೆಂಕಟೇಶ್ ಗೆ ಸನ್ಮಾನ,

ಕೋಲಾರ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ಶ್ರಮ ವಹಿಸಿದ ನಿಕಟಪೂರ್ವ ಅಧ್ಯಕ್ಷ ವಿಟ್ಟಪನಹಳ್ಳಿ ಡೇರಿ ವೆಂಕಟೇಶ್ ಅವರನ್ನು ಬ್ಯಾಂಕ್ ಆವರಣದಲ್ಲಿ ಮಂಗಳವಾರ…

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2023 – 24ನೇ ಸಾಲಿನ ಕಾರ್ಯಕ್ರಮ ಹೊಸಕೋಟೆ : ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ನಮ್ಮ ದೇಶದ ಕೀರ್ತಿ ಉತ್ತಂಗಕ್ಕೆ ಹೋಗುವುದಕ್ಕೆ ಇಂಥ ಕಾರ್ಯಕ್ರಮಗಳು ಕಾರಣವಾಗುತ್ತವೆ ಎಂದು ತಹಶಿಲ್ದಾರ್ ವಿಜಯ್ ಕುಮಾರ್ ರವರು ಹೇಳಿದರು. ನಗರದ ಜೆಕೆಬಿಎಂಎಸ್ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2023 - 24ನೇ ಸಾಲಿನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು. ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಯಲ್ಲೂ ಸಹ ಅವರಿಗಿಂತ ಏನು ಕಮ್ಮಿಇಲ್ಲ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಪ್ರತಿಭಾ ಕಾರಂಜಿಯನ್ನು ಕೆಳಮಟ್ಟದಿಂದ 22 ಕ್ಲಸ್ಟರ್ ಕಾರ್ಯಕ್ರಮ ನಡೆಸಿ ಅತ್ಯುತ್ತಮರನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳು ಅವರ ಪ್ರತಿಭೆ ವರಹಾಕಲು ಈ ವೇದಿಕೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ ಬಹಳ ಅದ್ಭುತವಾಗಿದೆ ಶಾಲೆಯಲ್ಲಿ ವಿದ್ಯೆ ಒಂದೇ ಸಾಲದು ವಿವಿಧ ಹಂತಗಳಲ್ಲಿ ಮಕ್ಕಳು ಅವರ ಪ್ರತಿಭೆಯನ್ನು ಹೊರಗೆ ತರುವಂತಹ ಕಾರ್ಯಕ್ರಮವೇ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ, ವಿದ್ಯಾರ್ಥಿಗಳಲ್ಲಿ ಹಲವಾರು ಗುಣಗಳು ಇರುತ್ತವೆ, ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ವೈಶಿಷ್ಟ್ಯ ಹೊಂದಿರುವಂತಹ ಮಕ್ಕಳು ಇರುತ್ತಾರೆ ,ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಎಲ್ಲದರಲ್ಲೂ ಮುಂಚೂಣಿಯಲ್ಲಿ ಇರಬೇಕಾದರೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅಭಿವೃದ್ಧಿಪಥಕ್ಕೆ ತೆಗೆದುಕೊಂಡು ಹೋದಾಗ ನಮ್ಮ ದೇಶದ ಕೀರ್ತಿ ಉತ್ತಂಗಕ್ಕೆ ಹೋಗುವುದಕ್ಕೆ ಇಂಥ ಕಾರ್ಯಕ್ರಮಗಳು ಕಾರಣ ಆಗುತ್ತವೆ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ರವರು ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಡಿ.ಎಸ್.ರಾಜಕುಮಾರ್ ರವರು ಮಾತನಾಡಿದರು. ಇದೇ ಸಂದರ್ಭದಲ್ಲಿ 22 ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಘದ ಪದಾಧಿಕಾರಿಗಳು ನೋಡಲ್ ಅಧಿಕಾರಿಗಳು ವೇದಿಕೆಯಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ರವಿಕುಮಾರ್ ಇಸಿಓ, ಭವ್ಯ ಇ ಸಿ ಓ, ಯೋಗೇಶ್ ಕುಮಾರ್ ಬಿ ಆರ್ ಪಿ, ಹೇಮಲತಾ ಬಿ ಆರ್ ಪಿ ,ಮುನಿರಾಜು ಬಿ ಐ ಇ ಆರ್ ಟಿ, ನಿರ್ಮಲ ಬಿ ಐ ಇ ಆರ್ ಟಿ, ಪ್ರೇಮಕುಮಾರಿ ಬಿ ಐ ಇ ಆರ್ ಟಿ, ತ್ಯಾಗರಾಜ್ ಸಿ ಆರ್ ಪಿ, ನಟರಾಜು ಸಿ ಆರ್ ಪಿ, ಡಿ ಎಸ್ ಲೋಕೇಶ್ ಪಿ ಎಚ್ ಎಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಲ್ಲ ಭಕ್ಷ್,ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಸಂಘದ ಪದಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಪಾಲ್ಗೊಂಡಿದ್ದರು.

ಅರೆಕಾಲಿಕ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಒಂದು ವರ್ಷದ ವೇತನ ನೀಡಲು ಅಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ ಕೂಡಲೇ ಸರ್ಕಾರ ಅರೆಕಾಲಿಕ ಉಪನ್ಯಾಸಕರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯ ಚಿಂತಾಮಣಿ: ರಾಜ್ಯ ಸರ್ಕಾರದ 105 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಲವಾರು ವರ್ಷಗಳಿಂದ ಸುಮಾರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ…

ಕರ್ನಾಟಕದಲ್ಲಿ ಪ್ರಾರಂಭಿಸಲಾದ ಫ್ರೀ ಮ್ಯಾಕ್ಸ್ ಇಂಜಿನ್ ಆಯಿಲ್ ಶಾಖೆಗೆ ಸಚಿವ ಕೆಎಚ್ ಮುನಿಯಪ್ಪ ಭೇಟಿ.

ದೇವನಹಳ್ಳಿ: ಇಂದಿನ ವ್ಯಾಪಾರ ವಹಿವಾಟುಗಳಲ್ಲಿ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಪೂರೈಕೆ ಮಾಡುವ ಅನಿವಾರ್ಯತೆಯ ನಡುವೆ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಹೊಸತನದ ಮೂಲಕ ಅವರುಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಯಾವುದೇ ವ್ಯವಹಾರ…

ಸಂವಿಧಾನದ ಮುಂದಿನ ಸಾವಲುಗಳು ಪದಾಧಿಕಾರಿಗಳ ಪದಗ್ರಹಣ

ಬಳ್ಳಾರಿ ಸೆ.26ಸ್ಥಳೀಯ ಬಿ.ಡಿ.ಡಿ.ಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ದಲಿತ ಸೇನೆ ಘರ್ಜನೆಯಿಂದ ಭಾರತ ಸಂವಿಧಾನದ ಮುಂದಿನ ಸಾವಲುಗಳು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬೆಂಗಳೂರಿನ ದಲಿತ ಹೋರಾಟಗಾರ ಹಾಗೂ ಚಿಂತಕರಾದ ಬಿ.ಅರ್. ಭಾಸ್ಕರ್…

ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಅವ್ಯವಹಾರದ ಕುರಿತು ಚರ್ಚೆಗೆ ಹೈಕೋರ್ಟ್ ಪೀಠ ಒಪ್ಪಿಗೆ

ಬಳ್ಳಾರಿ ಸೆ.26,ಸ್ಥಳೀಯ ಜಿಲ್ಲಾ ಮತ್ತು ಕೈಗಾರಿಕಾ ಸಂಸ್ಥೆ”ಯ ವಿರುದ್ಧದ ಅವ್ಯವಹಾರ ಕುರಿತು ಚರ್ಚಿಸಲು ಧಾರವಾಡದ ಕರ್ನಾಟಕ ಹೈಕೋರ್ಟ್ ಪೀಠವು ಒಪ್ಪಿಗೆ ಸೂಚಿಸಿದೆ ಎಂದು ವಾಣಿಜ್ಯೋದ್ಯಮಿ ಹಾಗೂ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಆಜೀವ ಸದಸ್ಯರಾದ ಪಿ.ಎನ್.ಸುರೇಶ್ ಅವರು ತಿಳಿಸಿದ್ದಾರೆ.ಈ ಕುರಿತು…

ಜಿಲ್ಲೆಯಲ್ಲಿ ರೂ.12 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಸೆ.26ಜಿಲ್ಲೆಯಲ್ಲಿ 22 ವರ್ಷದಿಂದ ಬೇಡಿಕೆಯಾಗಿಯೇ ಉಳಿದಿದ್ದ, ಗುರುಭವನ ಕಟ್ಟಡವನ್ನು ಡಿಎಂಎಫ್ ಅನುದಾನದಲ್ಲಿ ರೂ.12 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಅಸ್ತು ನೀಡಿದರು.ಜಿಲ್ಲಾಡಳಿತ, ಜಿಲ್ಲಾ…

ಆಯುಷ್ಮಾನ್ ಭವ ಆರೋಗ್ಯ ಮೇಳದ ಲಾಭ ಪಡೆದ. 11237 ರೋಗಿಗಳು

ಆಯುಷ್ಮಾನ ಭವ ಆರೋಗ್ಯ ಮೇಳದ ಲಾಭ ಪಡೆದ 11237 ರೋಗಿಗಳು ಬೀದರ. ಜಿಲ್ಲೆಯಲ್ಲಿ ಆಯುಷ್ಮಾನ್ ಭವ: ಆರೋಗ್ಯ ಕಾರ್ಯಕ್ರಮವನ್ನು 17 ಸೆಪ್ಟೆಂಬರ್ 2023 ರಿಂದ 02 ಅಕ್ಟೋಬರ್ 2023 ರವರೆಗೆ ಆಯೋಜಿಸಲಾಗಿದೆ. ಆಯುಷ್ಮಾನ್ ಭವ: ಆರೋಗ್ಯ ಕಾರ್ಯಕ್ರಮವು 3 ಹಂತದಲ್ಲಿ ಆಯೋಜಿಸಲಾಗಿದ್ದು.…

ಕ.ವಿ.ಪ್ರ.ನಿ.ನೌಕರರ ಪತ್ತಿನ ಸಹಕಾರ ಸಂಘದ 40ನೇ ವಾರ್ಷಿಕ ಮಹಾಭೆ

ಬೀದರ ನಗರದ ಚಿದ್ರಿ ರಸ್ತೆಯಲ್ಲಿರುವ ಕ.ವಿ.ಪ್ರ.ನಿ ನೌಕರರ ಸಭಾ ಭವನದಲ್ಲಿ ಸೆ.17 ರಂದು ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನೌಕರರ ಪತ್ತಿನ ಸಹಕಾರ ಸಂಘ/ಜೇಸ್ಕA ನೌಕರರ ಪತ್ತಿನ ಸಹಕಾರ ಸಂಘದ 40ನೇ ವಾರ್ಷಿಕ ಮಹಾಸಭೆಯು ಜರುಗಿತ್ತು.ಸಭೆಯ ಅಧ್ಯಕ್ಷತೆ ಕ.ವಿ.ಪ್ರ.ನಿ./ಜೇಸ್ಕಂ ನೌಕರರ ಪತ್ತಿನ…